Headlines

ರಶ್ಮಿಕಾ ಮಂದಣ್ಣ ಈಗ ನ್ಯಾಶನಲ್‌ ಕ್ರಶ್‌ ಅಲ್ಲ, ನಾಗ್‌ ಕ್ರಶ್‌, 40 ವರ್ಷ ನಂಗೆ ಯಾರೂ ಸರಿಸಾಟಿ ಇಲ್ಲ: Nagarjuna | Telugu Actor Nagarjuna Counters Trolls Claims Another 40 Years Of Reign At Kubera Success Event

ರಶ್ಮಿಕಾ ಮಂದಣ್ಣ ಈಗ ನ್ಯಾಶನಲ್‌ ಕ್ರಶ್‌ ಅಲ್ಲ, ನಾಗ್‌ ಕ್ರಶ್‌, 40 ವರ್ಷ ನಂಗೆ ಯಾರೂ ಸರಿಸಾಟಿ ಇಲ್ಲ: Nagarjuna | Telugu Actor Nagarjuna Counters Trolls Claims Another 40 Years Of Reign At Kubera Success Event



`ಕುಬೇರ` ಚಿತ್ರದಲ್ಲಿ ತಮ್ಮ ಪಾತ್ರದ ಬಗ್ಗೆ ನಾಗಾರ್ಜುನ ಮಾಡಿದ್ದ ಕಾಮೆಂಟ್ಸ್ ಟ್ರೋಲ್ಸ್‌ಗೆ ಗುರಿಯಾಗಿದ್ದಕ್ಕೆ ಸ್ಪಷ್ಟನೆ ನೀಡಿದ್ದಾರೆ. `ಕುಬೇರ` ಸಕ್ಸಸ್‌ ಈವೆಂಟ್‌ನಲ್ಲಿ ಆಸಕ್ತಿಕರ ಹೇಳಿಕೆ ನೀಡಿದ್ದಾರೆ. 

ಕಿಂಗ್ ನಾಗಾರ್ಜುನ ತಮ್ಮನ್ನು ತಾವು ಬದಲಾಯಿಸಿಕೊಳ್ಳುತ್ತಿದ್ದಾರೆ. ನಟನಾಗಿ ಹೊಸತನಕ್ಕೆ ಮುಂದಾಗಿದ್ದಾರೆ. ಈ ನಿಟ್ಟಿನಲ್ಲಿ `ಕುಬೇರ` ಚಿತ್ರದಲ್ಲಿ ನಟಿಸಿದ್ದಾರೆ. ಧನುಷ್ ಜೊತೆ ನಟಿಸಿರುವುದು ವಿಶೇಷ. ಹೀಗಿರುವಾಗ ಟ್ರೋಲ್ಸ್‌ ಕೂಡ ಜೋರಾಗಿತ್ತು. ಇದಕ್ಕೆ ನಾಗಾರ್ಜುನ ಉತ್ತರ ಕೊಟ್ಟಿದ್ದಾರೆ.

ಶೇಖರ್ ಕಮ್ಮುಲ ನಿರ್ದೇಶನದ, ರಶ್ಮಿಕಾ ಮಂದಣ್ಣ ನಾಯಕಿಯಾಗಿ ನಟಿಸಿರುವ ಈ ಸಿನಿಮಾ ಶುಕ್ರವಾರ ತೆರೆಕಂಡಿದೆ. ಸಿನಿಮಾಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದ್ದು, ಚಿತ್ರತಂಡ ಭಾನುವಾರ ಸಕ್ಸಸ್ ಮೀಟ್ ಆಯೋಜಿಸಿತ್ತು. ಇದಕ್ಕೆ ಮೆಗಾಸ್ಟಾರ್ ಚಿರಂಜೀವಿ ಅತಿಥಿಯಾಗಿ ಆಗಮಿಸಿದ್ದರು. 

ನಟ ನಾಗಾರ್ಜುನ ಮಾತನಾಡಿ, ಆಸಕ್ತಿಕರ ವಿಷಯಗಳನ್ನು ಹಂಚಿಕೊಂಡರು. ಟ್ರೋಲ್ಸ್‌ಗೆ ತಿರುಗೇಟು ನೀಡಿದರು. ಶನಿವಾರದ ಪ್ರೆಸ್‌ ಮೀಟ್‌ನಲ್ಲಿ ತಮ್ಮದೇ ಮುಖ್ಯ ಪಾತ್ರ ಎಂದು ಹೇಳಿದ್ದರು. ದೀಪಕ್ ಪಾತ್ರದ ಸುತ್ತಲೇ ಉಳಿದ ಪಾತ್ರಗಳು, ಕಥೆ ಸುತ್ತುತ್ತದೆ ಎಂದಿದ್ದರು. ಮೂರು ಶೇಡ್ಸ್‌ಗಳಿವೆ ಎಂದಿದ್ದರು. ಧನುಷ್ ಪಾತ್ರ ಪ್ಲಾಟ್‌ನಂತಿದೆ ಎಂದಿದ್ದರು. ಇದು ಟ್ರೋಲ್‌ಗೆ ಕಾರಣವಾಯಿತು. 

ನಾಗಾರ್ಜುನ ಮಾತನಾಡಿ, “ಪ್ರೆಸ್‌ ಮೀಟ್‌ನಲ್ಲಿ ದೀಪಕ್ ಪಾತ್ರ ಮುಖ್ಯ ಎಂದಿದ್ದೆ. ಕಥೆಗೆ, ಎಲ್ಲ ಪಾತ್ರಗಳಿಗೆ ಕೀಲಕ ಪಾಯಿಂಟ್ ಎಂದಿದ್ದೆ. ಈ ಸಿನಿಮಾ ನನ್ನ ಸಿನಿಮಾ ಅಲ್ಲವೇ ಎಂದು ಹೇಳಿದ್ದೆ. ಆದರೆ ಇದನ್ನು ಟ್ರೋಲ್ ಮಾಡಿದರು. ಸೋಶಿಯಲ್‌ ಮೀಡಿಯಾದಲ್ಲಿ ವೈರಲ್ ಮಾಡಿದರು. ರಿಲೀಸ್‌ಗೆ ಮುನ್ನ ಶೇಖರ್ ಕಮ್ಮುಲ ಸಿನಿಮಾ ಎನ್ನುತ್ತಿದ್ದರು, ರಿಲೀಸ್ ನಂತರ ತಮ್ಮ ಸಿನಿಮಾ ಎನ್ನುತ್ತಿದ್ದಾರೆ ಎಂದು ಗದ್ದಲ ಮಾಡುತ್ತಿದ್ದಾರೆ. ಮತ್ತೆ ಹೇಳುತ್ತಿದ್ದೇನೆ, ಈ ಸಿನಿಮಾ ದೇವಾ, ದೀಪಕ್, ಸಮೀರಾ, ಖುಷ್ಬೂ, ಹೀಗೆ ಎಲ್ಲರ ಸಿನಿಮಾವಿದು” ಎಂದಿದ್ದಾರೆ. ಇದು ಶೇಖರ್ ಕಮ್ಮುಲ ಸಿನಿಮಾ ಎಂದರು ನಾಗಾರ್ಜುನ. 

“ಸಿನಿಮಾ ರಿಲೀಸ್ ಆದ ನಂತರ ರಿವ್ಯೂಗಳಲ್ಲಿ ನನ್ನ ನಟನೆಯ ಬಗ್ಗೆ ಬರೆದರು. ಆಗ ಚೆನ್ನಾಗಿ ಮಾಡಿದ್ದೇನೆ ಎನಿಸಿತು. ಸಂತೋಷವಾಯಿತು. ನಂತರ ಚೆನ್ನೈನಲ್ಲಿ ಸಿನಿಮಾ ನೋಡಿ ಶೇಖರ್ ಕಮ್ಮುಲ ಕಳುಹಿಸಿದ್ದ ಸಂದೇಶದಿಂದ ನಂಬಿಕೆ ಹೆಚ್ಚಿತು. ಸಿನಿಮಾ ಹೇಗಿದೆ ಎಂದು ದೇವಿಶ್ರೀ ಪ್ರಸಾದ್ ಅವರನ್ನು ಕೇಳಿದೆ. ಅವರು ನೀಡಿದ ಪ್ರತಿಕ್ರಿಯೆಗೆ ಖುಷಿಯಾಯಿತು. ರಶ್ಮಿಕಾ ಕೂಡ ಫೆಂಟಾಸ್ಟಿಕ್ ಎಂದರು. ಚಿರಂಜೀವಿ ಕಾರಿನಲ್ಲಿ ಬರುವಾಗ ನಾಗ್ ಚೆನ್ನಾಗಿ ಮಾಡಿದ್ದೀಯಾ, ದೀಪಕ್ ಆಗಿ ಅದ್ಭುತವಾಗಿ ನಟಿಸಿದ್ದೀಯಾ ಎಂದರು. ಹೀಗಾಗಿ ನಾನು ಕೂಡ ಚೆನ್ನಾಗಿ, ಹೊಸತಾಗಿ ಮಾಡಿದ್ದೇನೆ ಎನಿಸಿತು” ಎಂದರು ನಾಗಾರ್ಜುನ

ಇಷ್ಟು ಜನ ಹೇಳಿದ ಮೇಲೆ ಶೇಖರ್ ಕಮ್ಮುಲ ಅವರ ನಿರ್ದೇಶನದ ಮಹತ್ವ ಏನೆಂದು ಅರ್ಥವಾಯಿತು ಎಂದರು. ಧನುಷ್ ಬಗ್ಗೆಯೂ ಮೆಚ್ಚುಗೆ ವ್ಯಕ್ತಪಡಿಸಿದರು. ಸಿನಿಮಾ ಮುಗಿಯುವವರೆಗೂ ಕೈ ಕೆಲಸ ಮಾಡದ ರೀತಿಯಲ್ಲಿ ನಟಿಸಿದ್ದಾರೆ. ಹಾಗೆ ಮಾಡುವುದು ಸುಲಭವಲ್ಲ ಎಂದರು. ಸೆಟ್‌ನಲ್ಲಿ ಧನುಷ್‌ರನ್ನು ಗುರುತಿಸಲು ಸಾಧ್ಯವಾಗಲಿಲ್ಲ, ಪಾತ್ರದಲ್ಲಿ ಒಂದಾಗಿದ್ದರು ಎಂದರು.

ಇನ್ನೂ 40 ವರ್ಷ ನನಗೆ ಯಾರು ಸರಿಸಾಟಿ ಇಲ್ಲ

ರಶ್ಮಿಕಾ ಬಗ್ಗೆಯೂ ಮೆಚ್ಚುಗೆ ವ್ಯಕ್ತಪಡಿಸಿದ ನಾಗ್, ಈ ಚಿತ್ರದಲ್ಲಿ ಅವರನ್ನು ನೋಡುತ್ತಿದ್ದರೆ `ಕ್ಷಣಕ್ಷಣಂ` ಚಿತ್ರದ ಶ್ರೀದೇವಿ ನೆನಪಾದರು ಎಂದರು. ಅವರು ನೇಷನಲ್ ಕ್ರಶ್ ಮಾತ್ರವಲ್ಲ, ಈಗ ನಾಗ್ ಕ್ರಶ್ ಕೂಡ ಎಂದು ನಾಗಾರ್ಜುನ ಹೇಳಿದ್ದು ವಿಶೇಷ. “ಈ ಸಿನಿಮಾದಿಂದ ಹೊಸ ಬಾಗಿಲು ತೆರೆದಿದೆ, ಹೊಸ ಲೋಕ ತೆರೆದಿದೆ ಎಂದರು. `ಶೇಖರ್ ನಿಮಗೆ ಗೊತ್ತಿಲ್ಲ, ಇದರಿಂದ ನನ್ನ ಪ್ರಪಂಚ ತೆರೆದಿದೆ. ಯಾವ ರೀತಿಯ ಪಾತ್ರಗಳು ಮಾಡಬಹುದು ಎಂದು ತಿಳಿದಿದೆ. ಇನ್ಮುಂದೆ ಚೆನ್ನಾಗಿ ಪಾತ್ರಗಳು ಬರುತ್ತವೆ. ಇನ್ನೂ ನಲವತ್ತು ವರ್ಷ ನನಗೆ ಯಾರು ಸರಿಸಾಟಿ ಇಲ್ಲ” ಎಂದರು ನಾಗಾರ್ಜುನ. 

 



Source link

Leave a Reply

Your email address will not be published. Required fields are marked *