
<p>Bigg Boss Kannada Season 12: ಬಿಗ್ ಬಾಸ್ ಕನ್ನಡ ಸೀಸನ್ 12 ಶೋ ಗೆಲ್ಲೋರು ಯಾರು ಎಂದು ದೊಡ್ಡ ಚರ್ಚೆ ಶುರುವಾಗಿದೆ. ಈಗ ಕಿಚ್ಚ ಸುದೀಪ್ ಅವರೇ ಗಿಲ್ಲಿ ವಿನ್ನರ್ ಎಂದು ಹೇಳಿದ್ದಾರೆ ಎಂಬ ಪೋಸ್ಟ್ ಕೂಡ ವೈರಲ್ ಆಗ್ತಿದೆ. ಹಾಗಿದ್ದರೆ ಸತ್ಯ ಏನು?</p><p> </p><img><p>ಗಿಲ್ಲಿ ನಟ ಅವರು ಚೆನ್ನಾಗಿ ಆಡುತ್ತಿದ್ದಾರೆ. ನನ್ನ ಪತ್ನಿ ಕೂಡ ಬಿಗ್ ಬಾಸ್ ಶೋ ನೋಡುತ್ತಾರೆ ಎಂದು ರಜನೀಕಾಂತ್ ಹೇಳಿದ್ದಾರೆ ಎಂಬ ಪೋಸ್ಟ್ ಕೂಡ ವೈರಲ್ ಆಗಿತ್ತು. ಈಗ ಕಿಚ್ಚ ಸುದೀಪ್ ಅವರೇ ಗಿಲ್ಲಿ ನಟ ವಿನ್ನರ್ ಹೇಳಿದ್ದಾರೆ ಎಂಬ ಪೋಸ್ಟ್ ವೈರಲ್ ಆಗ್ತಿದೆ. ಇದರ ಸತ್ಯ ಏನು?</p><img><p>ಮಾರ್ಕ್ ಸಿನಿಮಾ ಪ್ರಚಾರವಾಗಿ ಕಿಚ್ಚ ಸುದೀಪ್ ಅವರು ಸಂದರ್ಶನಗಳನ್ನು ನೀಡಿದ್ದರು. ಆ ವೇಳೆ ಅವರು, “ಗಿಲ್ಲಿ ನಟ ಅವರು ಚೆನ್ನಾಗಿ ಆಡ್ತಾರೆ. ಗಿಲ್ಲಿ ಅವರು 100% ಪ್ರಯತ್ನಪಡುತ್ತಿದ್ದಾರೆ, ಅಷ್ಟು ಶ್ರಮ ಹಾಕುತ್ತಿದ್ದಾರೆ. ಹಾಗಂದ ಮಾತ್ರಕ್ಕೆ ಬೇರೆಯವರು ಚೆನ್ನಾಗಿ ಆಡ್ತಿಲ್ಲ ಎಂದರ್ಥವಲ್ಲ. ಬಿಗ್ ಬಾಸ್ ಮುಗಿಯೋವರೆಗೂ ನಾವು ಏನೂ ಹೇಳೋಕೆ ಆಗೋದಿಲ್ಲ” ಎಂದಿದ್ದಾರೆ.</p><img><p>ಬಿಗ್ ಬಾಸ್ ಮುಗಿಯೋವರೆಗೆ ಬಿಗ್ ಬಾಸ್ ಶೋನಲ್ಲಿ ಎಷ್ಟೋ ಚೇಂಜಸ್ಗಳು ಆಗುತ್ತವೆ, ಅದನ್ನು ನಾನು ನೋಡಿದೀನಿ. ಇನ್ನೊಂದು ಸಲ ಸ್ವಲ್ಪ ಅಗ್ರೆಸಿವ್ ಹೋಗ್ಬೇಕಾದ್ರೆ ಸೋಶಿಯಲ್ ಮೀಡಿಯದಲ್ಲಿ ಒಬ್ಬರ ಪರವಾಗಿ ಮಾತನಾಡೋದೆಲ್ಲ ಆಯ್ತು. ಬಿಗ್ ಬಾಸ್ ವೀಕ್ಷಕರು ನಿಜಕ್ಕೂ ಚೆನ್ನಾಗಿ ಆಡಿದವರೇ ಗೆಲ್ಲಬೇಕು ಎಂದು ಹೇಳ್ತಾರೆ ಎಂದಿದ್ದಾರೆ.</p><img><p>ಈ ಬಾರಿ ಯಾರಾದ್ರೂ ಒಬ್ಬರ ಬಗ್ಗೆ ಮಾತಾಡಿದ್ರೆ, ಸೋಶಿಯಲ್ ಮೀಡಿಯಾದಲ್ಲಿ ಕೆಟ್ಟ ಕೆಟ್ಟದಾಗಿ ಮಾತಾಡೋದು ಬೈಯೋದು ಆಗುತ್ತಿದೆ. ಇದನ್ನೆಲ್ಲ ಪಿಆರ್ ಟೀಂ ಮಾಡುತ್ತಿರುವ ಹಾಗೆ ಕಾಣ್ತಿದೆ ಎಂದಿದ್ದಾರೆ.</p><img><p>ಅಂದಹಾಗೆ ಗಿಲ್ಲಿ ನಟ, ಅಶ್ವಿನಿ ಗೌಡ, ರಾಶಿಕಾ ಶೆಟ್ಟಿ, ಧ್ರುವಂತ್, ಕಾವ್ಯ ಶೈವ, ರಕ್ಷಿತಾ ಶೆಟ್ಟಿ, ಸ್ಪಂದನಾ ಸೋಮಣ್ಣ, ರಘು, ಧನುಷ್ ಗೌಡ ಅವರು ಓಟದ ಸ್ಪರ್ಧೆಯಲ್ಲಿದ್ದಾರೆ. ಇವರಲ್ಲಿ ಯಾರು ವಿನ್ನರ್ ಆಗಲಿದ್ದಾರೆ ಎಂದು ಕಾದು ನೋಡಬೇಕಿದೆ.</p>
Source link
ರಜನಿಕಾಂತ್ ಬಳಿಕ ಗಿಲ್ಲಿ ನಟನ ಬಗ್ಗೆ Kiccha Sudeep ಹೇಳಿದ್ದು ನಿಜಾನಾ? ಸತ್ಯಾ ಸತ್ಯತೆ ಏನು?