Headlines

ಸರ್ಕಾರದ ವಿರುದ್ಧವೇ ಸಿಡಿದ ‘ಕೈ’ ಶಾಸಕರ ಬಾಯಿ ಮುಚ್ಚಿಸಿ; ಸಿಎಂಗೆ ಹೈಕಮಾಂಡ್ ತಾಕೀತು | Karnataka Poltics Latest news Today | Karnataka Congress Controversy High Command Warns Raju Kage Br Patil For Criticizing The State Government Rav

ಸರ್ಕಾರದ ವಿರುದ್ಧವೇ ಸಿಡಿದ ‘ಕೈ’ ಶಾಸಕರ ಬಾಯಿ ಮುಚ್ಚಿಸಿ; ಸಿಎಂಗೆ ಹೈಕಮಾಂಡ್ ತಾಕೀತು | Karnataka Poltics Latest news Today | Karnataka Congress Controversy High Command Warns Raju Kage Br Patil For Criticizing The State Government Rav



ಸರ್ಕಾರದ ವಿರುದ್ಧ ಲಂಚದ ಆರೋಪ ಮತ್ತು ಅಸಮಾಧಾನ ಹೊರಹಾಕುತ್ತಿರುವ ಕಾಂಗ್ರೆಸ್ ಶಾಸಕರಿಗೆ ಹೈಕಮಾಂಡ್ ಖಡಕ್ ಸೂಚನೆ ನೀಡಿದೆ. ಸಮಸ್ಯೆಗಳಿದ್ದರೆ ಮುಖ್ಯಮಂತ್ರಿ ಮತ್ತು ಪಕ್ಷದ ಅಧ್ಯಕ್ಷರನ್ನು ಭೇಟಿಯಾಗಿ ಚರ್ಚಿಸಿ ಬಗೆಹರಿಸಿಕೊಳ್ಳುವಂತೆ ಸೂಚಿಸಲಾಗಿದೆ.

ಬೆಂಗಳೂರು (ಜೂ.25): ವಿವಿಧ ಇಲಾಖೆಗಳ ವಿರುದ್ಧ ಲಂಚದ ಆರೋಪ, ಸಚಿವರ ಕಾರ್ಯವೈಖರಿ ಬಗ್ಗೆ ಬಹಿರಂಗ ಅಸಮಾಧಾನ ಹಾಗೂ ಅನುದಾನಕ್ಕಾಗಿ ಬೇಡಿಕೆ ಇಟ್ಟು ರಾಜ್ಯ ಸರ್ಕಾರವನ್ನು ಮುಜುಗರಕ್ಕೆ ಒಳಪಡಿಸುತ್ತಿರುವ ಸ್ವಪಕ್ಷೀಯ ಶಾಸಕರಿಗೆ ಸ್ಪಷ್ಟ ಸೂಚನೆ ನೀಡುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಹೈಕಮಾಂಡ್‌ ಸೂಚಿಸಿದೆ.

ಶಾಸಕರ ಸಮಸ್ಯೆಗಳು ಏನೇ ಇದ್ದರೂ ಮುಖ್ಯಮಂತ್ರಿ ಹಾಗೂ ಪಕ್ಷದ ಅಧ್ಯಕ್ಷರನ್ನು ಖುದ್ದು ಭೇಟಿಯಾಗಿ ಚರ್ಚಿಸಿ ಬಗೆಹರಿಸಿಕೊಳ್ಳಬೇಕು. ಅದನ್ನು ಬಿಟ್ಟು ಸ್ವಪಕ್ಷೀಯ ಶಾಸಕರೇ ಈ ರೀತಿ ಸರ್ಕಾರದ ವಿರುದ್ಧ ಆರೋಪ, ಅಸಮಾಧಾನ ಹೊರಹಾಕಿದರೆ ಕಾರ್ಯಕರ್ತರಿಗೆ, ಜನತೆಗೆ ತಪ್ಪು ಸಂದೇಶ ಹೋಗುತ್ತದೆ. ಜತೆಗೆ ಪ್ರತಿಪಕ್ಷಗಳು ಇದನ್ನು ಉಪಯೋಗಿಸಿಕೊಂಡು ಸರ್ಕಾರದ ವಿರುದ್ಧ ಟೀಕೆ, ಮುಗಿಬೀಳಲು ದಾರಿಯಾಗುತ್ತದೆ. ಶಾಸಕರ ಇಂಥ ನಡೆ ಸಹಿಸಲು ಸಾಧ್ಯವಿಲ್ಲ. ಇದನ್ನು ಗಂಭೀರವಾಗಿ ಪರಿಗಣಿಸಲಾಗುವುದು. ಕೂಡಲೇ ಸಂಬಂಧಿಸಿದ ಎಲ್ಲ ಶಾಸಕರನ್ನು ಕರೆಸಿ ಬಾಯಿಗೆ ಬೀಗ ಹಾಕಿಕೊಂಡು ಇರುವಂತೆ ಸೂಚನೆ ನೀಡಿ ಎಂದು ತಿಳಿಸಿದ್ದಾರೆ.

ಆದರೆ ಇಷ್ಟು ಖಡಕ್‌ ಸೂಚನೆ ಬಳಿಕವೂ ಸಿಡಿದೆದ್ದಿದ್ದ ಶಾಸಕರು ಸುಮ್ಮನಾಗುತ್ತಾರಾ ಎಂಬುದೇ ಪ್ರಶ್ನೆ.

ಸುರ್ಜೇವಾಲ ಜತೆ ಸಿಎಂ ಭೇಟಿ:

ದೆಹಲಿ ಪ್ರವಾಸದಲ್ಲಿರುವ ಸಿದ್ದರಾಮಯ್ಯ ಮಂಗಳವಾರ ರಾಜ್ಯ ಕಾಂಗ್ರೆಸ್‌ ಉಸ್ತುವಾರಿ ರಣದೀಪ್‌ ಸಿಂಗ್‌ ಸುರ್ಜೇವಾಲ ಅವರನ್ನು ಭೇಟಿ ಮಾಡಿ ಕೆಲ ಕಾಲ ಮಾತನಾಡಿದರು. ಈ ವೇಳೆ, ಆಳಂದ ಶಾಸಕ ಬಿ.ಆರ್‌.ಪಾಟೀಲ್‌ ಅವರು ವಸತಿ ಇಲಾಖೆ ವಿರುದ್ಧ ಮಾಡಿರುವ ಮನೆಗಳ ಮಂಜೂರಾತಿಗೆ ಲಂಚದ ಆರೋಪ, ಕಾಗವಾಡ ಶಾಸಕ ರಾಜು ಕಾಗೆ ಕ್ಷೇತ್ರದ ಅಭಿವೃದ್ಧಿಗೆ ಅನುದಾನ ಸಿಗುತ್ತಿಲ್ಲ ಎಂದು ರಾಜೀನಾಮೆ ಬೆದರಿಕೆ ಹಾಕಿರುವುದು, ರಸ್ತೆ, ಚರಂಡಿ ನಿರ್ಮಾಣಕ್ಕೂ ಹಣ ಸಿಗುತ್ತಿಲ್ಲ ಎಂಬ ಮೊಳಕಾಲ್ಮೂರು ಶಾಸಕ ಎನ್‌.ವೈ ಗೋಪಾಲ ಕೃಷ್ಣ ಅವರ ಹೇಳಿಕೆ ಸೇರಿ ಶಾಸಕರ ಅಸಮಾಧಾನ, ಸಚಿವರ ಕಾರ್ಯವೈಖರಿ ವಿರುದ್ಧ ಈ ಹಿಂದೆ ಕೆಲ ಶಾಸಕರು ಬರೆದಿದ್ದ ಪತ್ರ, ಆರೋಪದ ವಿಚಾರಗಳ ಬಗ್ಗೆ ಸುರ್ಜೇವಾಲ ಅವರಿಗೆ ಮಾಹಿತಿ ನೀಡಲಾಗಿದೆ.

ಇದಕ್ಕೆ ಸುರ್ಜೇವಾಲ ಅವರು ಎಲ್ಲ ಅಸಮಾಧಾನಿತ ಶಾಸಕರನ್ನು ಕರೆಸಿ ಬುದ್ದಿ ಹೇಳಿ. ಸರ್ಕಾರ ಉತ್ತಮವಾಗಿ ನಡೆಯುತ್ತಿದೆ. ಜನಪ್ರಿಯ ಗ್ಯಾರಂಟಿ ಯೋಜನೆಗಳ ಜಾರಿ ಸೇರಿ ಜನರಿಗೆ ಕೊಟ್ಟ ಭರವಸೆಗಳನ್ನು ಈಡೇರಿಸಿಕೊಂಡು ಸಾಗುತ್ತಿದೆ. ಬರುವ ದಿನಗಳಲ್ಲಿ ಎಲ್ಲ ಶಾಸಕರ ಕ್ಷೇತ್ರಗಳಿಗೂ ಅನುದಾನ ದೊರೆಯಲಿದೆ ಎಂದು ತಿಳಿಸಿ, ಯಾವುದೇ ಕಾರಣಕ್ಕೂ ಮತ್ತೆ ಸರ್ಕಾರದ ವಿರುದ್ಧವಾಗಲಿ, ಪಕ್ಷದ ವಿರುದ್ಧವಾಗಲಿ ಅಸಮಾಧಾನ, ಆರೋಪಗಳನ್ನು ಮಾಡದಂತೆ ಸ್ಪಷ್ಟ ಸೂಚನೆ ನೀಡುವಂತೆ ಹೇಳಿದರು ಎಂದು ಮೂಲಗಳು ತಿಳಿಸಿವೆ.



Source link

Leave a Reply

Your email address will not be published. Required fields are marked *