ನೂರೊಂದು ದಿನಗಳ ಕಾಲ ನಿರಂತರವಾಗಿ ಬರೆದ ಅಂಶಿ ಪ್ರಸನ್ನಕುಮಾರ್‌ ಕುಮಾರ್ ಶ್ರದ್ಧೆ, ಶ್ರಮಪೂರ್ಣ ಲೇಖನಗಳು ಹೊಲದ ತಂಗಾಳಿಯಲ್ಲಿ ಬೆವರು ಚೆಲ್ಲುವ ರೈತನಿಗೆ ಧ್ವನಿ ನೀಡಿದಂತಾಗಿದೆ. | Kannadaprabha Series Celebrates Farmers Effort Through Amshi Prasannakumar

ನೂರೊಂದು ದಿನಗಳ ಕಾಲ ನಿರಂತರವಾಗಿ ಬರೆದ ಅಂಶಿ ಪ್ರಸನ್ನಕುಮಾರ್‌ ಕುಮಾರ್ ಶ್ರದ್ಧೆ, ಶ್ರಮಪೂರ್ಣ ಲೇಖನಗಳು ಹೊಲದ ತಂಗಾಳಿಯಲ್ಲಿ ಬೆವರು ಚೆಲ್ಲುವ ರೈತನಿಗೆ ಧ್ವನಿ ನೀಡಿದಂತಾಗಿದೆ. | Kannadaprabha Series Celebrates Farmers Effort Through Amshi Prasannakumar



‘ಕನ್ನಡಪ್ರಭ’ ದಲ್ಲಿ ಬೆಳಿಗ್ಗೆ ಚಹಾ, ಕಾಫಿಯ ಜೊತೆಗೆ ಸವಿಯ ರೈತರ ಬೆಳೆ ಬೆಳೆದ ನೆನಪು ನೂರೊಂದು ದಿನಗಳ ಕಾಲ ನಿರಂತರವಾಗಿ ಬರೆದ ಅಂಶಿ ಪ್ರಸನ್ನಕುಮಾರ್‌ ಕುಮಾರ್ ಶ್ರದ್ಧೆ, ಶ್ರಮಪೂರ್ಣ ಲೇಖನಗಳು ಹೊಲದ ತಂಗಾಳಿಯಲ್ಲಿ ಬೆವರು ಚೆಲ್ಲುವ ರೈತನಿಗೆ ಧ್ವನಿ ನೀಡಿದಂತಾಗಿದೆ.

‘ಕನ್ನಡಪ್ರಭ’ ದಿನಪತ್ರಿಕೆಯ ಕಳೆದ 101 ದಿನಗಳಿಂದಲೂ ‘ಉಳುವ ಯೋಗಿಯ ನೋಡಲ್ಲಿ’ ಎಂಬ ಶೀರ್ಷಿಕೆಯಲ್ಲಿ ಪ್ರಕಟಿಸಿದ ಲೇಖನಮಾಲೆಯು ಕೇವಲ ಬರಹಗಳ ಸರಣಿ ಅಲ್ಲ , ಅದು ನಾಡಿನ ಮಣ್ಣಿಗೆ ಹಾಗೂ ಅನ್ನದಾತರಿಗೆ ಹಸಿರು ಬೆಳೆಗಳಿಗೆ ಸಲ್ಲಿಸುವ ಗೌರವಾನ್ವಿತ ನಮನವಾಗಿದೆ.

ರೈತನ ಶ್ರಮ ಮಣ್ಣನ್ನು ಜೀವವಂತಗೊಳಿಸುತ್ತದೆ, ಪತ್ರಿಕೆಯ ಧ್ವನಿ ಸಮಾಜವನ್ನು ಸಂವೇದನಾಶೀಲಗೊಳಿಸುತ್ತದೆ ಎನ್ನುವುದು ಸತ್ಯ. ನಾಡು-ನುಡಿಯ ನಿಜವಾದ ಪ್ರಗತಿಗೆ ಮಣ್ಣು ಹಾಗೂ ಪತ್ರಿಕೆ ಎರಡೂ ಅವಶ್ಯ. ಬರಹದ ಬಿತ್ತನೆ ಬೆಳೆಯುತ್ತಾ ಇದ್ದರೆ ಸಾಕು, ಬದಲಾವಣೆಯ ಭಾವನೆಯ ಹಣ್ಣು ನಮ್ಮೆಲ್ಲರ ಕೈಗೆ ಬೀಳುತ್ತದೆ ಎನ್ನುವ ಭಾವವಿದೆ.

ರೈತನ ಬೆವರು ದಿನದ ಬೆಳಕು, ಪತ್ರಿಕೆಯ ಸತ್ಯ ಮಾತು ರಾತ್ರಿಯ ದೀಪದ ಬೆಳಕು ಇದ್ದಂತೆ .ಅಂತಹ ಮಹತ್ಸಾಧನೆ ಕಾಯಕವನ್ನು ನಿಷ್ಠೆಯಿಂದ ಅನ್ನದಾತನರ ಬದುಕಿನ ಪರವಾಗಿ ಮೂಡಿಸಲ್ಪಟ್ಟಿದ್ದು ‘ಕನ್ನಡಪ್ರಭ’ ಸಾರ್ಥಕತೆ ಶ್ಲಾಘನೀಯ ಸೇವೆಯೆಂದು ಹೇಳಬಹುದು.

‘ಕನ್ನಡಪ್ರಭ’ ದಲ್ಲಿ ಬೆಳಿಗ್ಗೆ ಚಹಾ, ಕಾಫಿಯ ಜೊತೆಗೆ ಸವಿಯ ರೈತರ ಬೆಳೆ ಬೆಳೆದ ನೆನಪು ನೂರೊಂದು ದಿನಗಳ ಕಾಲ ನಿರಂತರವಾಗಿ ಬರೆದ ಅಂಶಿ ಪ್ರಸನ್ನಕುಮಾರ್‌ ಕುಮಾರ್ ಶ್ರದ್ಧೆ, ಶ್ರಮಪೂರ್ಣ ಲೇಖನಗಳು ಹೊಲದ ತಂಗಾಳಿಯಲ್ಲಿ ಬೆವರು ಚೆಲ್ಲುವ ರೈತನಿಗೆ ಧ್ವನಿ ನೀಡಿದಂತಾಗಿದೆ. ಅವರ ಕೃಷಿ, ಹೈನುಗಾರಿಕೆ ,ದನಕರುಗಳು, ಮರ, ಗಿಡ, ದವಸ, ಧಾನ್ಯ, ತರಕಾರಿ, ಹೂವಿನ ಬೆಳೆ, ಶ್ರಮ, ನಂಬಿಕೆ, ತಾಳ್ಮೆ ಇವುಗಳ ಎಲ್ಲ ಲಯಗಳನ್ನು ಈ ಲೇಖನದಲ್ಲಿ ಓದುತ್ತಾ ಮನಸ್ಸು ಹೊಲದ ದಡದಲ್ಲಿ ನಿಂತಂತೆ ಭಾಸವಾಗುತ್ತದೆ.

ಇದು ಕೇವಲ ಒಂದು ಅಂಕಣ ಅಲ್ಲ, ಇದು ನಾಡಿನ ನೆಲದ ಋಣ ತೀರಿಸುವ ಬರಹಬದ್ಧ ಯಜ್ಞ. ಇದು ರೈತನ ಬದುಕಿಗೆ ನೀಡಿದ ಮಾನವೀಯ ಶ್ಲಾಘನೆ. ಇದು ಬೆವರಿಗೆ ತರುವ ಪ್ರತಿಧ್ವನಿ. ನಮ್ಮ ಸಾಮಾಜಿಕ ಬದುಕು ಈಗ ಶಹರೀ ಚಟುವಟಿಕೆಗಳಲ್ಲಿ ಒತ್ತುವರಿಯಾಗಿರುವಾಗ ಇಂಥಹ ಲೇಖನಗಳು ಮಣ್ಣಿನ ಘಮತತೆಯ ಪ್ರಾಮುಖ್ಯತೆಯನ್ನು ಪುನರಾವರ್ತನೆಯ ಮೆಲುಕು ಮಾಡುತ್ತದೆ.ಇದೊಂದು ಹೊಸ ಚಿಂತನೆಗೆ ದಾರಿ ತೋರಿಸುವಂತೆ,

ಇದು ಯುವಜನತೆಗೆ ಹೊಸ ದೃಷ್ಟಿಕೋನವನ್ನು ನೀಡುವಂತೆ, ಇದು ಪತ್ರಿಕೋದ್ಯಮದ ಪ್ರಾಮಾಣಿಕತೆಗೊಂದು ದೀಪ ಶಿಖೆಯಂತಿದೆ.

ನಮ್ಮ ಹೃದಯದ ಮೇಲ್ಮಟ್ಟದಲ್ಲಿ ಮೂಡಿದ ಪ್ರೀತಿ, ಗೌರವ, ಸಂತೋಷ ,ಇವೆಲ್ಲವನ್ನೂ ಈ ಲೇಖನಗಳ ಪ್ರತಿಯೊಂದು ಸಾಲು ಬಿಂಬಿಸುತ್ತವೆ.

ಇಂತಹ ಶ್ರದ್ಧೆಯ ಲೇಖನಗಳು ರೈತರಿಗೆ ಕೇವಲ ಗೌರವವು ಅಷ್ಟೇಅಲ್ಲ , ಅವರ ಅಸ್ತಿತ್ವದ ಪಾತ್ರಧಾರಿ ಎಂಬುದನ್ನು ನಮಗೆ ನೆನಪಿಸುತ್ತವೆ. 

‘ಕನ್ನಡಪ್ರಭ’ ಪತ್ರಿಕೆಯ ಪ್ರಧಾನ ಸಂಪಾದಕರಾದ ರವಿ ಹೆಗಡೆ ಹಾಗೂ ರೈತರ ಸರಣಿಯನ್ನು ನಿರಂತರವಾಗಿ ಬರೆದ ಅಂಶಿ ಪ್ರಸನ್ನಕುಮಾರ್ ಅವರಿಗೆ ಹೃತ್ಪೂರ್ವಕ ಅಭಿನಂದನೆಗಳು.

ರೈತನ ಬೆವರು ಭೂಮಿಯಲ್ಲಿ ಬೀಜವಾಗುವುದು, ಪತ್ರಿಕೆಯ ಬರಹ ಸಮಾಜದಲ್ಲಿ ಬುದ್ಧಿಯಾಗಬೇಕು. ಇದು ಒಂದು ತಾಣದಲ್ಲಿ ಬೆಳೆ ಮೊಳೆಯುತ್ತೆ, ಮತ್ತೊಂದು ತಾಣದಲ್ಲಿ ಚಿಂತನೆ ರೈತ ಹೊಲವಿದೆ. 

ಪತ್ರಿಕೆಯ ಓಲವಾಗಲಿ.

ಪ್ರಮುಖವಾಗಿ ಹೊಲದಲ್ಲಿ ಬೆಳೆದ ಬೆಳೆ ಶರೀರವನ್ನು ಬೆಳೆಸುತ್ತದೆ, ನಿಜ ಆದರೆ ಪತ್ರಿಕೆಯಲ್ಲಿ ಮೂಡಿದ ನುಡಿ ಮಾನವನ ಮನಸ್ಸನ್ನು ಬೆಳೆಸುತ್ತದೆ ಎಂದರೆ ತಪ್ಪಾಗಲಾರದು. ‘ಬೆವರು ಬೆಳೆಯಾದಾಗ ಹೊಟ್ಟೆ ತುಂಬುತ್ತದೆ, ಬರಹ ನುಡಿಯಾದಾಗ ಹೃದಯ ಉದತ್ತಾಗೊಳಿಸುತ್ತದೆ.’ ಅಂತಹ ಮಹತ್ಸಾಧನೆಯನ್ನು ಕನ್ನಡ ಪ್ರಭ ದಿನಪತ್ರಿಕೆ ಮಾಡಿರುವುದು ನಿಜಕ್ಕೂ ಶ್ಲಾಘನೀಯವಾದುದು ಹೊರತು ಉತ್ಪ್ರೇಕ್ಷೆಯಲ್ಲ.

ಇದೇ ಪ್ರಕಾರ ಇನ್ನೂ ನೂರಾರು ದಿನಗಳ ಸಾಂಸ್ಕೃತಿಕ ಶಕ್ತಿ ನೀಡುವ ಬರಹಗಳು ನಮ್ಮನ್ನು ತಲುಪಲಿ ಎಂಬ ಹಾರೈಕೆ ಮಾಡುತ್ತಾ , ಒಬ್ಬ ಓದುಗನಾಗಿ ನಾನು ಈ ಲೇಖನಮಾಲೆಗೆ ಕೈಜೋಡಿಸುತ್ತೇನೆ ಕೃತಜ್ಞತೆಯಿಂದ, ಶ್ರದ್ಧೆಯಿಂದ ಹೃದಯಾಂತರಾಳದಿಂದಲೂ ನಮೋಸ್ತುತೇ.

ಕಾಡ್ನೂರು ಶಿವೇಗೌಡ, ಸಾಹಿತಿ ಹಾಗೂ ನಿವೃತ್ತ ಪ್ರಾಂಶುಪಾಲರು, ಮೈಸೂರು



Source link

Leave a Reply

Your email address will not be published. Required fields are marked *