Bigg Boss ಜಾಹ್ನವಿಗೆ ಈ ಪರಿ ಭಯ ಹುಟ್ಟಿಸೋದಾ ರಕ್ಷಿತಾ ಶೆಟ್ಟಿ? ತುಳುನಾಡಿಗೆ ಕಾಲಿಡಲು ಭಯವಂತೆ!

Bigg Boss ಜಾಹ್ನವಿಗೆ ಈ ಪರಿ ಭಯ ಹುಟ್ಟಿಸೋದಾ ರಕ್ಷಿತಾ ಶೆಟ್ಟಿ? ತುಳುನಾಡಿಗೆ ಕಾಲಿಡಲು ಭಯವಂತೆ!



Bigg Boss ಜಾಹ್ನವಿಗೆ ಈ ಪರಿ ಭಯ ಹುಟ್ಟಿಸೋದಾ ರಕ್ಷಿತಾ ಶೆಟ್ಟಿ? ತುಳುನಾಡಿಗೆ ಕಾಲಿಡಲು ಭಯವಂತೆ!
<p>ಬಿಗ್‌ಬಾಸ್‌ನಿಂದ ಹೊರಬಂದ ನಂತರ ಜಾಹ್ನವಿ ದಕ್ಷಿಣ ಕನ್ನಡದ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದರು. ಬಿಗ್‌ಬಾಸ್‌ನಲ್ಲಿ ರಕ್ಷಿತಾ ಶೆಟ್ಟಿಗೆ ಕಾಟ ಕೊಟ್ಟಿದ್ದರಿಂದ ಇಲ್ಲಿನ ಜನ ತನಗೆ ತೊಂದರೆ ಕೊಡಬಹುದೆಂಬ ಭಯದಲ್ಲಿದ್ದೆ ಎಂದು ಅವರು ಬಹಿರಂಗಪಡಿಸಿದರು. &nbsp;</p><p>&nbsp;</p><img><p>ಬಿಗ್‌ಬಾಸ್‌ (Bigg Boss) ನಿಂದ ಹೊರಕ್ಕೆ ಬಂದ ಮೇಲೆ ಜಾಹ್ನವಿ ಅವರಿ ಭರ್ಜರಿ ಡಿಮಾಂಡ್‌ ಉಂಟಾಗಿದ್ದು, ಹಲವಾರು ಕಾರ್ಯಕ್ರಮಗಳಿಗೆ ಅತಿಥಿಯಾಗಿ ಕರೆಯುತ್ತಿದ್ದಾರೆ.</p><img><p>ಇದೀಗ, ಅವರಿಗೆ ದಕ್ಷಿಣ ಕನ್ನಡದ ಕಾರ್ಯಕ್ರಮವೊಂದಕ್ಕೆ ಅತಿಥಿಯಾಗಿ ಕರೆಯಲಾಗಿತ್ತು. ಈ ಕಾರ್ಯಕ್ರಮದಲ್ಲಿ ಭಾಷಣ ಮಾಡಿದ ಜಾಹ್ನವಿ ಅವರು ತುಳುನಾಡ ಆಚರಣೆಗಳ ಬಗ್ಗೆ ಸೊಗಸಾಗಿ ಮಾತನಾಡಿದರು.</p><img><p>ಆದರೆ, ಇದೇ ವೇಳೆ ಕುತೂಹಲದ ವಿಷಯವೊಂದನ್ನು ಅವರು ಶೇರ್‍ ಮಾಡಿಕೊಂಡರು. ಅದೇನೆಂದರೆ, ನನಗೆ ಇಲ್ಲಿಗೆ ಬರಲು ತುಂಬಾ ಭಯ ಉಂಟಾಯ್ತು. ಯಾರು ನನಗೆ ಏನು ಮಾಡಿ ಬಿಡ್ತಾರೋ ಎನ್ನುವ ಭಯವಾಗಿತ್ತು. ಅದಕ್ಕೆ ಕಾರಣ ರಕ್ಷಿತಾ ಶೆಟ್ಟಿ (Bigg Biss Rakshita Shetty) ಅಂದಿದ್ದಾರೆ.</p><img><p>ಬಿಗ್‌ಬಾಸ್‌ನಲ್ಲಿ ರಕ್ಷಿತಾ ಶೆಟ್ಟಿ ಅವರಿಗೆ ಜಾಹ್ನವಿ ಸಾಕಷ್ಟು ಕಾಟ ಕೊಟ್ಟಿದ್ದರು. ಅದನ್ನೇ ಇಲ್ಲಿಯ ವೀಕ್ಷಕರು ಮನಸ್ಸಿನಲ್ಲಿ ಇಟ್ಟುಕೊಂಡು ಏನಾದರೂ ತೊಂದರೆ ಮಾಡಿಬಿಟ್ಟರೆ ಎನ್ನುವ ಭಯ ಇತ್ತಂತೆ ಜಾಹ್ನವಿಗೆ.</p><img><p>ಆದರೆ, ಇಲ್ಲಿಯ ಜನ ತುಂಬಾ ಒಳ್ಳೆಯವರು. ಬಿಗ್‌ಬಾಸ್‌ ಅನ್ನು ಕೇವಲ ಆಟವಾಗಿ ನೋಡಿದ್ದಾರೆ. ಅಲ್ಲಿ ಎಲ್ಲವೂ ನಡೆಯುತ್ತದೆ ಎನ್ನುವುದು ಅವರಿಗೆ ಗೊತ್ತು. ಆದ್ದರಿಂದ ನನಗೆ ಏನೂ ಸಮಸ್ಯೆ ಮಾಡಲಿಲ್ಲ ಎಂದು ತಮಾಷೆ ಮಾಡಿದ್ದಾರೆ.</p><img><p>ಅಷ್ಟಕ್ಕೂ ಈ ಹಿಂದೆ ಜಾಹ್ನವಿ, ರಕ್ಷಿತಾ ಶೆಟ್ಟಿ ಕಂಡರೆ ನನಗೆ ಹೊಟ್ಟೆ ಉರಿಯಾಗುತ್ತದೆ. ಮಂಗಳೂರಿನಲ್ಲಿ ಆಕೆ ಹುಟ್ಟಿದ್ದರಿಂದ ಅಲ್ಲಿಯ ಜನ ಪ್ರೀತಿ ಕೊಡುವುದನ್ನು ನೋಡಿ ನಾನೂ ಅಲ್ಲಿಯೇ ಹುಟ್ಟಬಾರದಿತ್ತಾ ಎಂದು ಎನ್ನಿಸುವುದು ಇದೆ ಎಂದು ಸಂದರ್ಶನದಲ್ಲಿ ಹೇಳಿದ್ದರು.</p>



Source link

Leave a Reply

Your email address will not be published. Required fields are marked *