
ಭೂಮಿಕಾಳ ಕಳೆದುಹೋದ ಮಗುವಿನ ಬಗ್ಗೆ ಮಿಂಚು ಹೇಳಿದ ಸತ್ಯವನ್ನು ಕೇಳಿ ಗೌತಮ್ ಭಾವುಕನಾಗುತ್ತಾನೆ. ಮತ್ತೊಂದೆಡೆ, ಜೈದೇವನ ಆದೇಶದಂತೆ ಅವನ ಪಿಎ, ಮಲ್ಲಿಗೆಯನ್ನು ಪ್ರೀತಿಯ ಬಲೆಗೆ ಬೀಳಿಸಲು ಆಕೆಯ ಸರವನ್ನು ಕದಿಯಲು ಸಂಚು ರೂಪಿಸುತ್ತಾನೆ.<img><p>ಅಮೃತಧಾರೆಯಲ್ಲಿ (Amruthadhaare) ಭೂಮಿಕಾ ಗೌತಮ್ನ ಸೇರಲು ತವಕಿಸುತ್ತಿದ್ದರೂ ಆ ಬಗ್ಗೆ ಹೇಳಿಕೊಳ್ಳಲು ಹಿಂದೇಟು ಹಾಕುತ್ತಿದ್ದಾಳೆ. ಆದರೆ ಎಲ್ಲವನ್ನೂ ಅರಿತಿರೋ ಆಕಾಶ್ ಮತ್ತು ಮಿಂಚು ಮಾತ್ರ ಇಬ್ಬರನ್ನೂ ಹೇಗಾದ್ರೂ ಹತ್ತಿರ ಮಾಡುವ ಸ್ಕೆಚ್ ಹಾಕಿದ್ದಾರೆ.</p><img><p>ಇದೀಗ ಮಿಂಚು ಅಪ್ಪನ ಬಳಿ ಬಂದು, ನಮ್ಮ ಮ್ಯಾಮ್ನ ಇನ್ನೊಂದು ಮಗು ಕಳೆದು ಹೋಗಿದ್ಯಂತೆ. ಅದಕ್ಕಾಗಿ ಅವರು ತುಂಬಾ ನೋವು ಅನುಭವಿಸುತ್ತಿದ್ದಾರಂತೆ. ಅದನ್ನು ಕೇಳಿ ನನಗೆ ಅಳುನೇ ಬಂತು ಎಂದು ಹೇಳುವ ಮೂಲಕ, ಆ ಮಗುವನ್ನು ಹುಡುಕುವ ನೆಪದಲ್ಲಿ ಅಪ್ಪ-ಅಮ್ಮನನ್ನು ಒಂದು ಮಾಡುವ ಪ್ಲ್ಯಾನ್ ಮಾಡಿದ್ದಾಳೆ.</p><img><p>ಇದನ್ನು ಕೇಳಿ ಗೌತಮ್ಗೆ ಕಸಿವಿಸಿಯಾಗಿದೆ. ಮಗುವನ್ನು ಕಳೆದುಕೊಂಡ ದುಃಖ ಉಮ್ಮಳಿಸಿ ಬಂದಾಗ, ಮಿಂಚು ಏನೂ ಗೊತ್ತಿಲ್ಲದವಳ ಹಾಗೆ ನಿಮಗ್ಯಾಕೆ ಬೇಜಾರಾಗ್ತಿದೆ ಪಪ್ಪಾ ಎಂದು ಪ್ರಶ್ನಿಸಿದ್ದಾಳೆ. ಅದಕ್ಕೆ ಗೌತಮ್ ಏನಿಲ್ಲ ಏನಿಲ್ಲ ಎಂದು ನುಣುಚಿಕೊಳ್ಳಲು ಪ್ರಯತ್ನಿಸುತ್ತಿದ್ದಾನೆ.</p><img><p>ಅದೇ ಇನ್ನೊಂದೆಡೆ, ಮಲ್ಲಿಗೆ ಲವ್ ಮಾಡಿ ಆಕೆಯನ್ನು ಮೋಸ ಮಾಡುವ ಟಾರ್ಗೆಟ್ ಅನ್ನು ತಮ್ಮ ಪಿಎಗೆ ನೀಡಿದ್ದಾನೆ ಜೈದೇವ. ಅದರ ಟಾಸ್ಕ್ ಭಾಗವಾಗಿ ಮಲ್ಲಿಯ ಸರವನ್ನು ಕದಿಯಲು ರೌಡಿಗೆ ಸುಪಾರಿ ಕೊಟ್ಟಿದ್ದಾನೆ.</p><img><p>ಅವಳ ಸರ ಕದ್ದಾಗ ತಾನು ಹೋಗಿ ಫೈಟಿಂಗ್ ಮಾಡಿ ಮಲ್ಲಿಯನ್ನು ಕಾಪಾಡುವುದು ಅವನ ಉದ್ದೇಶ. ಅದಕ್ಕಾಗಿಯೇ ರೌಡಿಯನ್ನು ಬಿಟ್ಟಿದ್ದಾನೆ.</p><img><p>ರೌಡಿ ಮಲ್ಲಿಯ ಹಿಂದೆ ಹಿಂದೆ ಹೋಗಿದ್ದಾನೆ. ಆದರೆ ಅವಳ ಕುತ್ತಿಗೆಯಲ್ಲಿ ಸರ ಕಾಣಿಸದೇ ತಲೆ ಕೆಡಿಸಿಕೊಂಡಿದ್ದಾನೆ ಈ ರೌಡಿ. ಮುಂದೇನಾಗತ್ತೆ? ಮೊಬೈಲ್ ಕದ್ದು ಹೋಗ್ತಾನಾ ಹೇಗೆ?ಮಲ್ಲಿಗೆ ಲವ್ ಆಗತ್ತಾ, ಗೌತಮ್ ಮಗುವನ್ನು ಹುಡುಕಲು ಭೂಮಿಕಾ ಜೊತೆಯಾಗ್ತಾನಾ ಎನ್ನೋದು ಈಗಿರೋ ಪ್ರಶ್ನೆ.</p>
Source link
Amruthadhaare: ಅಪ್ಪನ ತಲೆಗೆ ಹುಳು ಬಿಟ್ಟ ಮಿಂಚು- ಮಲ್ಲಿ ಸರ ಕದಿಯಲು ರೌಡಿ ಬಿಟ್ಟ ಕಿಲಾಡಿ ಪಿಎ!