ಅತ್ತ ಗ್ಯಾಸ್ಗಾಗಿ ಆಟೋ ಚಾಲಕರ ಪರದಾಟ: ಇತ್ತ ಐಪಿಎಲ್ ಟಿಕೆಟ್ಗಾಗಿ ಕ್ಯೂನಿಂತ ಶಾಸಕರ ಪಿಎಗಳು
ಬೆಂಗಳೂರು, ಏಪ್ರಿಲ್ 04: ಗಲ್ಫ್ ರಾಷ್ಟ್ರದ ಯುದ್ಧದಿಂದ ಜನರು ಸಮಸ್ಯೆ ಅನುಭವಿಸುತ್ತಿದ್ದಾರೆ. ಇತ್ತ ಗ್ಯಾಸ್ ಗಾಗಿ ಬಂಕ್ಗಳ ಮುಂದೆ ಆಟೋ ಚಾಲಕರು ಕ್ಯೂನಿಂತಿದ್ದಾರೆ. ಈ ಮಧ್ಯೆ ವಿಧಾನಸೌಧದಲ್ಲಿ ಐಪಿಎಲ್ ಟಿಕೆಟ್ಗಾಗಿ ಶಾಸಕರ ಪಿಎಗಳು ಕ್ಯೂನಿಂತಿದ್ದಾರೆ. ನಾಳೆ ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆರ್ಸಿಬಿ ಮತ್ತು ಸಿಎಸ್ಕೆ ನಡುವೆ ಪಂದ್ಯ ನಡೆಯಲಿದೆ. ಹೀಗಾಗಿ ವಿಧಾನಸೌಧದ ಸ್ಪೀಕರ್ ಆಪ್ತ ಕಾರ್ಯದರ್ಶಿ ಮಹೇಶ್ ಕರ್ಜಗಿ ಕೊಠಡಿಯಲ್ಲಿ ಪ್ರತಿಯೊಬ್ಬ ಶಾಸಕರಿಗೆ ತಲಾ 3 ಐಪಿಎಲ್ ಟಿಕೆಟ್ ವಿತರಿಸಲಾಯಿತು. ಸರತಿಸಾಲಿನಲ್ಲಿ ನಿಂತು ಶಾಸಕರ ಪಿಎಗಳು ಟಿಕೆಟ್ಗಾಗಿದ್ದಾರೆ. ವರದಿ:…