ಸಚಿವ ಕೃಷ್ಣಭೈರೇಗೌಡ ಸಭೆಯಲ್ಲಿ ರೀಲ್ಸ್ ನೋಡುತ್ತಾ ಕುಳಿತ ಅಧಿಕಾರಿಗಳು..!

ಸಚಿವ ಕೃಷ್ಣಭೈರೇಗೌಡ ಸಭೆಯಲ್ಲಿ ರೀಲ್ಸ್ ನೋಡುತ್ತಾ ಕುಳಿತ ಅಧಿಕಾರಿಗಳು..!


ತುಮಕೂರು, (ಜೂನ್ 23): ಕಂದಾಯ ಸಚಿವ ಕೃಷ್ಣ ಭೈರೇಗೌಡ ಅವರು ಇಂದು (ಜೂನ್ 23) ತುಮಕೂರಿನಲ್ಲಿ ಪ್ರಗತಿ ಪರಿಶೀಲನಾ ಸಭೆ ನಡೆಸಿದ್ದು, ತಹಶೀಲ್ದಾರ್​ ಗಳಿಗೆ ಕ್ಲಾಸ್ ತೆಗೆದುಕೊಂಡರು. ಬಾಕಿ ಉಳಿದ ಕೆಲಸಗಳ ಪೂರ್ಣಗೊಳಿಸೋದು ಯಾವಾಗ ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ. ಆದ್ರೆ, ಕೆಲ ಅಧಿಕಾರಿಗಳು ಸಭೆಯಲ್ಲೇ ಮೊಬೈಲ್​ ​ನಲ್ಲಿ ಬ್ಯುಸಿಯಾಗಿರುವುದು ಕಂಡುಬಂದಿದೆ. ಸಚಿವರ ಮಾತಿಗೆ ಕಿವಿಗೊಡದೆ ಅಧಿಕಾರಿಗಳು ಮೊಬೈಲ್​​ ನಲ್ಲಿ ಫೇಸ್ಬುಕ್, ರೀಲ್ಸ್​ ನೋಡುತ್ತಾ ಕುಳಿತ್ತಿದ್ದಾರೆ. ಹಾಗಾದ್ರೆ, ಸಚಿವರ ಸಭೆ ಕಿಮ್ಮತ್ತೇ ಇಲ್ವಾ ಎನ್ನುವ ಪ್ರಶ್ನೆಗಳು ಉದ್ಭವಿಸಿವೆ. ಈ ರೀತಿಯ ಅಧಿಕಾರಿಗಳ ವರ್ತನೆಗೆ ಬ್ರೇಕ್ ಬೀಳಬೇಕಿದೆ.



Source link

Leave a Reply

Your email address will not be published. Required fields are marked *