
ಸಿನಿಮಾಗಳಲ್ಲಿ ನಟಿಸಿ ಗಮನ ಸೆಳೆದ ಕರಿ ಬಸಪ್ಪ ಮೊದಲ ವಾರವೇ ಹೊರ ಹೋದರು. ಜರನ್ನು ಇಂಪ್ರೆಸ್ ಮಾಡಲು ಸಾಧ್ಯವಾಗಿಲ್ಲ.

ಮೊದಲ ವಾರ ನಡೆದಿದ್ದ ಜೋಡಿ ಎಲಿಮಿನೇಷನ್. ಹೀಗಾಗಿ ಕರಿ ಬಸಪ್ಪ ಜೊತೆ ಇದ್ದ ಆರ್ ಜೆ ಅಮಿತ್ ಕೂಡ ಎಲಿಮಿನೇಟ್ ಆದರು. ವರು ಮಾತಾಡೋದಿಲ್ಲ ಎಂಬ ಆರೋಪ ಕೇಳಿ ಬಂದಿತ್ತು.

ಸತೀಶ್ ಕ್ಯಾಡಬಾಮ್ ಅವರು ಈ ಬಾರಿ ಬಿಗ್ ಬಾಸ್ ಮನೆಗೆ ಬಂದಿದ್ದರು. ಅವರು 18ನೇ ದಿನ ದೊಡ್ಮನೆಯಿಂದ ಹೊರ ಹೋದರು. ಮೂರನೇ ವಾರದ ಫಿನಾಲೆಗೂ ಮೊದಲು ನಡೆದ ಮಿಡ್ ವೀಕ್ ಎಲಿಮಿನೇಷನ್ ಅಲ್ಲಿ ಅವರು ಹೊರ ಹೋದರು. ಕಡಿಮೆ ಮತ ಅವರಿಗೆ ಸಿಕ್ಕಿತ್ತು.

ಮಂಜು ಭಾಷಿಣಿ ಅವರು ಧಾರಾವಾಹಿ ಮೂಲಕ ಗಮನ ಸೆಳೆದವರು. ಅವರು ಬಿಗ್ ಬಾಸ್ ಮನೆಯಲ್ಲಿ ಇದ್ದಿದ್ದು 21 ದಿನ ಮಾತ್ರ. ಮೂರನೇ ವಾರ ನಡೆದ ಫಿನಾಲೆಯಲ್ಲಿ ಹೊರ ಹೋದರು.

ಧಾರಾವಾಹಿಗಳ ಮೂಲಕ ಗಮನ ಸೆಳೆದ ಅಶ್ವಿನಿ ಎಸ್ ಅವರು ದೊಡ್ಮನೆಯಿಂದ ಹೊರ ಬಂದಿದ್ದು ಮೂರನೇ ವಾರದ ಫಿನಾಲೆ ದಿನವೇ. ಈ ವಿಷಯ ಅವರಿಗೆ ಸಾಕಷ್ಟು ಬೇಸರ ಮೂಡಿಸಿತ್ತು.

42ನೇ ದಿನಕ್ಕೆ ಚಂದ್ರಪ್ರಭ ಹೊರ ಹೋದರು. ಬಿಗ್ ಬಾಸ್ ಪರಿಸರ ಅವರಿಗೆ ಟಾಕ್ಸಿಕ್ ಅನುಭವ ನೀಡಿತ್ತು. ಹೀಗಾಗಿ, ತಾವಾಗೇ ಹೊರೋದಾಗಿ ಹೇಳುವಂತೆ. ಕಡಿಮೆ ಮತ ಪಡೆದು ಎಲಿಮಿನೇಟ್ ಆದರು.


ಕಾಕ್ರೋಚ್ ಸುಧಿ ಅವರು ಬಿಗ್ ಬಾಸ್ ಮನೆಯಲ್ಲಿ ಹೆಚ್ಚು ದಿನ ಇರುತ್ತಾರೆ ಎಂಬ ಊಹೆ ಅನೇಕರದ್ದಾಗಿತ್ತು. ಆದರೆ, 50 ದಿನವನ್ನು ಅವರು ಪೂರೈಸಿಲ್ಲ. 49ನೇ ದಿನಕ್ಕೆ ಅವರ ಜರ್ನಿ ಕೊನೆ ಆಯಿತು.

ವೈಲ್ಡ್ ಕಾರ್ಡ್ ಮೂಲಕ 22ನೇ ದಿನಕ್ಕೆ ದೊಡ್ಮನೆಗೆ ಬಂದ ರಿಶಾ ಗೌಡ ಅವರು 56ನೇ ದಿನ ಎಲಿಮಿನೇಟ್ ಆದರು. ಅವರು ಗಿಲ್ಲಿಗೆ ಹೊಡೆದು ಚರ್ಚೆ ಆಗಿದ್ದರು. ಆಗ ಅವರನ್ನು ಎಲಿಮಿನೇಷನ್ ಮಾಡಿರಲಿಲ್ಲ.

ಆ್ಯಂಕರ್ ಜಾನ್ವಿ ಅವರು ವಿವಾದಗಳಿಂದ ಬಿಗ್ ಬಾಸ್ ಮನೆಯಲ್ಲಿ ಚರ್ಚೆಯಾಗಿದ್ದರು. ಅವರ 63ನೇ ದಿನಕ್ಕೆ ದೊಡ್ಮನೆಯಿಂದ ಎಲಿಮಿನೇಟ್ ಆದರು.

ಅಭಿಷೇಕ್ ಅವರು 70ನೇ ದಿನಕ್ಕೆ ಬಿಗ್ ಬಾಸ್ ಮನೆಯಿಂದ ಹೊರ ಹೋದರು. ಅವರು ಆಡಿಲ್ಲ ಎಂಬ ಅಭಿಪ್ರಾಯ ವೀಕ್ಷಕರದ್ದು.

ಬಿಗ್ ಬಾಸ್ ಮನೆಗೆ ಅತಿಥಿಯಾಗಿ ಬಂದು, ನಂತರ ಸ್ಪರ್ಧಿಗಳು ಎಂಬ ರೀತಿಯಲ್ಲಿ ಇಬ್ಬರು. ಒಂದು ತಿಂಗಳ ಬಾಸ್ ರಜತ್ ಬಿಗ್ ಮನೆಯಲ್ಲಿದ್ದರು. ಇವರು ಅತಿಥಿಯಾಗಿದ್ದರು. 84ನೇ ದಿನ ಹೊರ ಹೋದರು.

ರಜತ್ ಜೊತೆ ಚೈತ್ರಾ ಕೂಡ ಬಂದಿದ್ದರು. ಬಂದ ಒಂದೇ ತಿಂಗಳಲ್ಲಿ ಕ್ಯಾಪ್ಟನ್, ಕಳಪೆ ಹಾಗೂ ಉತ್ತಮ ಸಾಧನೆ ಮಾಡಿದರು ಚೈತ್ರಾ.

ವೈಲ್ಡ್ ಕಾರ್ಡ ಮೂಲಕ ಮೂರನೇ ವಾರ ದೊಡ್ಮನೆಗೆ ಎಂಟ್ರಿ ಕೊಟ್ಟವರಲ್ಲಿ ಸೂರಜ್ ಕೂಡ ಒಬ್ಬರು. ಅವರು ದೊಡ್ಮನೆಯಲ್ಲಿ ಸರಿಯಾಗಿ ಮೂರು ತಿಂಗಳು ಅಂದರೆ 90 ದಿನ.

ಉತ್ತರ ಕರ್ನಾಟಕ ಪ್ರತಿಭೆ ಮಾಳು ಅವರು 91ನೇ ದಿನ ಎಲಿಮಿನೇಟ್ ಆದರು. ಎಲಿಮಿನೇಷನ್ ನ ಅವರು ಒಪ್ಪಿಕೊಳ್ಳಲು ರೆಡಿ ಇರಲೇ ಇಲ್ಲ.

ಕಲರ್ಸ್ ಖೋಟಾ ಮೇಲೆ ಇದ್ದಾರೆ ಎಂಬ ಆರೋಪ ಹೊತ್ತಿದ್ದ ಸ್ಪಂದನಾ ಅವರು 98ನೇ ದಿನ ಎಲಿಮಿನೇಟ್ ಆದರು. ಅವರು ಆರೋಪವನ್ನು ಅಲ್ಲೆಗಳೆದಿದ್ದರು.

ಟಾಸ್ಕ್ ಕ್ವೀನ್ ಎನಿಸಿಕೊಂಡಿದ್ದ ರಾಶಿಕಾ ಶೆಟ್ಟಿ ಅವರು ದೊಡ್ಮನೆಯಲ್ಲಿ 100 ದಿನ ಪೂರೈಸಿದ್ದರು. 105ನೇ ದಿನ ಅವರು ಹೋದರು. ಫಿನಾಲೆ ಕನಸು ಭಗ್ನವಾಯಿತು.

ಬಿಗ್ ಬಾಸ್ ನಲ್ಲಿ ವಿಚಿತ್ರ ವ್ಯಕ್ತಿತ್ವದ ವ್ಯಕ್ತಿ ಎಂಬ ಖ್ಯಾತಿ ಧ್ರುವಂತ್ ಗೆ ಸಿಗುತ್ತದೆ. ಅವರು 108ನೇ ದಿನ ಮಿಡ್ ವೀಕ್ ಎಲಿಮಿನೇಷನ್ ನಲ್ಲಿ ಹೊರ ಹೋದರು. ಅವರು ಫಿನಾಲೆ ವೀಕ್ ತಲುಪಿದ್ದರು.

ಧನುಶ್ ಅವರು ‘ಬಿಗ್ ಬಾಸ್ ಕನ್ನಡ’ದ ಈ ಸೀಸನ್ ಟಾಪ್ 6ರಲ್ಲಿ ಇಬ್ಬರು. ಟಾಪ್ ಆರರಿಂದ ಮೊದಲು ಔಟ್ ಆದ ಸ್ಪರ್ಧಿ

ರಘು ಅವರು ‘ಕ್ವಾಟ್ಲೆ ಕಿಚನ್’ ವಿನ್ನರ್. ಈ ಬಾರಿ ವೈಲ್ಡ್ ಕಾರ್ಡ್ ನಲ್ಲಿ ಹೊರ ಬಂದ ಅವರು ನಾಲ್ಕನೇ ರನ್ ಅಪ್ ಸ್ಥಾನ ಪಡೆದರು.

ಕಾವ್ಯಾ ಶೈವ ಅವರು ಫಿನಾಲೆಯಲ್ಲಿ ಟಾಪ್ 5ರಲ್ಲಿ ಇಬ್ಬರು. ಇವರು ಮೂರನೇ ರನ್ನರ್ ಅಪ್ ಸ್ಥಾನವನ್ನು ಅಲಂಕರಿಸಿದರು.

ಅಶ್ವಿನಿ ಗೌಡ ವಿನ್ನರ್ ಆಗಬೇಕು ಎಂಬುದು ಎಲ್ಲರ ಕೋರಿಕೆ. ಆದರೆ, ಆಗಲಿಲ್ಲ. ಅವರು ಎರಡನೇ ರನ್ನರ್ ಅಪ್ ಸ್ಥಾನಕ್ಕೆ ಖುಷಿಪಟ್ಟರು.

ಬಿಗ್ ಬಾಸ್ ಜರ್ನಿಯನ್ನು ಜೀವಿಸಿದ ರಕ್ಷಿತಾ ಶೆಟ್ಟಿ ಮೊದಲ ವಾರವೇ ಹೊರ ಹೋಗಿದ್ದರು. ನಂತರ ಮರಳಿ ಬಂದರು ರನ್ನರ್ ಅಪ್ ಆದರು.

ಗಿಲ್ಲಿ ಈ ಸೀಸನ್ ವಿನ್ನರ್. 50 ಲಕ್ಷ ರೂಪಾಯಿ ಹಣದ ಜೊತೆಗೆ, ಮಾರುತಿ ಸುಜುಕಿ ವಿಕ್ಟೋರಿಸ್ ಕಾರು, ಸುದೀಪ್ ಕಡೆಯಿಂದ 10 ಲಕ್ಷ ರೂಪಾಯಿ ಸಿಕ್ಕಿದೆ. ಜೊತೆಗೆ ಆಕರ್ಷಕ ಟ್ರೋಫಿ ಕೂಡ ದೊರಕಿದೆ.
ರಂದು ಪ್ರಕಟಿಸಲಾಗಿದೆ – 7:29 am, ಸೋಮ, 19 ಜನವರಿ 26