ನರಕ ಸದೃಶ್ಯವಾಗಿತ್ತು ಖಳನಟ ವಜ್ರಮುನಿ ಕೊನೆಯ ದಿನಗಳು

ನರಕ ಸದೃಶ್ಯವಾಗಿತ್ತು ಖಳನಟ ವಜ್ರಮುನಿ ಕೊನೆಯ ದಿನಗಳು


ಕನ್ನಡ ಚಿತ್ರರಂಗದಲ್ಲಿ (ಕನ್ನಡ ಚಲನಚಿತ್ರೋದ್ಯಮ) ನಟ ವಜ್ರಮುನಿ ಅವರು ಸಾಕಷ್ಟು ಛಾಪು ಮೂಡಿಸಿದ್ದರು. ಬಹುಬೇಡಿಕೆಯ ನಟನಾಗಿ ಅವರು ಮಿಂಚಿದ್ದರು. ಹೀರೋ ವಜ್ರಮನಿ ಅವರೇ ಹೈಲೈಟ್ ಆಗುತ್ತಿದ್ದ ದಿನಗಳು. ಸಿನಿಮಾದಲ್ಲಿ ವಿಲನ್ ಆದರೂ ರಿಯಲ್ ಲೈಫ್ ನಲ್ಲಿ ವಜ್ರಮುನಿ ಅವರು ಮೃದು ಸ್ವಭಾವದ ವ್ಯಕ್ತಿ ಆಗಿದ್ದರು. ನಟನಾಗಿ ಫೇಮಸ್ ಆದ ಅವರು ನಿರ್ಮಾಪಕನಾಗಿಯೂ ಅದೃಷ್ಟಪರೀಕ್ಷೆ ಮಾಡಿಕೊಂಡರು. ನಿರ್ಮಾಪಕನಾದ ಬಳಿಕ ಅವರು ಸಾಲದ ಸುಳಿಗೆ ಸಿಲುಕಿದರು. ನಂತರದ ದಿನಗಳಲ್ಲಿ ವಜ್ರಮುನಿ (ವಜ್ರಮುನಿ) ಅವರಿಗೆ ಆರೋಗ್ಯ ಕೈಕೊಟ್ಟಿತು. ಅದರಿಂದಾಗಿ ಅವರ ಕೊನೆಯ ದಿನಗಳು ನರಕ ಸದೃಶ್ಯ ಆಗಿದ್ದವು. ಕಿಡ್ನಿ, ಹೃದಯ ಸಂಬಂಧಿ ಕಾಯಿಲೆಗಳು ಕಾಣಿಸಿಕೊಂಡವು. ಶುಗರ್ ಮತ್ತು ರಕ್ತಹೀನತೆಯಿಂದ ಕಣ್ಣು ಕಾಣದಂತಾಯಿತು. ಕಿವಿ ಕೇಳಿಸಿಕೊಂಡ. ಅನೇಕ ಕಾಯಿಲೆಗಳಿಂದ ಅವರು 2006 ರ ಜನವರಿ 5 ರಂದು ನಿಧನರಾದರು. ಅವರು ಇಹಲೋಕ ತ್ಯಜಿಸಿ 20 ವರ್ಷ ಕಳೆದಿದ್ದಾರೆ. ವಜ್ರಮುನಿ ರೀತಿಯ ಮತ್ತೋರ್ವ ಖಳನಟ ಕನ್ನಡ ಚಿತ್ರರಂಗದಲ್ಲಿ ಬರಲೇ ಇಲ್ಲ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.



Source link

Leave a Reply

Your email address will not be published. Required fields are marked *