
<p>Amruthadhaare Kannada Serial Today Episode: ಅಮೃತಧಾರೆ ಧಾರಾವಾಹಿಯಲ್ಲಿ ಗೌತಮ್ ಹಾಗೂ ಭೂಮಿಕಾ ನಡುವೆ ಇದ್ದ ದೂರ ಎಲ್ಲವೂ ಮಾಯವಾಗಿದೆ. ಸದಾಶಿವ ಹಾಗೂ ಭೂಮಿಕಾ ಭೇಟಿಯಾಗಿದ್ದು, ಇಷ್ಟುದಿನ ಏನು ನಡೆಯಿತು ಎಂದು ಅವಳು ಹೇಳಿಕೊಂಡಿದ್ದಳು. ಇದರಿಂದಲೇ ಇದ್ದ ಸಮಸ್ಯೆ ಬಗೆಹರಿದಿದೆ.</p><p> </p><img><p>ಗೌತಮ್ ವಿದೇಶಕ್ಕೆ ಹೋದಾಗ, ಮಗನಿಗೆ ಶಕುಂತಲಾ ಅಪಾಯ ಮಾಡೋಕೆ ನೋಡಿದ್ದು, ಆಮೇಲೆ ತಲೆಗೆ ಗನ್ ಇಟ್ಟು, ನೀನು ಈ ಮನೆಯಿಂದ ದೂರ ಆದರೆ ಮಾತ್ರ ನಿನ್ನವರು ಚೆನ್ನಾಗಿ ಇರುತ್ತಾರೆ ಎಂದು ಹೇಳಿದ್ದನ್ನೆಲ್ಲವನ್ನು ಭೂಮಿ ತನ್ನ ತಂದೆಗೆ ಹೇಳಿದಳು. ಸದಾಶಿವ ಪರಿಸ್ಥಿತಿ ಅರ್ಥ ಮಾಡಿಕೊಂಡು, ಮಗಳಿಗೆ ಅಳಿಯನ ಜೊತೆ ಬದುಕು ಎಂದು ಹೇಳಿದ್ದಾನೆ.</p><img><p>ಭೂಮಿಕಾ ಕೂಡ, ಗೌತಮ್ನನ್ನು ಭೇಟಿಯಾಗಿದ್ದಾಳೆ. ಅಲ್ಲಿ ಅವಳು ಶಕುಂತಲಾಳ ನಿಜವಾದ ಬಣ್ಣ ಏನು ಎಂದು ಹೇಳಿದ್ದಾಳೆ. ನನ್ನವರು ಎಂದುಕೊಂಡವರೇ ಈ ರೀತಿ ಮಾಡಿದರು ಎಂದು ಗೌತಮ್ ಕೂಡ ಬೇಸರ ಹೊರಹಾಕಿದ್ದಾನೆ.</p><img><p>ಅಂದಹಾಗೆ ಭೂಮಿಕಾ, ಗೌತಮ್ ಒಂದಾಗಿದ್ದಾರೆ. ಇನ್ನು ಮುಂದಿನ ದಿನಗಳಲ್ಲಿ ಮಕ್ಕಳ ಜೊತೆ ನಾವು ಚೆನ್ನಾಗಿ ಬದುಕೋಣ, ನಮ್ಮದೇ ಆದ ಒಂದು ಪುಟ್ಟ ಗೂಡಿನಲ್ಲಿ ಜೀವನ ಕಟ್ಟಿಕೊಳ್ಳೋಣ, ಯಾವ ದ್ವೇಷವೂ ಬೇಡ ಎಂದು ಭೂಮಿಕಾ ಹೇಳಿದ್ದಾಳೆ. ಇದಕ್ಕೆ ಗೌತಮ್ ಕೂಡ ಒಪ್ಪಿದ್ದಾನೆ.</p><img><p>ಈಗ ಗೌತಮ್ ಹಾಗೂ ಭೂಮಿಕಾ ಕಲ್ಯಾಣೋತ್ಸವ ಮಾಡಿದ್ದಾರೆ. ಅಲ್ಲಿ ಸದಾಶಿವ ಕುಟುಂಬಸ್ಥರು, ಗೌತಮ್ ತಾಯಿ, ಅಜ್ಜಿ ಎಲ್ಲರೂ ಬಂದಿದ್ದಾರೆ. ಒಟ್ಟಿನಲ್ಲಿ ಇಡೀ ಮನೆಯಲ್ಲಿ ಸಂಭ್ರಮ ಮನೆ ಮಾಡಿದೆ. ಮುಂದೆ ಏನಾಗುವುದು ಎಂದು ಕಾದು ನೋಡಬೇಕಿದೆ.</p><img><p>ಗೌತಮ್-ಭೂಮಿಕಾ ಕುಟುಂಬ ಒಂದಾಗಿದೆ. ಆದರೆ ಜಯದೇವ್ ಮಾತ್ರ ಸುಮ್ಮನೆ ಇರಬೇಕಲ್ವಾ? ಗೌತಮ್ ಹಾಗೂ ಮಲ್ಲಿ ಕುಟುಂಬ ಹಾಳಾದರೆ, ಅವರು ನೋವಿನಿಂದ ಒದ್ದಾಡುತ್ತಿದ್ರೆ ಮಾತ್ರ ಜಯದೇವ್ಗೆ ಖುಷಿ ಆಗುವುದು. ಇವರ ಖುಷಿ ಹಾಳು ಮಾಡಲು ಅವು ಏನು ಮಾಡುತ್ತಾನೆ ಎಂದು ಕಾದು ನೋಡಬೇಕಿದೆ.</p>
Source link
Amruthadhaare Serial: ವೀಕ್ಷಕರ ಬಹುದಿನದ ಬೇಡಿಕೆಗೆ ತಥಾಸ್ತು ಎಂದ ದೇವರು! ಇದೇ ಅಮೃತಘಳಿಗೆ