Headlines

Brahmagantu: ದಿಶಾನೇ ದೀಪಾ ಎಂದು ತಿಳಿಯದೇ ಮಗಳ ಕೊ*ಲೆಗೆ ಸುಪಾರಿ ಕೊಟ್ಟನಾ ಪೊಲೀಸಪ್ಪಾ?

Brahmagantu: ದಿಶಾನೇ ದೀಪಾ ಎಂದು ತಿಳಿಯದೇ ಮಗಳ ಕೊ*ಲೆಗೆ ಸುಪಾರಿ ಕೊಟ್ಟನಾ ಪೊಲೀಸಪ್ಪಾ?



Brahmagantu: ದಿಶಾನೇ ದೀಪಾ ಎಂದು ತಿಳಿಯದೇ ಮಗಳ ಕೊ*ಲೆಗೆ ಸುಪಾರಿ ಕೊಟ್ಟನಾ ಪೊಲೀಸಪ್ಪಾ?
‘ಬ್ರಹ್ಮಗಂಟು’ ಧಾರಾವಾಹಿಯು ರೋಚಕ ತಿರುವು ಪಡೆದಿದೆ. ಚಿರುಗೆ ಪ್ರೀತಿಯ ಪರೀಕ್ಷೆ ಒಡ್ಡಿದ ದೀಪಾಗೆ ಆಘಾತವಾಗಿದ್ದು, ಇನ್ನೊಂದೆಡೆ ಆಕೆಯ ತಂದೆಯೇ ದಿಶಾಳ ಕೊಲೆಗೆ ಸುಪಾರಿ ನೀಡಿರುವುದು ಕಥೆಯಲ್ಲಿ ಹೊಸ ಸಂಚಲನ ಮೂಡಿಸಿದೆ. ಈ ಸಂಚಿನಿಂದ ದೀಪಾ-ದಿಶಾ ಒಂದೇ ಎಂಬ ಸತ್ಯ ಹೊರಬೀಳುವುದೇ ಎಂಬ ಕುತೂಹಲ ಹೆಚ್ಚಾಗಿದೆ.<img><p>ಬ್ರಹ್ಮಗಂಟು ಸೀರಿಯಲ್​ (Brahmagantu Serial) ಇದೀಗ ಊಹಿಸದ ತಿರುವು ಪಡೆದುಕೊಂಡಿದೆ. ಗುಣನೋ, ಸೌಂದರ್ಯನೋ ಎನ್ನುವ ವಿಷಯದಲ್ಲಿ ಇದೀಗ ಬೇರೆಯದ್ದೇ ರೂಪ ಪಡೆದುಕೊಂಡು ಬಿಟ್ಟಿದೆ.</p><img><p>ದಿಶಾ ಮತ್ತು ದೀಪಾ ಒಬ್ಬರೇ ಎನ್ನುವುದನ್ನು ಅರಿಯದ ಸೌಂದರ್ಯ ಚಿರುನ್ನು ದಿಶಾಗೆ ಕೊಟ್ಟು ಮದುವೆ ಮಾಡಲು ಪ್ಲ್ಯಾನ್​ ಹಾಕಿದ್ದಾಳೆ. ಅದೇ ಇನ್ನೊಂದೆಡೆ ಚಿರುಗೆ ರೂಪ ಮತ್ತು ಗುಣ ಎರಡರಲ್ಲಿ ಯಾವುದು ಮುಖ್ಯ ಎನ್ನುವುದನ್ನು ಕಂಡುಹಿಡಿಯುವ ಪಣವನ್ನು ದೀಪಾ ತೊಟ್ಟಿದ್ದಾಳೆ.</p><img><p>ಅದೇ ರೀತಿ ದೀಪಾ, ದಿಶಾ ಆಗಿ ಬಂದು ಚಿರುನ್ನು ಪ್ರಪೋಸ್​​ ಮಾಡಿದ್ದಾಳೆ. ಆದರೆ ದಿಶಾಳ ರೂಪದಲ್ಲಿ ಚಿರುಗೆ ದೀಪಾನೇ ಕಾಣಿಸಿದ್ದಾಳೆ. ಆಕೆ ದೀಪಾ ಎಂದೇಅಂದುಕೊಂಡು ಲವ್​ ಪ್ರಪೋಸಲ್​ಗೆ ಒಪ್ಪಿಕೊಂಡು ಬಿಟ್ಟಿದ್ದಾನೆ. ಆದರೆ ಇದು ದೀಪಾಗೆ ಹೇಗೆ ಗೊತ್ತಾಗಬೇಕು? ದೀಪಾಗೆ ಸೋಲಾಗಿದೆ. ಅವಳಿಗೆ ಆಘಾತವಾಗಿ ಅಲ್ಲಿಂದ ಬಂದಿದ್ದಾಳೆ.</p><img><p>ಅದೇ ಇನ್ನೊಂದೆಡೆ, ದೀಪಾ ಅಪ್ಪ ಪೊಲೀಸಪ್ಪ ನಿಷ್ಠಾವಂತ ಎನ್ನುವ ಬಿರುದು ಪಡೆದುಕೊಂಡಿದ್ದರೂ ದಿಶಾಳಿಂದ ತನ್ನ ಮಗಳ ಭವಿಷ್ಯ ಹಾಳಾಗುತ್ತದೆ ಎಂದು ಅಂದುಕೊಂಡಿದ್ದಾನೆ. ಆದ್ದರಿಂದ ಇದೀಗ ಒಬ್ಬರನ್ನು ಸಾಯಿಸಲು ರೌಡಿಗೆ ಸುಪಾರಿ ಕೊಟ್ಟಿದ್ದಾನೆ.</p><img><p>ಆದರೆ, ಅವರು ಯಾರು ಎನ್ನುವುದನ್ನು ತೋರಿಸಿಲ್ಲ. ಅದು ಯಾರಿರಬಹುದು ಎಂದು ಊಹಿಸಿದರೆ, ಅದು ದಿಶಾ ಇರಬಹುದು ಎಂದೇ ಎಲ್ಲರೂ ಅಂದುಕೊಂಡಿದ್ದಾರೆ. ಅವರನ್ನು ಅಪಘಾತ ಮಾಡಿಸಿ ಸಾಯಿಸಬೇಕು ಎನ್ನುವಷ್ಟರಮಟ್ಟಿಗೆ ಪೊಲೀಸಪ್ಪ ಹೋಗಿದ್ದಾನೆ.</p><img><p>ಆದರೆ ಇದು ಎಷ್ಟು ಸರಿ ಎನ್ನುವ ಚರ್ಚೆಯ ನಡುವೆಯೇ, ದಿಶಾಳಿಗೆ ಅಪಘಾತವಾದರೆ ಆಕೆಯೇ ದೀಪಾ ಎನ್ನುವ ಸತ್ಯ ಅಂತೂ ಗೊತ್ತಾಗುತ್ತದೆ. ಆದಷ್ಟು ಬೇಗ ಈ ಸತ್ಯ ಹೊರಕ್ಕೆ ಬರಲಿ ಎಂದು ವೀಕ್ಷಕರು ಕಾಯುತ್ತಿದ್ದರೂ ಈ ರೀತಿಯಾಗಿ ಬರುವುದು ಯಾರಿಗೂ ಇಷ್ಟವಿಲ್ಲ.</p>



Source link

Leave a Reply

Your email address will not be published. Required fields are marked *