ಕೊಪ್ಪಳ, (ಜನವರಿ 05): ಭಕ್ತ ಸಾಗರದ ನಡುವೆ ಭವ್ಯ ರಥೋತ್ಸವಕಣ್ಣು ಹಾಯಿಸಿದ ಕಡೆಯಲ್ಲೆಲ್ಲ ತಲೆ ಎತ್ತಿ ನಿಂತಿರುವ ಭಕ್ತರ ಸಮೂಹ. ಇರುವೆ ಸಾಲಿನಲ್ಲಿ ಸಾಗುತ್ತಿರುವ ಜನರ ದಂಡು.ಇದು ಕೊಪ್ಪಳದ ಮಠದ ಗವಿಸಿದ್ದೇಶ್ವರ ವೀಕ್ಷಣೆ ಕಂಡುಬಂದ ದೃಶ್ಯ. ಹೌದು..ದಕ್ಷಿಣ ಭಾರತದ ಕುಂಭಮೇಳ ಎಂದೆಂದೂ ಖ್ಯಾತಿ ಪಡೆದಿರುವ ಕೊಪ್ಪಳದ ಶ್ರೀ ಗವಿಸಿದ್ದೇಶ್ವರ ಮಹಾಶಿವಯೋಗಿಗಳ ಜಾತ್ರಾ ಮಹೋತ್ಸವ (ಕೊಪ್ಪಳ ಗವಿಸಿದ್ಧೇಶ್ವರ ರಥೋತ್ಸವ) ಇಂದು ಅದ್ದೂರಿಯಾಗಿ ನೆರವೇರಿತು. ನಮ್ಮ ಹೆಮ್ಮೆಯ ಕೊಪ್ಪಳ ಮೂಲದವರೇ ಆದ, ಸದ್ಯ ಮೇಘಾಲಯ ರಾಜ್ಯಪಾಲರ ಗೌರವಾನ್ವಿತ ಹೆಚ್.ಸಿ. ವಿಜಯಶಂಕರ್ ಅವರು ರಥೋತ್ಸವಕ್ಕೆ ಚಾಲನೆ ನೀಡಿದ್ದು, ಲಕ್ಷಾಂತರ ಭಕ್ತರ ಹರ್ಷೋದ್ಗಾರ, ಮೈಸೂರುಪಾಕ್-ಪ್ರಸಾದದ ಘಮಲು ಹಾಗೂ ಅಜ್ಜನ ದರ್ಶನಕ್ಕಾಗಿ ಜನಸಾಗರವೇ ಹರಿದುಬಂದಿದೆ. ಇನ್ನು ಕೊಪ್ಪಳ ಅಜ್ಜನ ಜಾತ್ರೆ ದ್ರೋಣ್ ದೃಶ್ಯ ನೋಡಿದರೆ ಎಲ್ಲಿ ನೋಡಿದರೂ ಜನ. ನೀವೂ ಒಂದು ಸಲ ನೋಡಿ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.