
ವಿನ್ಯಾಸದ ಮತ್ತೊಂದು ಅತ್ಯಂತ ಗಮನಾರ್ಹ ಅಂಶವೆಂದರೆ ಶ್ರೀಕೃಷ್ಣನ ಹುಟ್ಟಿನಿಂದ ಬಾಲ್ಯದವರೆಗಿನ ಜೀವನದ ಚಿತ್ರಣ. ದಕ್ಷಿಣ ಭಾರತೀಯ ಶೈಲಿಯ ಚಿತ್ರಣವು ಕೃಷ್ಣನನ್ನು ಒಂದು ಮುಖ ಮತ್ತು ಐದು ದೇಹಗಳನ್ನು ಹೊಂದಿದ್ದು, ಎಂಟು ಹಸುಗಳು ಅವನನ್ನು ಸುತ್ತುವರೆದಿದ್ದು, ಭಕ್ತಿಯಿಂದ ಅವನನ್ನು ನೋಡುತ್ತಿರುವುದನ್ನು ತೋರಿಸುತ್ತದೆ. ಕಾರ್ಡಿನ ಅಂಚುಗಳ ಸುತ್ತಲೂ, ವಿಷ್ಣುವಿನ ಹತ್ತು ಅವತಾರಗಳನ್ನು ಕೆತ್ತಲಾಗಿದೆ. ಇದರ ಮತ್ತೊಂದು ವಿಶಿಷ್ಟತೆ ಎಂದರೆ ಆಮಂತ್ರಣ ಪತ್ರಿಕೆಯನ್ನು ಒಂದೇ ಒಂದು ಮೊಳೆ ಅಥವಾ ಸ್ಕ್ರೂ ಇಲ್ಲದೆ 128 ಬೆಳ್ಳಿಯ ತುಂಡುಗಳನ್ನು ಬಳಸಿ ಜೋಡಿಸಲಾಗಿದೆ. ಕಾರ್ಡ್ನ ಪರಿಕಲ್ಪನೆ ಮತ್ತು ವಿನ್ಯಾಸವನ್ನು ಸ್ವತಃ ರೂಪಿಸಲು ಮತ್ತು ವಿನ್ಯಾಸಗೊಳಿಸಲು ಜೋಹರಿ ಸುಮಾರು ಒಂದು ವರ್ಷ ತೆಗೆದುಕೊಂಡಿದ್ದಾರೆ., ಪ್ರತಿಯೊಂದು ವಿವರವು ತನ್ನ ಮಗಳ ಮೇಲಿನ ಭಕ್ತಿ ಮತ್ತು ಪ್ರೀತಿಯನ್ನು ಪ್ರತಿಬಿಂಬಿಸುತ್ತದೆ ಎಂದು ಅವರು ಹೇಳಿದ್ದಾರೆ.
ಸೋಶಿಯಲ್ ಮೀಡಿಯಾ ಬಳಕೆದಾರರು ಈ ವಿಶೇಷವಾದ ಆಹ್ವಾನ ಪತ್ರಿಕೆಯನ್ನು ಆರ್ಟ್ ಆಫ್ ವರ್ಕ್, ತಂದೆಯ ಪ್ರೀತಿ, ಬಹಳ ಅರ್ಥಪೂರ್ಣವಾದ ಮದುವೆ ಆಹ್ವಾನ ಪತ್ರಿಕೆ ಎಂದೆಲ್ಲಾ ಕರೆದಿದ್ದಾರೆ. ಇದು ಭಾರತೀಯ ಮದುವೆ ನಂಬಿಕೆ ಭಾವನೆಗಳನ್ನು ಬಹಳ ಅದ್ಭುತವಾಗಿ ತೋರಿಸುತ್ತಿದೆ ಎಂದು ಅನೇಕರು ಬಣ್ಣಿಸಿದ್ದಾರೆ.