
<p>ಬಿಗ್ಬಾಸ್ 12ರಲ್ಲಿ ಗಿಲ್ಲಿ ನಟನ ಬದಲು ಅಶ್ವಿನಿ ಗೌಡ ಮತ್ತು ಧ್ರುವಂತ್ಗೆ ಸೀಸನ್ ಚಪ್ಪಾಳೆ ನೀಡಿದ ಸುದೀಪ್ ನಿರ್ಧಾರಕ್ಕೆ ಅಭಿಮಾನಿಗಳಿಂದ ತೀವ್ರ ವಿರೋಧ ವ್ಯಕ್ತವಾಗಿದೆ. ಇದು ಅಶ್ವಿನಿಯನ್ನು ಗೆಲ್ಲಿಸುವ ತಂತ್ರ ಎಂದು ಆರೋಪಿಸಲಾಗುತ್ತಿದ್ದು, ಈ ಬಗ್ಗೆ ನಟ ವಿನಯ್ ಗೌಡ ಪ್ರತಿಕ್ರಿಯೆ ನೀಡಿದ್ದಾರೆ.</p><img><p>ಬಿಗ್ಬಾಸ್ 12ರ ವಿನ್ನರ್ ಗಿಲ್ಲಿ ನಟನೇ ಆಗಬೇಕು ಎನ್ನುವ ಕೂಗು ಜೋರಾಗಿ ಕೇಳಿಬರುತ್ತಿದೆ. ಗಿಲ್ಲಿ ನಟನನ್ನು ಬಿಟ್ಟು ಬೇರೆ ಯಾರಿಗೇ ಈ ಹಂತದಲ್ಲಿ ಕಿಚ್ಚನ ಚಪ್ಪಾಳೆ ಸಿಕ್ಕರೆ ಅದನ್ನು ಅವರ ಅಭಿಮಾನಿಗಳು ಸಹಿಸುವುದಿಲ್ಲ. ಅದೇ ರೀತಿ ಮೊನ್ನೆ ಬಿಗ್ಬಾಸ್ನಲ್ಲಿ ಸುದೀಪ್ ಅವರು ವಾರದ ಮಾತ್ರವಲ್ಲದೇ ಹಾಗೂ ಸೀಸನ್ ಚಪ್ಪಾಳೆಯನ್ನು ಧ್ರುವಂತ್ ಮತ್ತು ಅಶ್ವಿನಿ ಗೌಡ ಅವರಿಗೆ ನೀಡಿರುವುದಕ್ಕೆ ಭಾರಿ ಟೀಕೆಗಳು ಕೇಳಿಬರುತ್ತಿವೆ.</p><img><p>ಇದಕ್ಕಾಗಿಯೇ ಸೋಷಿಯಲ್ ಮೀಡಿಯಾದಲ್ಲಿ ಸುದೀಪ್ ವಿರುದ್ಧ ಅಸಮಾಧಾನದ ಹೊಗೆಯಾಡುತ್ತಿದೆ. ಅಶ್ವಿನಿ ಗೌಡ (Ashwini Gowda) ಅವರನ್ನು ಗೆಲ್ಲಿಸುವ ಉದ್ದೇಶದಿಂದಲೇ ಹೀಗೆಲ್ಲಾ ಕಿತಾಪತಿ ಮಾಡಲಾಗುತ್ತಿದೆ ಎನ್ನುವುದು ಕೆಲವರ ಅಭಿಪ್ರಾಯ. ಇಡೀ ಸೀಸನ್ನಲ್ಲಿ ಆಟ, ಶಿಸ್ತು ಮತ್ತು ಮನರಂಜನೆಯನ್ನು ಸಮತೋಲನವಾಗಿ ನಡೆಸಿದವರು ಗಿಲ್ಲಿ ನಟ. ಆದರೆ ಸುದೀಪ್ ಮೋಸ ಮಾಡಿದ್ದಾರೆ ಎನ್ನುವುದು ಆರೋಪ.</p><img><p>ಇದೀಗ ಈ ಬಗ್ಗೆ ಬಿಗ್ಬಾಸ್ 10ರ ಸ್ಪರ್ಧಿ, ನಟ ವಿನಯ್ ಗೌಡ ಅವರು ಮಾತನಾಡಿದ್ದಾರೆ. ಬಿಗ್ಬಾಸ್ 12 ಶುರುವಾದಾಗ ಒಬ್ಬರು ವಾಯ್ಸ್ ರೇಸ್ ಮಾಡಿದ್ದರು. ಅದನ್ನು ರೈಸ್ ಮಾಡಿದ್ದು ಅಶ್ವಿನಿ ಮೇಡಂ. ಅವರು ಮಾಡಿರಲಿಲ್ಲ ಎಂದರೆ ಇದು ಆಗುತ್ತಿರಲಿಲ್ಲ ಎಂದಿದ್ದಾರೆ.</p><img><p>ಹಾಗೆಂದ ಮಾತ್ರಕ್ಕೆ ಅವರು ಕಳಪೆ, ಏನೂ ಮಾಡ್ತಿಲ್ಲ ಎನ್ನೋದು ತಪ್ಪು. ಎಲ್ಲರೂ ಅವರವರ ಆಟವನ್ನು ಆಡುತ್ತಿದ್ದಾರೆ. ಗೆಲ್ಲಲೇಬಾರದು ಎಂದು ಹೇಳ್ತಿರೋದು ಬೇರೊಬ್ಬರ ಮತ್ತೊಬ್ಬರ ಫ್ಯಾನ್ಸ್ ಅಲ್ವಾ? ಅಷ್ಟಕ್ಕೂ ಫ್ಯಾನ್ಸ್ ಹೇಳೋದನ್ನೆಲ್ಲಾ ಗಂಭೀರವಾಗಿ ತೆಗೆದುಕೊಳ್ಳಬಾರದು. ಏಕೆಂದರೆ ಬರೀ ಬಿಗ್ಬಾಸ್ ಮಾತ್ರವಲ್ಲ, ಸಿನಿಮಾ, ಸೀರಿಯಲ್ಗಳಲ್ಲಿಯೂ ಇದು ಇದದ್ದೇ ಎಂದಿದ್ದಾರೆ.</p><img><p>ಕೆಲವು ಪಿಆರ್ಗಳು ಕೆಟ್ಟದ್ದಾಗಿ ಮಾಡ್ತಿದ್ದಾರೆ. ಬಿಗ್ಬಾಸ್ ಗೆಲ್ಲಲು, ಮನೆಯಲ್ಲಿ ಇರುವವರಿಗೆ ಆಟವಾಡಲು ಬಿಟ್ಟುಬಿಡಬೇಕು. ಇಲ್ಲಿ ಪ್ರಚಾರ ಮಾಡಿ ಗೆಲ್ಲಿಸೋದು, ಸೋಲಿಸೋದು ಸರಿಯಲ್ಲ. ಗೇಮ್ ಪ್ರಕಾರ ಏನ್ ನಡೀತಾ ಇದೆ, ಹೇಗೆ ಆಡ್ತಾ ಇದ್ದಾರೆ ಪ್ರತಿಯೊಬ್ಬರೂ ನೋಡ್ತಾ ಇದ್ದಾರೆ. ಜರ್ನಿಯಲ್ಲಿ ಹೇಗೆ, ಯಾರು ಬಂದಿದ್ದಾರೆ ಎಂದು ಎಲ್ಲರೂ ನೋಡ್ತಿದ್ದಾರೆ ಎಂದು ವಿನಯ್ ಗೌಡ ಹೇಳಿದ್ದಾರೆ.</p><img><p>ಅಷ್ಟಕ್ಕೂ ಅಶ್ವಿನಿ ಮೇಡಂ ಅವರು ಇಲ್ಲದಿದ್ದರೆ ಅಷ್ಟೊಂದು ಬೂಸ್ಟ್ ಸಿಗುತ್ತಿರಲಿಲ್ಲ. ಗಿಲ್ಲಿ ಅವರು ತುಂಬಾ ಚೆನ್ನಾಗಿ ಆಡುತ್ತಿದ್ದಾರೆ. ಅವರಿಗೂ ಒಬ್ಬರು ಆಪನೆಂಟ್ ಬೇಕಲ್ಲ. ಸೋ ಎಲ್ಲರೂ ಚೆನ್ನಾಗಿ ಆಡ್ತಿದ್ದಾರೆ. ಹೀಗೆ ಹೇಳೋದು ಸರಿಯಲ್ಲ ಎಂದಿದ್ದಾರೆ ವಿನಯ್ ಗೌಡ.</p>
Source link
BBK 12: ಅಶ್ವಿನಿ ಗೌಡಗೆ ಕಿಚ್ಚನ ಚಪ್ಪಾಳೆ ವಿವಾದ: ಬಿಗ್ಬಾಸ್ ವಿನಯ್ ಗೌಡ ಹೇಳಿದ್ದೇನು?