
<p>ಈ ಪ್ರಯೋಜನಕಾರಿ ತರಕಾರಿಗಳನ್ನ ತಪ್ಪು ತಪ್ಪಾಗಿ ಸೇವಿಸಿದ್ರೆ ನಿಮಗೆ ಅನಾರೋಗ್ಯ ಉಂಟಾಗಬಹುದು. ಇಲ್ಲಿ ಕೆಲವು ತರಕಾರಿಗಳ ಬಗ್ಗೆ ಮಾಹಿತಿ ನೀಡಲಿದ್ದು, ಅವು ಮೊಳಕೆಯೊಡೆದ ನಂತರ ಮುಟ್ಟಲೇಬಾರದು.</p><img><p>ನಿಮ್ಮ ಆಹಾರಕ್ರಮವು ಪೋಷಕಾಂಶಗಳಿಂದ ಸಮೃದ್ಧವಾಗಿದ್ದರೆ ನೀವು ಫಿಟ್ ಆಗಿರುವುದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ. ತರಕಾರಿಗಳನ್ನು ಆರೋಗ್ಯಕರ ಆಹಾರದ ಪ್ರಮುಖ ಭಾಗವೆಂದು ಪರಿಗಣಿಸಲಾಗುತ್ತದೆ. ಪ್ರತಿಯೊಬ್ಬರೂ ಪ್ರತಿದಿನ ತಮ್ಮ ತಟ್ಟೆಯಲ್ಲಿ ಪೌಷ್ಟಿಕ ತರಕಾರಿಗಳನ್ನು ಸೇರಿಸಿಕೊಳ್ಳಬೇಕು ಎಂದು ಆರೋಗ್ಯ ತಜ್ಞರೂ ಹೇಳುತ್ತಾರೆ.</p><img><p>ಏಕೆಂದರೆ ತರಕಾರಿಗಳಲ್ಲಿ ಜೀವಸತ್ವಗಳು, ಖನಿಜಗಳು ಮತ್ತು ಉತ್ಕರ್ಷಣ ನಿರೋಧಕಗಳು ಸಮೃದ್ಧವಾಗಿರುವುದರಿಂದ ಅವು ಅತ್ಯಂತ ಪೌಷ್ಟಿಕ ಆಹಾರ ಪಟ್ಟಿಯಲ್ಲಿ ಸೇರಿವೆ. ಪ್ರತಿದಿನ ತರಕಾರಿಗಳನ್ನು ತಿನ್ನುವುದು ನಿಮ್ಮ ಕರುಳು ಮತ್ತು ಹೃದಯದ ಆರೋಗ್ಯವನ್ನೂ ಹೆಚ್ಚಿಸುತ್ತದೆ ಮತ್ತು ನೀವು ದೀರ್ಘಾಯುಷ್ಯವನ್ನು ಹೊಂದಲು ಸಹಾಯ ಮಾಡುತ್ತದೆ ಎಂದು ಅಧ್ಯಯನಗಳು ಸಾಬೀತುಪಡಿಸಿವೆ. ಆದರೆ ಯಾವ ರೀತಿಯ ತರಕಾರಿಗಳನ್ನು ಯಾವಾಗ ಮತ್ತು ಹೇಗೆ ತಿನ್ನಬೇಕು ಎಂಬುದನ್ನು ತಿಳಿದುಕೊಳ್ಳುವುದು ಬಹಳ ಮುಖ್ಯ. ಏಕೆಂದರೆ ಈ ಪ್ರಯೋಜನಕಾರಿ ತರಕಾರಿಗಳನ್ನ ತಪ್ಪು ತಪ್ಪಾಗಿ ಸೇವಿಸಿದ್ರೆ ನಿಮಗೆ ಅನಾರೋಗ್ಯ ಉಂಟಾಗಬಹುದು. ಇಲ್ಲಿ ಕೆಲವು ತರಕಾರಿಗಳ ಬಗ್ಗೆ ಮಾಹಿತಿ ನೀಡಲಿದ್ದು, ಅವು ಮೊಳಕೆಯೊಡೆದ ನಂತರ ಮುಟ್ಟಲೇಬಾರದು.</p><img><p>ಜನಪ್ರಿಯ ಪೌಷ್ಟಿಕತಜ್ಞೆ ಡಿಂಪಲ್ ಜಂಗ್ಡಾ ತಮ್ಮ ಇನ್ಸ್ಟಾಗ್ರಾಮ್ ಪೇಜ್ನಲ್ಲಿ ಈ ಕುರಿತು ವಿಡಿಯೋ ಶೇರ್ ಮಾಡಿದ್ದು, ಮೊಳಕೆಯೊಡೆದ ನಂತರ ಸೇವಿಸಬಾರದ ಮೂರು ತರಕಾರಿಗಳ ಬಗ್ಗೆ ಮಾಹಿತಿ ನೀಡಿದ್ದಾರೆ. ಏಕೆಂದರೆ ಆ ಸಮಯದಲ್ಲಿ ಅವುಗಳಲ್ಲಿ ವಿಷಕಾರಿ ಸಂಯುಕ್ತಗಳು ಕಂಡುಬರುತ್ತವೆ. ಇವುಗಳನ್ನು ಸೇವಿಸುವುದರಿಂದ ಅನೇಕ ಆರೋಗ್ಯ ಸಂಬಂಧಿತ ಸಮಸ್ಯೆಗಳು ಉಂಟಾಗಬಹುದು.</p> View this post on Instagram <p>A post shared by Dimple Jangda (@dimplejangdaofficial)</p><p></p><img><p>ಈರುಳ್ಳಿ ಮೊಳಕೆಯೊಡೆದರೆ ಅವುಗಳನ್ನು ಸೇವಿಸಬಾರದು ಎಂದು ಬಹಳ ಕಡಿಮೆ ಜನರಿಗೆ ತಿಳಿದಿದೆ. ಅನೇಕ ಜನರು ತಮ್ಮ ಅಡುಗೆಮನೆಯಲ್ಲಿ ಒಂದು ವಾರಗಟ್ಟಲೇ ತರಕಾರಿಗಳನ್ನು ಸಂಗ್ರಹಿಸುತ್ತಾರೆ. ಏತನ್ಮಧ್ಯೆ ಈರುಳ್ಳಿ ಮೊಳಕೆಯೊಡೆದರೆ ಅವುಗಳನ್ನು ತಿನ್ನಲೇಬೇಡಿ. ಮೊಳಕೆಯೊಡೆದ ಈರುಳ್ಳಿ ಹೆಚ್ಚಿನ ಮಟ್ಟದ ಆಲ್ಕಲಾಯ್ಡ್ಗಳನ್ನು ಉತ್ಪಾದಿಸುತ್ತದೆ. ವಿಶೇಷವಾಗಿ ಎನ್-ಪ್ರೊಪೈಲ್ ಡೈಸಲ್ಫೈಡ್ (n-propyl disulfide). ಇದು ಕೆಂಪು ರಕ್ತ ಕಣಗಳನ್ನು ಡ್ಯಾಮೇಜ್ ಮಾಡುತ್ತದೆ ಮತ್ತು ಹೆಮೋಲಿಟಿಕ್ ರಕ್ತಹೀನತೆಗೆ (Hemolytic Anemia) ಕಾರಣವಾಗಬಹುದು ಎಂದು ಪೌಷ್ಟಿಕತಜ್ಞರು ಹೇಳಿದ್ದಾರೆ . ಇದರ ಲಕ್ಷಣಗಳೆಂದರೆ ವಾಕರಿಕೆ, ವಾಂತಿ, ಹೊಟ್ಟೆ ನೋವು ಮತ್ತು ಅತಿಸಾರ.</p><img><p>ಇದಲ್ಲದೆ ಈರುಳ್ಳಿಯಂತೆ ಬೆಳ್ಳುಳ್ಳಿ ಮೊಳಕೆಯೊಡೆದಾಗ ಅದನ್ನು ಸೇವಿಸುವುದನ್ನು ತಪ್ಪಿಸಿ. ಇದು ಸಹ ನಿಮ್ಮ ಆರೋಗ್ಯಕ್ಕೆ ಹಾನಿಕಾರಕವಾಗಿದೆ. ವಾಸ್ತವವಾಗಿ ಮೊಳಕೆಯೊಡೆದ ಬೆಳ್ಳುಳ್ಳಿಯಲ್ಲಿ ಹೆಚ್ಚಿನ ಸಾಂದ್ರತೆಯ ಸಲ್ಫರ್ ಸಂಯುಕ್ತಗಳಿವೆ. ಇದು ಜೀರ್ಣಕಾರಿ ಸಮಸ್ಯೆಗಳು ಮತ್ತು ಕೆಂಪು ರಕ್ತ ಕಣಗಳಿಗೆ ಆಕ್ಸಿಡೇಟಿವ್ ಹಾನಿಯನ್ನುಂಟುಮಾಡುತ್ತದೆ.</p><img><p>ಈಗ ಆಲೂಗಡ್ಡೆ ಬಗ್ಗೆ ಹೇಳುವುದಾದರೆ ಇದು ಚಿಕ್ಕವರು ಮತ್ತು ಹಿರಿಯರು ಸೇರಿದಂತೆ ಎಲ್ಲರ ನೆಚ್ಚಿನ ತರಕಾರಿ. ನಿಮ್ಮ ಅಡುಗೆಮನೆಯಲ್ಲಿ ಆಲೂಗಡ್ಡೆ ಮೊಳಕೆಯೊಡೆದರೆ ಅದನ್ನು ತಿನ್ನುವುದನ್ನು ತಪ್ಪಿಸಿ. ಅನೇಕ ಜನರು ಮೊಳಕೆಯೊಡೆದ ಭಾಗವನ್ನು ಎಸೆದು ಉಳಿದ ಭಾಗವನ್ನು ಬಳಸುತ್ತಾರೆ, ಆದರೆ ಇದು ಸಹ ದೊಡ್ಡ ತಪ್ಪು. ಮೊಳಕೆಯೊಡೆದ ಆಲೂಗಡ್ಡೆಯ ಸೇವನೆಯು ವಾಕರಿಕೆ, ವಾಂತಿ, ಅತಿಸಾರ, ತಲೆನೋವು ಮತ್ತು ನರವೈಜ್ಞಾನಿಕ ಸಮಸ್ಯೆಗಳನ್ನು ಒಳಗೊಂಡಂತೆ ಸೋಲನೈನ್ ಪಾಯಿಸನ್ ಉಂಟುಮಾಡಬಹುದು.</p>
Source link
ಮೊಳಕೆಯೊಡೆದ ಈ 3 ತರಕಾರಿ ಮುಟ್ಟಲೇಬೇಡಿ..ಕಾಡಲಿದೆ ವಾಂತಿ, ಅತಿಸಾರ, ರಕ್ತಹೀನತೆ!