ಅಯ್ಯೋ ನಲ್ಲಿ ಮೂಳೆ ಸಹವಾಸ ಸಾಕಪ್ಪ ಎಂದ ಗಿಲ್ಲಿ

ಅಯ್ಯೋ ನಲ್ಲಿ ಮೂಳೆ ಸಹವಾಸ ಸಾಕಪ್ಪ ಎಂದ ಗಿಲ್ಲಿ


ಬಿಗ್ಬಾಸ್ ನಲ್ಲಿ (ಬಿಗ್ ಬಾಸ್) ಈ ವಾರ ಫಿನಾಲೆ ವಾರ ಆಗಿದ್ದಕ್ಕೆ ಕಾರಣ ಏನು ಟಾಸ್ಕ್ ಅಲ್ಲ ಉಳಿದ ಮಂದಿ ಸ್ಪರ್ಧಿಗಳು ಆರಾಮವಾಗಿ ಮಾತನಾಡುತ್ತಾ ಎಂಜಾಯ್ ಮಾಡುತ್ತಾ ಕಾಲ ಕಳೆದರು. ಈ ವಾರ ಮನೆಯಲ್ಲಿ ಯಾವ ಜಗಳವೂ ಸಹ ಇರಲಿಲ್ಲ. ಆದರೆ ವಾರದ ಆರಂಭದಲ್ಲಿ ಬಿಗ್ ಬಾಸ್, ಸ್ಪರ್ಧಿಗಳಿಗೆ ಅವರ ಆಸೆ ಕೇಳಿದ್ದರು. ಆಗ ಗಿಲ್ಲಿ, ತಮಗೆ ನಲ್ಲಿ ಮೂಳೆ ತಿನ್ನುವ ಆಸೆ ಆಗಿದ್ದರು ಎಂದಿದ್ದರು. ನಲ್ಲಿ ಮೂಳೆ ತಿಂದು ನಿದ್ದೆ ಮಾಡಬೇಕು ಆಗ ನಾಯಿಗಳು ಬೊಗಳಬಾರದು ಎಂದಿದ್ದರು. ಅದರಂತೆ ಬಿಗ್ಬಾಸ್ ಸಹ ಮೂಳೆ ಕಳಿಸಿದ್ದರು. ಆದರೆ ಕೆಲವೇ ದಿನಗಳಲ್ಲಿ ಮೂಳೆಯ ಮೇಲೆ ಆಸೆಯೇ ಹೊರಟು ಹೋಗಿದೆ.

ನಲ್ಲಿ ಮೂಳೆ ಕಳಿಸಿದಾಗ ಗಿಲ್ಲಿ ಕಳಿಸಿದ ಅಷ್ಟೂ ನಲ್ಲಿ ಮೂಳೆಯನ್ನು ಒಬ್ಬರೇ ತಿಂದು ಬಿಟ್ಟರು. ಇತರ ಸ್ಪರ್ಧಿಗಳು ಎಚ್ಚರಿಕೆ ನೀಡಿದರೂ ಸಹ ಗಿಲ್ಲಿ ಲೆಕ್ಕ ಮಾಡದೆ ಒಂದೇ ಸಮನೆ ತಿಂದು ಮುಗಿಸಿದರು. ಅವರಿಗೆ ಬೇಧಿ ಶುರುವಾಗಿತ್ತು. ಅದರಿಂದ ಬಹಳ ಕಷ್ಟಪಟ್ಟರು. ಎದೆ ಉರಿ ಪ್ರಾರಂಭವಾಗಿದೆ.

ಇಂದು (ಶನಿವಾರ) ಸುದೀಪ್ ಅವರು ಗಿಲ್ಲಿಗೆ ಈ ವಿಷಯವಾಗಿ ಕೇಳಿದ್ದಕ್ಕೆ, ಅಯ್ಯೋ ಅವರ ಮೂಳೆ ಸಹವಾಸವೇ ಸಾಕು ಎನಿಸಿಬಿಟ್ಟಿದೆ ಎಂದರು. ಮತ್ತೊಮ್ಮೆ ಮೂಳೆ ಕಳಿಸಿಕೊಡುತ್ತೇನೆ ಎಂದರೂ ಸಹ ಗಿಲ್ಲಿ, ಬೇಡವೇ ಬೇಡ ಎಂದು ಗೋಗರೆದರು. ನಾನು ಮತ್ತೆ ಮೂಳೆ ತಿನ್ನಲ್ಲ, ಬೇಕಿದ್ದರೆ ಊಟ ಬಿಡುತ್ತೀನಿ ನಲ್ಲಿ ಮೂಳೆ ತಿನ್ನಲ್ಲ ಎಂದು ಗೋಗರೆದರು.

ಇದನ್ನೂ ಓದಿ:ಇಲ್ಲಿದ್ರೆ ಆನಂದ, ಮನೆಗೋದ್ರೆ ಗೋವಿಂದ: ಗಿಲ್ಲಿಯ ಬಿಗ್ಬಾಸ್ ರ್ಯಾಪ್ ಸಾಂಗ್

ಅಸಲಿಗೆ ಸುದೀಪ್, ಅದಕ್ಕೂ ಮುಂಚೆ ಮನೆಯವರಿಗೆಲ್ಲ ಈ ವಾರ ಪೂರ್ತಿ ಗಿಲ್ಲಿಯೇ ಅಡುಗೆ ಮಾಡಬೇಕು ಎಂದಿದ್ದರು. ಅದಕ್ಕೆ ಮನೆ ಸದಸ್ಯರು ಬೇಸರ ವ್ಯಕ್ತಪಡಿಸಿದ್ದಾರೆ. ಆದರೆ ಗಿಲ್ಲಿ ಮಾತ್ರ ಉತ್ಸಾಹ ಪ್ರದರ್ಶಿಸಿದ್ದರು. ಬಳಿಕ, ಗಿಲ್ಲಿಗೆ 30 ರಲ್ಲಿ ಮೂಳೆ ಕಳಿಸುತ್ತೇನೆ ಅಷ್ಟನ್ನೂ ತಿನ್ನಬೇಕು ಎಂದಾಗ ಮಾತ್ರ ಸಾಧ್ಯವೇ ಇಲ್ಲ ಎಂದು ಹೇಳಿದರು. ಬೇಕಿದ್ದರೆ ಅಡುಗೆ ಮಾಡುವುದು ಬಿಡುತ್ತೀನಿ, ಆದರೆ ಮೂಳೆ ಮಾತ್ರ ಕಳಿಸಬೇಡಿ ಎಂದು ಗೋಗರೆದರು. ಅತಿಯಾದರೆ ಅಮೃತವೂ ವಿಷ ಎಂಬುದಕ್ಕೆ ಗಿಲ್ಲಿಯಲ್ಲಿ ಪ್ರಸಂಗ ಒಂದೊಳ್ಳೆ ಉದಾಹರಣೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ



Source link

Leave a Reply

Your email address will not be published. Required fields are marked *