ಬೆಂಗಳೂರು ಕಾಲ್ತುಳಿತ: ಪೊಲೀಸರನ್ನ ಸಸ್ಪೆಂಡ್ ಮಾಡಿದ್ದಕ್ಕೆ ಸಿಎಂ ಬೇಸರ…ಸಭೆ ಇನ್ಸೈಡ್ ಡಿಟೇಲ್ಸ್
ಪೊಲೀಸ್ ಇಲಾಖೆಯೊಂದಿಗೆ ಸಿಎಂ ಸಿದ್ದಾರಾಮಯ್ಯ ಸಭೆ ಬೆಂಗಳೂರು, ಜೂನ್ 27: ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಅವರು ಶುಕ್ರವಾರ (ಜೂ.27) ಪೊಲೀಸ್ ಇಲಾಖೆಯ ಪ್ರಗತಿ ಪರಿಶೀಲನಾ ಸಭೆ (Police Department) ನಡೆಸಿದರು. ಸಭೆಯಲ್ಲಿ ಚಿನ್ನಸ್ವಾಮಿ ಕ್ರೀಡಾಂಗಣದ ಹೊರಗಡೆ ಸಂಭವಿಸಿದ ಕಾಲ್ತುಳಿತವನ್ನು ಪ್ರಸ್ತಾಪಿಸಿ, ಅಂದು ಪೊಲೀಸರು ನಡೆದುಕೊಂಡ ಕ್ರಮದ ಬಗ್ಗೆ ಬೇಸರ ವ್ಯಕ್ತಪಡಿಸಿದರು. ಕಾಲ್ತುಳಿತ ದಿನ ಮಧ್ಯಾಹ್ನ 3.50ಕ್ಕೆ ಸಾವುಗಳು ಸಂಭವಿಸಿದವು. ಆದರೂ ಸರಿಯಾದ ಮಾಹಿತಿ ನನಗೆ (ಸಿದ್ದರಾಮಯ್ಯ) ಕೊಟ್ಟಿರಲಿಲ್ಲ, ಇದು ತಪ್ಪಲ್ವಾ? ಸಂಜೆ 5:45ಕ್ಕೆ ನಾನಾಗೇ ಕೇಳಿದಾಗ ಒಂದೇ…