ಎಲಿಮಿನೇಷನ್ ಬಗ್ಗೆ ಮಾಳು ಹೇಳಿದ ಶಾಕಿಂಗ್ ವಿಷಯ ಬಿಚ್ಚಿಟ್ಟ ಸ್ಪಂದನಾ

ಎಲಿಮಿನೇಷನ್ ಬಗ್ಗೆ ಮಾಳು ಹೇಳಿದ ಶಾಕಿಂಗ್ ವಿಷಯ ಬಿಚ್ಚಿಟ್ಟ ಸ್ಪಂದನಾ


‘ಬಿಗ್ ಬಾಸ್ ಕನ್ನಡ ಸೀಸನ್ 12’ರಲ್ಲಿ (ಬಿಬಿಕೆ 12) 99 ದಿನ ಪೂರೈಸಿ ಸ್ಪಂದನಾ ಎಲಿಮಿನೇಟ್ ಆಗಿದ್ದಾರೆ. ಈ ಎಲಿಮಿನೇಷನ್ ಅವರಿಗೆ ಬೇಸರ ಮೂಡಿಸಿದೆ. ಎರಡು ವಾರ ಪೂರೈಸಿದ್ದರೆ ಫಿನಾಲೆಯಲ್ಲಿ ಇರಬಹುದಿತ್ತು ಎಂದು ಅವರಿಗೆ ಅನಿಸಿದೆ. ಈ ಮಧ್ಯೆ ಸ್ಪಂದನ ಮಾಳು ಅವರು ಆಡಿದ ಮಾತಿಗೆ ಸ್ಪಷ್ಟನೆ ಕೊಟ್ಟಿದ್ದಾರೆ. ಆ ಬಗ್ಗೆ ಇಲ್ಲಿದೆ ವಿವರ.

ಕಳೆದ ವಾರ ಮಾಳು ಎಲಿಮಿನೇಟ್ ಆದರು. ಅವರು ಹೊರ ಬರುತ್ತಿದ್ದಂತೆ ವಿವಿಧ ರೀತಿಯ ಹೇಳಿಕೆ ನೀಡಿದ್ದರು. ‘ನಾನು ಕಪ್ ಗೆಲ್ಲುತ್ತೇನೆ. ಆದರೆ, ಅರ್ಧಕ್ಕೆ ಹೊರಕ್ಕೆ ಕರೆಸಿದರು’ ಎಂಬರ್ಥದಲ್ಲಿ ಅವರು ಮಾತನಾಡುತ್ತಿದ್ದರು. ಸ್ಪಂದನಾ ಬಗ್ಗೆಯೂ ಅವರು ಅಸಮಾಧಾನ ವ್ಯಕ್ತಪಡಿಸಿದರು.

‘ಸ್ಪಂದನಾಗೆ ಟಾಸ್ಕ್ ಆಡೋಕೆ ಬರೋದಿಲ್ಲ. ಫಿಸಿಕಲ್ ಟಾಸ್ಕ್ ಎಂಬುದು ಬಂದರೆ ನಾನು ಅಥವಾ ಸೂರಜ್ ಉತ್ತಮ ಆಯ್ಕೆಯಾಗಿದೆ. ಅವರು ಒಳಗೆ ಇದ್ದು, ತಾವು ಹೊರಕ್ಕೆ ಬಂದಿದ್ದು ಸರಿ. ನಮ್ಮಿಬ್ಬರಲ್ಲಿ (ಸೂರಜ್ ಅಥವಾ ಮಾಳು) ಒಬ್ಬರು ಒಳಗೆ ಇರಬೇಕಿತ್ತು’ ಎಂದು ಮಾಳು ಹೇಳಿದ್ದರು . ಈ ಹೇಳಿಕೆಗಳು ಸ್ಪಂದನಾಗೆ ಅಚ್ಚರಿ ತರಿಸಿದೆ. ಈ ಬಗ್ಗೆ ಅವರು ಮಾತನಾಡಿದ್ದಾರೆ.

‘ಮಾಳು ಹೀಗೆ ಹೇಳಿದ್ದಾರೆ ಎಂಬುದೇ ನಂಗೆ ಸರ್ ಪ್ರೈಸ್’ ಎಂದಿರೋ ಸ್ಪಂದನಾ, ಮಾಳುಗೆ ಈ ಮೊದಲೇ ಎಲಿಮಿನೇಷನ್ ಭಯ ಕಾಡಿತ್ತು ಎಂಬ ಶಾಕಿಂಗ್ ವಿಷಯ ರಿವೀಲ್ ಮಾಡಿದ್ದಾರೆ. ‘ಅವರು ಎಲಿಮಿನೇಟ್ ಆಗಿದ್ದಕ್ಕಿಂತ ಒಂದು ವಾರದ ಹಿಂದೆ ಎಲಿಮಿನೇಷನ್ ಬಗ್ಗೆ ಮಾತನಾಡಿದ್ದರು. ‘ಈ ವಾರ ನಾಮಿನೇಟ್ ಆಗಿದ್ದೇನೆ. ನಾನೇ ಹೊರಹೋಗೋದು ಎಂದು ನನಗೆ ಅನಿಸುತ್ತಿದೆ, ಬಟ್ಟೆಗಳು ಬಂದಿಲ್ಲ’ ಎಂದು ಮಾಳು ಅವರು ಸ್ಪಂದನ ಬಳಿ ಹೇಳಿದ್ದರಂತೆ.

ಇದನ್ನೂ ಓದಿ: ರಕ್ಷಿತಾ ಶೆಟ್ಟಿಯಿಂದ ಮ್ಯಾನ್ ಹ್ಯಾಂಡ್ಲಿಂಗ್? ಓಪನ್ ಆಗುತ್ತಾ ಬಿಗ್ ಬಾಸ್ ಬಾಗಿಲು?

ಬಿಗ್ ಬಾಸ್ ಮನೆಯಲ್ಲಿ ತಾವೇ ಎಲಿಮಿನೇಟ್ ಆಗೋದು ಎಂದು ಮಾಳುಗೆ ಅನಿಸಿತ್ತು. ಆದರೆ, ಹೊರಗೆ ಬಂದು ಹೀಗೆ ಏಕೆ ಹೇಳಿದ್ರು ಎಂಬ ಪ್ರಶ್ನೆ ಸ್ಪಂದನಾ ಅವರನ್ನು ಕಾಡಿದೆ. ‘ಮಾಳು ಸ್ಟ್ರಾಂಗ್ ಸ್ಪರ್ಧಿ ಆಗಿದ್ದರು. ಆದರೆ, ತಮ್ಮತೆಯನ್ನು ಅವರು ಸರಿಯಾಗಿ ಬಳಸಿಕೊಂಡಿಲ್ಲ’ ಎಂದು ಸ್ಪಂದನಾ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.



Source link

Leave a Reply

Your email address will not be published. Required fields are marked *