ಆರ್ ಅಶೋಕ್ ಕಿಡಿ
ಬೆಂಗಳೂರು, ಜನವರಿ 13: ಜರ್ಮನ್ ಮಾದರಿ ಚಾನ್ಸಲರ್ ಕರ್ನಾಟಕಕ್ಕೆ ಆಗಮಿಸಿದ್ದ ಸಂದರ್ಭವೇ ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿ.ಕೆ. ಶಿವಕುಮಾರ್ ಇಬ್ಬರೂ ರಾಹುಲ್ ಗಾಂಧಿ ಭೇಟಿಗಾಗಿ ಮೈಸೂರಿಗೆ ತೆರಳಿದ್ದನ್ನು ವಿಪಕ್ಷ ನಾಯಕ ಆರ್. ಅಶೋಕ್ ಕಟುವಾಗಿ ಟಿಕಿಸಿದ್ದಾರೆ. ತಮ್ಮ ಎಕ್ಸ್ ಖಾತೆಯಲ್ಲಿ ಕಿಡಿ ಕಾರಿರುವ ಅವರು, ಆದ್ಯತೆಗಳ ತಪ್ಪು ನಿರ್ಧಾರದಿಂದ ಅವಕಾಶಗಳು ಕೈ ತಪ್ಪಿ ಹೋಗಿವೆ.
ಅಶೋಕ್ ಪೋಸ್ಟ್ ನಲ್ಲಿ ಏನಿದೆ?
ತಪ್ಪಾದ ಆದ್ಯತೆಗಳು ತಪ್ಪಿದ ಅವಕಾಶಗಳು
ಇಂದು, ಜರ್ಮನಿಯ ಫೆಡರಲ್ ಚಾನ್ಸೆಲರ್ ಕರ್ನಾಟಕಕ್ಕೆ ಭೇಟಿ ನೀಡಿದರು – ನಮ್ಮ ರಾಜ್ಯಕ್ಕೆ ಅಪಾರ ರಾಜತಾಂತ್ರಿಕ, ಆರ್ಥಿಕ ಮತ್ತು ಕಾರ್ಯತಂತ್ರದ ಮಹತ್ವದ ಕ್ಷಣ.
ಯಾವುದೇ ಇತರ ಜವಾಬ್ದಾರಿಯುತ ಮುಖ್ಯಮಂತ್ರಿಗಳು ಅಂತಹ ಭೇಟಿಯನ್ನು ವೈಯಕ್ತಿಕವಾಗಿ ಖಚಿತಪಡಿಸಿಕೊಳ್ಳುತ್ತಿದ್ದರು… https://t.co/pDjq5Oj6q2 pic.twitter.com/t8k981Q60K
– ಆರ್. ಅಶೋಕ (@RAshokaBJP) ಜನವರಿ 13, 2026
ತಮಿಳುನಾಡಿಗೆ ತೆರಳುವ ಮಾರ್ಗಮಧ್ಯೆ ಮೈಸೂರಿಗೆ ಆಗಮಿಸಿದ ನಮ್ಮ ನಾಯಕರಾದ ರಾಹುಲ್ ಗಾಂಧಿಯವರನ್ನು ರಾಜ್ಯಕ್ಕೆ ಪ್ರೀತಿಯಿಂದ ಬರಮಾಡಿಕೊಂಡು, ಶುಭ ಹಾರೈಸಿದೆ ಎಂಬ ಸಿದ್ದರಾಮಯ್ಯನವರ ಎಕ್ಸ್ ಫೊಸ್ಟ್ ಗೆ ಪ್ರತಿಕ್ರಿಯಿಸಿದ ಅಶೋಕ್, ಜರ್ಮನ್ ಚಾನ್ಸಲರ್ ಕರ್ನಾಟಕ ಭೇಟಿ ನಮ್ಮ ರಾಜ್ಯಕ್ಕೆ ರಾಜತಾಂತ್ರಿಕ, ಆರ್ಥಿಕ ಹಾಗೂ ತಂತ್ರವಾಗಿ ಅತ್ಯಂತ ಮಹತ್ವದ ಕ್ಷಣವಾಗಿತ್ತು. ಯಾವುದೇ ಜವಾಬ್ದಾರಿಯುತ ಮುಖ್ಯಮಂತ್ರಿ ಇದ್ದರೆ, ಅಂತಹ ಭೇಟಿಗೆ ಅಗತ್ಯವಿದ್ದಲ್ಲಿ ಇರುವ ಗಂಭೀರತೆಯನ್ನು ತುಂಬಿದೆ. ಇದು ಕರ್ನಾಟಕಕ್ಕೆ ಹೂಡಿಕೆ, ಕೈಗಾರಿಕೆ, ಉದ್ಯೋಗ ಮತ್ತು ಇತ್ತೀಚಿನ ಬೆಳವಣಿಗೆಯ ಅವಕಾಶ. ಆದರೆ ಇಂದು ಪರಿಸ್ಥಿತಿ ಏನು ಎಂದು ಪ್ರಶ್ನಿಸಿದ್ದಾರೆ.
ಇದನ್ನೂ ಓದಿ: ಗಡಿಯಲ್ಲಿ ನಿಂತು ಕೇರಳಕ್ಕೆ ಖಡಕ್ ಎಚ್ಚರಿಕೆ ನೀಡಿದ ಸಿದ್ದರಾಮಯ್ಯ
ಜಗತ್ತಿನ ಅತ್ಯಂತ ಬಲಿಷ್ಠ ಆರ್ಥಿಕತೆಯೊಂದರ ಮುಖ್ಯಸ್ಥರನ್ನು ಸ್ವಾಗತಿಸುವ ರಾಜಕೀಯ ನಿಷ್ಠೆ ಮತ್ತು ಹೈಕಮಾಂಡ್ಗಳು ಸಂತೋಷಪಡಿಸುವುದೇ ಇವರ ಹೆಚ್ಚಿನ ಆದ್ಯತೆಯಾಗಿದೆ. ಈ ನಡೆ ರಾಜ್ಯದ ಹಿತಾಸಕ್ತಿಗಳ ಬಗ್ಗೆ ನಿರ್ಲಕ್ಷ್ಯವನ್ನು ಪ್ರತಿಬಿಂಬಿಸುತ್ತಿದೆ. ಪಕ್ಷಕ್ಕಿಂತ ರಾಜ್ಯವನ್ನು ಮೊದಲು ಇಡುವ, ಅಧಿಕಾರ ರಾಜಕಾರಣಕ್ಕಿಂತ ರಾಜ್ಯದ ಪ್ರಗತಿಗೆ ಆದ್ಯತೆ ನೀಡುವ, ರಾಜಕೀಯ ತೃಪ್ತಿಗಿಂತ ಜಾಗತಿಕ ಅವಕಾಶಗಳಿಗೆ ಮಹತ್ವ ನೀಡುವ ನಾಯಕತ್ವಕ್ಕೆ ಕರ್ನಾಟಕ ಅರ್ಹವಾಗಿದೆ ಎಂದೂ ಅವರು ಹೇಳಿದ್ದಾರೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
ರಂದು ಪ್ರಕಟಿಸಲಾಗಿದೆ – 6:23 pm, ಮಂಗಳವಾರ, 13 ಜನವರಿ 26