
<p>ಲಕ್ಷ್ಮೀ ನಿವಾಸ ಸೀರಿಯಲ್ನಲ್ಲಿ ಜಾಹ್ನವಿಗಾಗಿ ಜಯಂತ್, ಆಕೆಯ ಅಣ್ಣ ವೆಂಕಿ ಮತ್ತು ಅತ್ತಿಗೆಯನ್ನು ಇಟ್ಟುಕೊಂಡು ವಿಶ್ವನಿಗೆ ಬ್ಲ್ಯಾಕ್ ಮೇಲ್ ಮಾಡುತ್ತಿದ್ದಾನೆ. ಅವರನ್ನು ಕೊಲ್ಲುವುದಾಗಿ ಬೆದರಿಕೆ ಹಾಕಿರುವ ದೃಶ್ಯಕ್ಕೆ ವೀಕ್ಷಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.</p><img><p>ಲಕ್ಷ್ಮೀ ನಿವಾಸ (Lakshmi Nivasa Serial Update) ಸೀರಿಯಲ್ನಲ್ಲಿ ಸದ್ಯ ಜಾಹ್ನವಿಯನ್ನು ಹುಡುಕಲು ಜಯಂತ್ ಎಲ್ಲಾ ಪ್ರಯತ್ನ ಮಾಡಿ ಸೋತಿದ್ದಾನೆ. ಕೊನೆಯ ಪ್ರಯತ್ನವಾಗಿ ಜಾಹ್ನವಿಯ ಅಣ್ಣ ವೆಂಕಿ ಮತ್ತು ಅತ್ತಿಗೆಯನ್ನು ಮನೆಗೆ ಕರೆದುಕೊಂಡು ಬಂದಿದ್ದಾನೆ.</p><img><p>ವಿಶ್ವನ ಹತ್ತಿರವೇ ಜಾಹ್ನವಿ ಇರುವ ಬಗ್ಗೆ ಜಯಂತ್ಗೆ ತಿಳಿದ ಹಿನ್ನೆಲೆಯಲ್ಲಿ, ಇದೀಗ ವಿಶ್ವನ ಬ್ಲ್ಯಾಕ್ಮೇಲ್ ಮಾಡಿದ್ದಾನೆ. ವೆಂಕಿ ಮತ್ತು ಪತ್ನಿಯ ಬಳಿ ಗನ್ ಹಿಡಿದು ಅವರನ್ನು ಸಾಯಿಸುವ ಬೆದರಿಕೆ ಹಾಕಿರುವ ವಿಶ್ವ, ಇದನ್ನು ವಿಡಿಯೋ ಕಾಲ್ ಮಾಡಿ ವಿಶ್ವನಿಗೆ ತೋರಿಸಿದ್ದಾನೆ.</p><img><p>ವೆಂಕಿ ಮತ್ತು ಪತ್ನಿ ಕಣ್ಣಿಗೆ ಬಟ್ಟೆ ಕಟ್ಟಿರೋ ವಿಶ್ವ, ಜಾಹ್ನವಿಯನ್ನು ತಂದು ನಿಲ್ಲಿಸಿಲ್ಲ ಎಂದರೆ ಸಾಯಿಸುವ ಬೆದರಿಕೆ ಹಾಕಿದ್ದಾನೆ. ಇದನ್ನು ನೋಡಿ ವಿಶ್ವ ಶಾಕ್ ಆಗಿದ್ದರೂ ಜಾಹ್ನವಿಗೆ ವಿಷಯ ತಿಳಿಸುತ್ತಿಲ್ಲ.</p><img><p>ಆದರೆ ಈ ಸೀನ್ ನೋಡಿ ವೀಕ್ಷಕರು ರೊಚ್ಚಿಗೆದ್ದಿದ್ದಾರೆ. ಈ ರೀತಿ ಸಾಯಿಸೋ ಬೆದರಿಕೆ ಹಾಕಿದ್ರೆ ವಿಶ್ವನಿಗೆ ಪೊಲೀಸ್ ಕಂಪ್ಲೇಂಟ್ ಕೊಡಲು ಬರಲ್ವಾ, ಎಂಥ ದೃಶ್ಯ ಎಂದು ತೋರಿಸ್ತೀರಾ? ಕಂಪ್ಲೇಂಟ್ ಕೊಟ್ಟರೆ ಅಲ್ಲಿಗೆ ಜಯಂತ್ ಕಥೆ ಮುಗಿಯತ್ತದೆ. ಅದನ್ನು ಬಿಟ್ಟು ಯಾಕೋ ಇದನ್ನು ಅತಿಯಾಗಿ ತೋರಿಸಲಾಗುತ್ತಿದೆ ಎಂದು ಬೈಯುತ್ತಿದ್ದಾರೆ.</p><img><p>ಒಂದು ವೇಳೆ ವಿಶ್ವ ಕಂಪ್ಲೇಂಟ್ ಕೊಟ್ಟಿಲ್ಲ ಎಂದರೆ ನಾವೇ ಪೊಲೀಸ್ ಕಂಪ್ಲೇಂಟ್ ಕೊಡ್ತೇವೆ. ಆವಾಗಲಾದರೂ ಈ ಸೀರಿಯಲ್ ಗೆ ಒಂದು ಗತಿ ಕಾಣಬಹುದು. ಇಲ್ಲದಿದ್ದರೆ ಜಾಹ್ನವಿ ಮತ್ತು ಜಯಂತ್ನ ಸ್ಟೋರಿ ನೋಡಿ ನೋಡಿ ಸಾಕಾಗಿ ಹೋಗಿದೆ ಎನ್ನುತ್ತಿದ್ದಾರೆ.</p>
Source link
Lakshmi Nivasa Serial: ಪೊಲೀಸ್ ಕಂಪ್ಲೇಂಟ್ ಕೊಡಲು ಮುಂದಾದ ವೀಕ್ಷಕರು- ಆಗಿದ್ದೇನು?