ರಾಜಣ್ಣರ ಸೆಪ್ಟಂಬರ್ ಕ್ರಾಂತಿ ಹೇಳಿಕೆ ವಿಷಯದಲ್ಲಿ ಪ್ರತಿಕ್ರಿಯೆ ನೀಡಲಾರೆ, ಅವರು ದೊಡ್ಡೋರು: ವಿಜಯಾನಂದ ಕಾಶಪ್ಪನವರ್

ರಾಜಣ್ಣರ ಸೆಪ್ಟಂಬರ್ ಕ್ರಾಂತಿ ಹೇಳಿಕೆ ವಿಷಯದಲ್ಲಿ ಪ್ರತಿಕ್ರಿಯೆ ನೀಡಲಾರೆ, ಅವರು ದೊಡ್ಡೋರು: ವಿಜಯಾನಂದ ಕಾಶಪ್ಪನವರ್


ಬೆಂಗಳೂರು, ಜೂನ್ 28: ನಗರದಲ್ಲಿಂದು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ಹುನುಗುಂದ ಶಾಸಕ ವಿಜಯಾನಂದ ಕಾಶಪ್ಪನವರ್, ಸಹಕಾರ ಸಚಿವ ಕೆಎನ್ ರಾಜಣ್ಣ (KN Rajanna) ಅವರ ಸೆಪ್ಟಂಬರ್ ಕ್ರಾಂತಿ ಹೇಳಿಕೆಯ ಬಗ್ಗೆ ಪ್ರತಿಕ್ರಿಯೆ ನೀಡುವ ಗೋಜಿಗೆ ಹೋಗಲಿಲ್ಲ. ಅವರು ಹಿರಿಯರು, ಅವರ ಹೇಳಿಕೆಗೆ ಪ್ರತಿಕ್ರಿಯೆ ನೀಡಲಾರೆ, ನಾನೊಂದು ಜವಾಬ್ದಾರಿಯುತ ಸ್ಥಾನದಲ್ಲಿರುವವನು ಮತ್ತು ನನ್ನ ಕುಟುಂಬ ಸುಮಾರು 50 ವರ್ಷಗಳಿಂದ ರಾಜಕಾರಣದಲ್ಲಿದೆ, ಬದಲಾಣೆಯ ಬಗ್ಗೆ ಊಹಾಪೋಹಗಳು ಎಲ್ಲಿಂದ ಹುಟ್ಟಿದವು ಯಾಕೆ ಹುಟ್ಟಿದವು ಅಂತೆಲ್ಲ ಗೊತ್ತಿದೆ, ಬದಲಾವಣೆ ಆಗಬೇಕಾದರೆ ಅದನ್ನು ಹೈಕಮಾಂಡ್ ಮಾಡುತ್ತದೆ, ಮಲ್ಲಿಕಾರ್ಜುನ ಖರ್ಗೆ ಮತ್ತು ರಾಜೀವ್ ಗಾಂಧಿ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಾರೆ ಎಂದು ಕಾಶಪ್ಪನವರ್ ಹೇಳಿದರು.

ಇದನ್ನೂ ಓದಿ:  ಬಿಜೆಪಿ ಮತ್ತು ಜೆಡಿಎಸ್ ಶಾಸಕರು ಕಾಂಗ್ರೆಸ್ ಸೇರಬಹುದಾದ ಸಾಧ್ಯತೆಯನ್ನೇ ರಾಜಣ್ಣ ಕ್ರಾಂತಿ ಎಂದಿರಬಹುದು: ಪಾಟೀಲ್

ವಿಡಿಯೋ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ



Source link

Leave a Reply

Your email address will not be published. Required fields are marked *