ಹಿರಿಮೆ ನೋಡು ನಮ್ಮ ನಾಡು,
ನುಡಿ ಗರಿಮೆಯ ಆಸ್ವಾದಿಸಿ ಹಾಡು,
ಓ ಒಡನಾಡಿ ಕಣ್ಮಣಿ
ಕರುನಾಡ ಮಡಿಲಲ್ಲೇ,
ಸೇವೆ ಮಾಡಿ ನೋಡು.!
ನಾಡ ತುಂಬಾ ಸಂಪತ್ತು,
ಮಧುರ ನುಡಿ ನಮ್ಮ ಸ್ವತ್ತು,
ಹಿಂಜರಿಯದೇ ಮುಂದಾಗು,
ಸಿರಿನಾಡ ಒಳಿತಿಗೆ ಭೇದ ಮರೆತು ಒಂದಾಗು.!
ನಾಡಿಗಾಗಿ ಸವೆದು ಹೋದ,
ಮಡಿಲಲ್ಲೇ ಮಡಿದು ಹೋದ,
ಕವಿ-ಸಾಹಿತಿ ಸತ್ಪುರುಷರ,
ಗುಣಗಾನದ ಹೂಗುಚ್ಛ ಪರಿಮಳವು ಬೀರುತಿದೆ.!
ನಾಡ ಸಂಸ್ಕೃತಿಗೆ ನಮಿಸುತ್ತಾ,
ಕನ್ನಡಾಂಬೆ ಪಾದಚರಣ
ಸವಿಜೇನಿನ ಹೂರಣ,
ನಾಡ ಹಿರಿಮೆ
ಗುಣಗಾನಕೆ,
ಸಮರ್ಪಿಸು ಹೂಗುಚ್ಛ.!
✍️ _ಬರಹ_
*ಕೆವಿನ್ ಪಾವಗಡ* ಶಿಕ್ಷಕ-ಸಾಹಿತಿ ಹಾಗೂ ತಾಲ್ಲೂಕು ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರು.