
ಪಕ್ಷಿರಾಜ ಎಂದು ಬಿರುದು ಹೊತ್ತಿರುವ ಗರುಡನ ಬಗ್ಗೆ ಪೌರಾಣಿಕ ಕಥೆ ಹೇಳುವುದಾದರೆ, ಕಶ್ಯಪ ಋಷಿಯ ಮಗ ಈ ಗರುಡ. ತನ್ನ ತಾಯಿ ವಿನತೆಯನ್ನು ನಾಗರಾಜನ ದಾಸ್ಯದಿಂದ ವಿಮೋಚನೆಗೊಳಿಸಲು ಅಮೃತವನ್ನು ತರಲು ಸ್ವರ್ಗಕ್ಕೆ ಹೋಗಿ, ಅಮರತ್ವದ ಪಾನೀಯವನ್ನು ತಂದು, ನಂತರ ವಿಷ್ಣುವಿಗೆ ತನ್ನ ಸೇವೆಯನ್ನು ಅರ್ಪಿಸಿ, ಅವನ ವಾಹನವಾದ ಎಂದು ಹೇಳಲಾಗುತ್ತದೆ.