ಪ್ರೀತಿಗೆ ಅಡ್ಡಿ ಆಯ್ತಾ ಪೌರೋಹಿತ್ಯ ವೃತ್ತಿ? ಪ್ರಾಣ ಕಳೆದುಕೊಂಡ 24ರ ಯುವಕ ಪವನ್ ಭಟ್

ಪ್ರೀತಿಗೆ ಅಡ್ಡಿ ಆಯ್ತಾ ಪೌರೋಹಿತ್ಯ ವೃತ್ತಿ? ಪ್ರಾಣ ಕಳೆದುಕೊಂಡ 24ರ ಯುವಕ ಪವನ್ ಭಟ್



ಪ್ರೀತಿಗೆ ಅಡ್ಡಿ ಆಯ್ತಾ ಪೌರೋಹಿತ್ಯ ವೃತ್ತಿ? ಪ್ರಾಣ ಕಳೆದುಕೊಂಡ 24ರ ಯುವಕ ಪವನ್ ಭಟ್
<p>ಅಂಕೋಲಾ ಪಟ್ಟಣದಲ್ಲಿ ಪೌರೋಹಿತ್ಯ ವೃತ್ತಿ ಮಾಡುತ್ತಿದ್ದ ಪವನ್ ಭಟ್ ಎಂಬ 24 ವರ್ಷದ ಯುವಕ ಪ್ರೇಮ ವೈಫಲ್ಯದಿಂದ ಆತ್ಮ*ಹತ್ಯೆ ಮಾಡಿಕೊಂಡಿದ್ದಾನೆ. ತನ್ನ ಪ್ರೇಯಸಿ ಮದುವೆಗೆ ನಿರಾಕರಿಸಿದ್ದರಿಂದ ಮನನೊಂದು ಈ ಕೃತ್ಯ ಎಸಗಿದ್ದಾನೆ ಎನ್ನಲಾಗಿದ್ದು, ಅಂಕೋಲಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.</p><img><p>ಅಂಕೋಲಾ ಪಟ್ಟಣದಲ್ಲಿ ಪೌರೋಹಿತ್ಯ ನಡೆಸಿಕೊಂಡಿದ್ದ ಯುವಕನೋರ್ವ ಪ್ರೇಮ ವೈಫಲ್ಯದ ಹಿನ್ನೆಲೆ ಆತ್ಮ*ಹತ್ಯೆ ಮಾಡಿಕೊಂಡ ಘಟನೆ ಪಟ್ಟಣದ ಅಸ್ಲಗದ್ದೆಯಲ್ಲಿ ನಡೆದಿದೆ. ಪವನ್ ಭಟ್ (24) ಆತ್ಮ*ಹತ್ಯೆ ಮಾಡಿಕೊಂಡವನು.</p><img><p>ಮೃತ ಪವನ್ ಭಟ್ ತಾಲೂಕಿನಲ್ಲಿ ಪೌರೋಹಿತ್ಯ ವೃತ್ತಿ ಮಾಡಿಕೊಂಡಿದ್ದು, ಧಾರ್ಮಿಕ ಕಾರ್ಯಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದ. ಮೃತ ಪವನ್ ಭಟ್ ತನ್ನದೇ ಊರಿನ ಯುವತಿಯನ್ನು ಪ್ರೀತಿಸುತ್ತಿದ್ದನು.</p><img><p>ಯುವತಿಯೊಂದಿಗೆ ಮದುವೆ ಕುರಿತು ಕೇಳಿಕೊಂಡಾಗ ಪ್ರೇಯಸಿ ಅದಕ್ಕೆ ನಿರಾಕರಿಸಿದ ಕಾರಣದಿಂದ ಮನನೊಂದು ತೀವ್ರ ಮಾನಸಿಕ ಒತ್ತಡಕ್ಕೆ ಒಳಗಾಗಿದ್ದಾನೆ ಎನ್ನಲಾಗಿದೆ. ಪೌರೋಹಿತ್ಯ ವೃತ್ತಿ ಮಾಡಿಕೊಂಡ ನಿನ್ನನ್ನು ಮದುವೆಯಾಗಲ್ಲ ಎಂದು ಯುವತಿ ಹೇಳಿದ್ಳು ಎಂಬ ಮಾತುಗಳು ಸಹ ಕೇಳಿ ಬರುತ್ತಿವೆ. ಈ ಕಾರಣದಿಂದ ಆತ್ಮ*ಹತ್ಯೆಗೆ ಮುಂದಾಗಿರುವ ಶಂಕೆ ವ್ಯಕ್ತವಾಗಿದೆ.</p><img><p>ಘಟನೆಯ ಮಾಹಿತಿ ದೊರಕಿದ ತಕ್ಷಣ ಸ್ಥಳಕ್ಕೆ ಸಿಪಿಐ ಚಂದ್ರಶೇಖರ್ ಮಠಪತಿ ಹಾಗೂ ಪಿಎಸ್ಐ ಗುರುನಾಥ ಹಾದಿಮನಿ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದ್ದು, ಈ ಕುರಿತು ಅಂಕೋಲಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.</p>



Source link

Leave a Reply

Your email address will not be published. Required fields are marked *