
ನ್ಯಾಯಾಲಯವು ತನ್ನ ತೀರ್ಪಿನಲ್ಲಿ, ಆರೋಪಿಗಳು ಮದನ್ ನಾಯ್ಕ ಅವರ ಮೇಲೆ ಹಲ್ಲೆ ನಡೆಸಿರುವುದು ಪ್ರತ್ಯಕ್ಷದರ್ಶಿ ಸಾಕ್ಷಿಗಳಿಂದ ಸ್ಪಷ್ಟವಾಗಿ ಸಾಬೀತಾಗಿದೆ. ಆದರೆ, ಕೊಲೆ ಎಂಬುದನ್ನು ಕಾನೂನುಬದ್ಧವಾಗಿ ಸಾಬೀತುಪಡಿಸಲು ಅಭಿಯೋಗ ವಿಫಲವಾಗಿದೆ ಎಂದು ಅಭಿಪ್ರಾಯಪಟ್ಟಿದೆ.
2012ರ ಮೇ 6ರಂದು ನಡೆದಿದ್ದ ದುರ್ಘಟನೆ
ಈ ಪ್ರಕರಣವು 2012ರ ಮೇ 6ರಂದು ದಾಂಡೇಲಿಯ ಖಾಸಗಿ ಮೊಸಳೆ ಉದ್ಯಾನವನ (ಮೊಸಳೆ ಪಾರ್ಕ್) ನಲ್ಲಿ ನಡೆದ ಘಟನೆಯಾಗಿದ್ದು, ಆ ಸಮಯದಲ್ಲಿ ಮದನ್ ನಾಯ್ಕ ಅವರು ದಾಂಡೇಲಿ ಅರಣ್ಯ ಇಲಾಖೆಯ ಎಸಿಎಫ್ ಆಗಿ ಕರ್ತವ್ಯ ಸಲ್ಲಿಸುತ್ತಿದ್ದರು. ಘಟನೆ ದಿನ, ಮದ್ಯಪಾನದಲ್ಲಿದ್ದ ಪ್ರವಾಸಿಗರ ಗುಂಪೊಂದು ಮೊಸಳೆಗಳಿಗೆ ಮಾಂಸ ಎಸೆಯುತ್ತಿದ್ದುದನ್ನು ಮದನ್ ನಾಯ್ಕ ತಡೆಯಲು ಯತ್ನಿಸಿದ್ದರು. ಅರಣ್ಯ ಇಲಾಖೆಯ ನಿಯಮಗಳನ್ನು ಉಲ್ಲಂಘಿಸಿ ಈ ಕೃತ್ಯ ನಡೆಯುತ್ತಿದ್ದುದನ್ನು ಪ್ರಶ್ನಿಸಿದ್ದ ಮದನ್ ನಾಯ್ಕ ಅವರೊಂದಿಗೆ ಪ್ರವಾಸಿಗರ ಗುಂಪು ವಾಗ್ವಾದ ನಡೆಸಿತ್ತು.