ಅಜಯ್‌ ರಾವ್‌ ಹೊಸ ಫ್ಯಾಮಿಲಿ ಥ್ರಿಲ್ಲರ್‌ ಚಿತ್ರಕ್ಕೆ ಮುಹೂರ್ತ: ಬಾಹುಬಲಿ ನಿರ್ದೇಶನ

ಅಜಯ್‌ ರಾವ್‌ ಹೊಸ ಫ್ಯಾಮಿಲಿ ಥ್ರಿಲ್ಲರ್‌ ಚಿತ್ರಕ್ಕೆ ಮುಹೂರ್ತ: ಬಾಹುಬಲಿ ನಿರ್ದೇಶನ




<p>ಇನ್ನೂ ಹೆಸರಿಡದ ಅಜಯ್‌ ರಾವ್‌ ನಾಯಕನಾಗಿ ನಟಿಸುತ್ತಿರುವ ಚಿತ್ರಕ್ಕೆ ಮುಹೂರ್ತ ಆಗಿದೆ. ಯೋಗರಾಜ್‌ ಭಟ್‌ ಹಾಗೂ ದಿನಕರ್‌ ತೂಗುದೀಪ ಚಿತ್ರಕ್ಕೆ ಚಾಲನೆ ನೀಡಿದರು.</p><img><p>‘ಇದೊಂದು ಫ್ಯಾಮಿಲಿ ಥ್ರಿಲ್ಲರ್ ಸಿನಿಮಾ. ಅಜಯ್‌ ರಾವ್‌ ಅವರನ್ನು ನೀವು ಇದುವರೆಗೂ ನೋಡದಿರುವ ಪಾತ್ರದಲ್ಲಿ ನೋಡುತ್ತೀರಿ. ಘಟನೆಯೊಂದನ್ನು ಸ್ಫೂರ್ತಿಯಾಗಿ ತೆಗೆದುಕೊಂಡು ಈ ಚಿತ್ರಕ್ಕೆ ಸ್ಕ್ರಿಪ್ಟ್ ಮಾಡಿದ್ದೇನೆ. ನಾಲ್ಕೈದು ಶೇಡ್‌ಗಳು ಈ ಚಿತ್ರದಲ್ಲಿವೆ.’ ಹೀಗೆ ಹೇಳಿದ್ದು ನಿರ್ದೇಶಕ ಎಸ್‌ ಕೆ ಬಾಹುಬಲಿ.</p><img><p>ಇನ್ನೂ ಹೆಸರಿಡದ ಅಜಯ್‌ ರಾವ್‌ ನಾಯಕನಾಗಿ ನಟಿಸುತ್ತಿರುವ ಚಿತ್ರಕ್ಕೆ ಮುಹೂರ್ತ ಆಗಿದೆ. ಯೋಗರಾಜ್‌ ಭಟ್‌ ಹಾಗೂ ದಿನಕರ್‌ ತೂಗುದೀಪ ಚಿತ್ರಕ್ಕೆ ಚಾಲನೆ ನೀಡಿದರು. ಮಲೈಕಾ ಟಿ ವಸುಪಾಲ್‌ ಚಿತ್ರದ ನಾಯಕಿ. ನಿರ್ದೇಶಕ ಯೋಗರಾಜ್‌ ಭಟ್‌ ಚಿತ್ರಕ್ಕೆ ಸಂಭಾ‍ಷಣೆ ಬರೆದಿದ್ದಾರೆ.</p><img><p>ಅಜಯ್‌ ರಾವ್‌, ಫಿಟ್‌ನೆಸ್ ಬಗ್ಗೆ ಏನೋ ಒಂದು ಸಾಧನೆ ಮಾಡಬೇಕೆಂದು ಹೊರಟ ವ್ಯಕ್ತಿಯೊಬ್ಬ ಏನೆಲ್ಲಾ ಸಮಸ್ಯೆಗಳನ್ನು ಎದುರಿಸುತ್ತಾನೆ ಎಂಬುದು ಚಿತ್ರದ ಕತೆ. ಬಾಹುಬಲಿ ಹೇಳಿದ ಕಥೆಯನ್ನು ಕೇಳಿದೆ.</p><img><p>ಆಗ ತುಂಬಾನೆ ಇಷ್ಟ ಆಯಿತು. ಈ ಒಂದು ಕಥೆ ತುಂಬಾನೆ ಚೆನ್ನಾಗಿದೆ. ಈ ಕಥೆಗೆ ಒಂದು ಶಕ್ತಿ ಇದೆ. ದೊಡ್ಡಮಟ್ಟದಲ್ಲಿಯೇ ಈ ಒಂದು ಚಿತ್ರ ಹೋಗುತ್ತದೆ. ಬೇರೆ ಭಾಷೆಯವರೂ ತಾವಾಗಿಯೇ ಈ ಚಿತ್ರವನ್ನ ನಮ್ಮಲ್ಲಿ ರಿಲೀಸ್ ಮಾಡಿ ಅಂತ ಹೇಳ್ಬೇಕು. ಆ ರೀತಿನೇ ಈ ಕಥೆ ಇದೆ ಎಂದರು.</p><img><p>ಕಿರಣ್‌ ಚಿತ್ರದ ನಿರ್ಮಾಪಕರು. ಸುಜ್ಞಾನ್‌ ಕ್ಯಾಮೆರಾ, ಅರ್ಜುನ್‌ ಜನ್ಯ ಸಂಗೀತ ಇದೆ. ನಿರ್ದೇಶಕರಾದ ಎಂ.ಡಿ. ಶ್ರೀಧರ್‌, ಎಸ್‌. ನಾರಾಯಣ್‌, ಶಿವತೇಜಸ್‌ ಹಾಜರಿದ್ದರು.</p>



Source link

Leave a Reply

Your email address will not be published. Required fields are marked *