Karna Serial: ಕರ್ಣ- ನಿಧಿ ದೂರ ಆಗ್ತಾರಾ? ಈ ಸಂಭಾಷೆಯಲ್ಲಿ ಅಡಗಿದೆ ಭಯಾನಕ ಮುನ್ಸೂಚನೆ!

Karna Serial: ಕರ್ಣ- ನಿಧಿ ದೂರ ಆಗ್ತಾರಾ? ಈ ಸಂಭಾಷೆಯಲ್ಲಿ ಅಡಗಿದೆ  ಭಯಾನಕ ಮುನ್ಸೂಚನೆ!



Karna Serial: ಕರ್ಣ- ನಿಧಿ ದೂರ ಆಗ್ತಾರಾ? ಈ ಸಂಭಾಷೆಯಲ್ಲಿ ಅಡಗಿದೆ  ಭಯಾನಕ ಮುನ್ಸೂಚನೆ!
ನಿತ್ಯಾ-ತೇಜಸ್​ರನ್ನು ಒಂದು ಮಾಡಲು ಹೋಗಿ ಕರ್ಣ ಸಂಕಷ್ಟಕ್ಕೆ ಸಿಲುಕಿದ್ದಾನೆ. ನಿತ್ಯಾಳ ಮಗುವಿಗೆ ತಾನೇ ತಂದೆ ಎಂದು ಹೇಳಿ ನಿಧಿಯಿಂದ ದೂರವಾಗುವ ಸ್ಥಿತಿ ತಂದುಕೊಂಡಿದ್ದಾನೆ. ಇದೀಗ ನಿಧಿಯೊಂದಿಗೆ ಮತ್ತೆ ಒಂದಾಗುವ ಭರವಸೆ ನೀಡಿದ್ದು, ಈ ಮಾತುಗಳೇ ಅಪಾಯದ ಮುನ್ಸೂಚನೆಯಂತೆ ಕಾಣಿಸುತ್ತಿದೆ.<img><p>ಕರ್ಣ ಸೀರಿಯಲ್​ (Karna Serial)ನಲ್ಲಿ ಸದ್ಯ ನಿತ್ಯಾ ಮತ್ತು ತೇಜಸ್​ ದೂರವಾಗಿದ್ದಾರೆ. ಅವರ ಲೈಫ್ ಸರಿ ಮಾಡಲು ಹೋಗಿರುವ ಕರ್ಣನಿಗೆ ದಿಕ್ಕೇ ತೋಚದಾಗಿದೆ. ಏಕೆಂದರೆ, ನಿತ್ಯಾ ಮತ್ತು ತೇಜಸ್​ ಒಂದಾಗದ ಹೊರತೂ ನಿಧಿ ಮತ್ತು ಕರ್ಣ ಒಂದಾಗೋದು ಸಾಧ್ಯವೇ ಇಲ್ಲ.</p><img><p>ಆದರೆ, ಈಗ ಎಲ್ಲವೂ ಅಯೋಮಯವಾಗಿದೆ. ಇದರ ಹೊರತಾಗಿಯೂ ಇವರಿಬ್ಬರೂ ಪ್ರೀತಿಸ್ತಾ ಇರೋ ವಿಷ್ಯ ಯಾರಿಗೂ ಗೊತ್ತಿಲ್ಲ. ಅದೇ ಈಗ ನಿತ್ಯಾ ಹೊಟ್ಟೆಯಲ್ಲಿ ಇರುವ ಮಗು ತನ್ನದೇ ಎಂದು ಕರ್ಣ ಹೇಳಿದ ಮೇಲಂತೂ, ನಿಧಿ-ಕರ್ಣ ಒಂದಾಗೋದು ದೂರದ ಮಾತೇ ಆಗಿಬಿಟ್ಟಿದೆ.</p><img><p>ಇದೀಗ ಅದೇ ಕೊರಗಿನಲ್ಲಿ ಕರ್ಣ ಊಟಮಾಡಲಿಲ್ಲ. ನಿಧಿ ಕೈಯಾರೆ ಅಡುಗೆ ಮಾಡಿ ಕರ್ಣನಿಗೆ ಸಮಾಧಾನ ಮಾಡಿ ಊಟ ಮಾಡಿಸುತ್ತಿದ್ದಾಳೆ. ಆಗ ಅವರಿಬ್ಬರ ನಡುವೆ ನಡೆದ ಮಾತುಕತೆ ನೋಡಿದರೆ, ಇದು ಅಪಾಯದ ಮುನ್ಸೂಚನೆ ಎನ್ನುವ ಹಾಗೆ ಕಾಣಿಸುತ್ತಿದೆ.</p><img><p>ಅದೇನೆಂದರೆ, ಕರ್ಣ ನಿಧಿಗೆ, ಅದೇನೇ ಬಂದರೂ ನಾನು ನಿಮ್ಮ ಕೈಬಿಡಲ್ಲ ಎಂದಿದ್ದಾನೆ. ಅದೇ ರೀತಿ ನಿಧಿ ಕೂಡ ದೇವರೇ ಅಡ್ಡ ಬಂದರೂ ನಮ್ಮಿಬ್ಬರನ್ನೂ ಬೇರೆ ಮಾಡಲು ಸಾಧ್ಯವಿಲ್ಲ ಎಂದಿದ್ದಾಳೆ. ಇಂಥ ಡೈಲಾಗ್​ಗಳು ಸಾಮಾನ್ಯವಾಗಿ ಮಾತು ಈಡೇರದ ಸಂದರ್ಭಗಳಲ್ಲಿ ಬರುವುದು ಇದೆ.</p><img><p>ಅದರಲ್ಲಿಯೂ ಈ ಡೈಲಾಗ್​ ಹೇಳುವ ಸಮಯದಲ್ಲಿ ಕೊಟ್ಟಿರುವ ಹಿನ್ನೆಲೆ ಮ್ಯೂಸಿಕ್​, ಡಬಲ್​ ವಾಯ್ಸ್​ ಎಲ್ಲವನ್ನೂ ಕೇಳಿದರೆ, ಬಹುಶಃ ಇದು ಅಪಾಯದ ಮುನ್ಸೂಚನೆ ಎಂದು ತೋರುತ್ತಿದೆ. ಹಾಗೆ ಆಗದೇ ಇರಲಪ್ಪ ಎಂದು ಸೀರಿಯಲ್​ ಪ್ರೇಮಿಗಳು ಬೇಡಿಕೊಳ್ಳುತ್ತಿದ್ದಾರೆ.</p>



Source link

Leave a Reply

Your email address will not be published. Required fields are marked *