ಓವಲ್ನಲ್ಲಿ ಗೆದ್ದು ಬೀಗಿದ ಟೀಂ ಇಂಡಿಯಾ; ಕೊನೆಗೂ ಸಿರಾಜ್ಗೆ ಅಭಿನಂದನೆ ಸಲ್ಲಿಸಲು ಮರೆಯದ ಜಯ್ ಶಾ!
<p>ಮುಂಬೈ: ಇಂಗ್ಲೆಂಡ್ ವಿರುದ್ಧದ ಓವಲ್ ಟೆಸ್ಟ್ನಲ್ಲಿ ಆರು ರನ್ಗಳ ರೋಚಕ ಜಯದೊಂದಿಗೆ ಭಾರತ ಟೆಸ್ಟ್ ಸರಣಿಯನ್ನು ಸಮಬಲಗೊಳಿಸಿದ ನಂತರ, ಐಸಿಸಿ ಅಧ್ಯಕ್ಷ ಜಯ್ ಶಾ ಭಾರತ ತಂಡವನ್ನು ಅಭಿನಂದಿಸಿದ್ದಾರೆ. ಓವಲ್ ಟೆಸ್ಟ್ನಲ್ಲಿ ಅದ್ಭುತ ಬೌಲಿಂಗ್ನೊಂದಿಗೆ ಒಂಬತ್ತು ವಿಕೆಟ್ ಪಡೆದು ಭಾರತದ ಗೆಲುವಿನಲ್ಲಿ ನಿರ್ಣಾಯಕ ಪಾತ್ರ ವಹಿಸಿದ ಮತ್ತು ಸರಣಿಯಲ್ಲಿ ಗರಿಷ್ಠ ವಿಕೆಟ್ ಕಬಳಿಸಿದ ವೇಗದ ಬೌಲರ್ ಮೊಹಮ್ಮದ್ ಸಿರಾಜ್ ಅವರನ್ನು ಈ ಬಾರಿ ಜಯ್ ಶಾ ಶ್ಲಾಘಿಸುವುದನ್ನು ಮರೆತಿಲ್ಲ ಎಂಬುದು ಗಮನಾರ್ಹ. ಎಜ್ಬಾಸ್ಟನ್ ಟೆಸ್ಟ್ನಲ್ಲಿ ಭಾರತ ಇಂಗ್ಲೆಂಡ್…