
ಹೇಗಾದರೂ ಮಾಡಿ ಕಾವ್ಯಾಳನ್ನು ಮುಂದಿನ ಟಾಸ್ಕ್ಗೆ ಕಳಿಸಬೇಕು ಎಂಬ ಪ್ರಯತ್ನದಿಂದ ರಾಶಿಕಾ ಹೆಚ್ಚಿನ ನೀರು ಸಂಗ್ರಹಿಸಿದ್ದು, ಸ್ಪಂದನಾ ಮತ್ತು ಕಾವ್ಯಾಳ ನಡುವೆ ಪೈಪೋಟಿಯಿದೆ. ಹೀಗಾಗಿ, ಇನ್ನೊಮ್ಮೆ ಪರಿಶೀಲನೆ ಮಾಡುತ್ತೇನೆಂದು ಎರಡೂ ಬಕೆಟ್ಗಳನ್ನು ಅಕ್ಕಪಕ್ಕದಲ್ಲಿಟ್ಟು ತಾಳೆ ನೋಡುತ್ತಾನೆ.
ಕಳೆದ ಸೀಸನ್ನ ಸ್ಪರ್ಧಿ ಹಾಗೂ ಇತ್ತೀಚೆಗೆ ವೈಲ್ಡ್ ಕಾರ್ಡ್ ಎಂಟ್ರಿಯಂತೆ ಬಂದಿದ್ದ ಚೈತ್ರಾ ಕುಂದಾಪುರ ಅವರು ಕೂಡ ಇದೇ ರೀತಿಯಾಗಿ ಕಳಪೆ ಉಸ್ತುವಾರಿ ಮಾಡಿದ್ದರು. ಪ್ರತಿಬಾರಿ ಉಸ್ತುವಾರಿ ಬಂದಾಕ್ಷಣ ಇಡೀ ಟಾಸ್ಕ್ ಅನ್ನೇ ಹಾಳು ಮಾಡುತ್ತಿದ್ದರು ಎಂಬುದು ಎಲ್ಲರಿಗೂ ತಿಳಿದಿರುವ ವಿಚಾರ. ಅದೇ ರೀತಿ ಈಗ ಕಾವ್ಯಾಳಿಗಾಗಿ ಗಿಲ್ಲಿಯೂ ಅದೇ ರೀತಿ ಟಾಸ್ಕ್ ಉಸ್ತುವಾರಿ ಮಾಡ್ತಿದ್ದಾನೆ ಎಂಬ ಆರೋಪ ಕೇಳಿಬಂದಿದೆ.