ಕಂಬಳದಲ್ಲಿ ದಾಖಲೆ ಬರೆದ ಶ್ರೀನಿವಾಸ್‌ ಗೌಡ ನಟನೆ, ರಾಜೇಂದ್ರ ಸಿಂಗ್‌ ಬಾಬು Veera Kambala Movie ರಿಲೀಸ್‌ ಯಾವಾಗ? | Director Rajendra Singh Babu Veera Kambala Movie Kannada Release February 2026

ಕಂಬಳದಲ್ಲಿ ದಾಖಲೆ ಬರೆದ ಶ್ರೀನಿವಾಸ್‌ ಗೌಡ ನಟನೆ, ರಾಜೇಂದ್ರ ಸಿಂಗ್‌ ಬಾಬು Veera Kambala Movie ರಿಲೀಸ್‌ ಯಾವಾಗ? | Director Rajendra Singh Babu Veera Kambala Movie Kannada Release February 2026



ಕಂಬಳದಲ್ಲಿ ದಾಖಲೆ ಬರೆದ ಶ್ರೀನಿವಾಸ್‌ ಗೌಡ ನಟನೆ, ರಾಜೇಂದ್ರ ಸಿಂಗ್‌ ಬಾಬು Veera Kambala Movie ರಿಲೀಸ್‌ ಯಾವಾಗ? | Director Rajendra Singh Babu Veera Kambala Movie Kannada Release February 2026

Veera Kambala Movie: ರಾಜೇಂದ್ರ ಸಿಂಗ್‌ ಬಾಬು ನಿರ್ದೇಶನದ ವೀರಗಂಬಳ ಸಿನಿಮಾ ರಿಲೀಸ್‌ಗೆ ರೆಡಿಯಿದೆ. 800 ವರ್ಷಗಳ ಇತಿಹಾಸ ಹೊಂದಿರುವ ಈ ಕ್ರೀಡೆಯನ್ನು ಇಟ್ಟುಕೊಂಡು ಸಿನಿಮಾ ಮಾಡಲಾಗಿದೆ. 

ಹಿರಿಯ ನಿರ್ದೇಶಕ ರಾಜೇಂದ್ರ ಸಿಂಗ್ ಬಾಬು ನಿರ್ದೇಶನದ ಸಿನಿಮಾ `ವೀರ ಕಂಬಳ’ ( Veera Kambala Movie ). ಕಂಬಳ ಎಂಬುದು ತುಳುನಾಡಿನ ಕ್ರೀಡೆ. 800 ವರ್ಷಗಳಿಗೂ ಹೆಚ್ಚಿನ ಇತಿಹಾಸವಿದೆ. ಒಂದಷ್ಟು ಕಾನೂನು ತೊಡಕುಗಳು ಬಂದರೂ ಕೂಡ, ಕಂಬಳ ಒಂದಷ್ಟು ರೂಪಾಂತರಗಳನ್ನು ಹೊಂದಿದೆ.

ಇತಿಹಾಸವಿರುವ ಕ್ರೀಡೆ

ನಿಖರವಾದ ಇತಿಹಾಸದ ಸುತ್ತ ಹೆಜ್ಜೆಯಿಟ್ಟ ರಾಜೇಂದ್ರ ಸಿಂಗ್ ಬಾಬು ಅವರು, ಕನ್ನಡ ಹಾಗೂ ತುಳು ಭಾಷೆಗಳಲ್ಲಿ ಈ ಸಿನಿಮಾವನ್ನು ರೂಪಿಸಿದ್ದಾರೆ. ವೀರ ಕಂಬಳ ಸಿನಿಮಾವು ಫೆಬ್ರವರಿ ತಿಂಗಳಿನಲ್ಲಿ ರಿಲೀಸ್‌ ಆಗಲಿದೆ.

ಕಂಬಳವನ್ನು ಕೇಂದ್ರವಾಗಿಟ್ಟುಕೊಂಡು ಈ ಸಿನಿಮಾ ಮಾಡಲು ನಿರ್ದೇಶಕರು 2 ವರ್ಷಗಳ ಸಮಯ ತಗೊಂಡಿದ್ದಾರೆ. ತುಳು ರಂಗಭೂಮಿಯ ನಿರ್ದೇಶಕ ವಿಜಯ್ ಕೊಡಿಯಾಲ್ ಬೈಲ್ ಚಿತ್ರಕಥೆ, ಸಂಭಾಷಣೆ ಬರೆದಿದ್ದಾರೆ. ಡೆಡ್ಲಿ ಸೋಮ ಖ್ಯಾತಿಯ ಆದಿತ್ಯ ಹೀರೋ ಆಗಿದ್ದಾರೆ. ಪ್ರತಿಯೊಂದು ಸೂಕ್ಷ್ಮ ವಿಚಾರಗಳನ್ನು ಗಮನದಲ್ಲಿಟ್ಟುಕೊಂಡು, ತುಳುನಾಡಿನ ಪ್ರಾಜ್ಞರ ಮಾರ್ಗದರ್ಶನವನ್ನು ಪಡೆಯಲಾಗಿದೆ. ವೀರ ಕಂಬಳ ಈಗ ರಿಲೀಸ್‌ಗೆ ರೆಡಿಯಾಗಿದೆ.

ಸಿನಿಮಾ ಹೇಗೆ ಮೂಡಿ ಬಂತು?

ದಕ್ಷಿಣ ಕನ್ನಡದ ಮೂಡುಬಿದರೆಯಲ್ಲಿ ವಿಶಾಲವಾಗಿ ಕಂಬಳದ ಗದ್ದೆ ಮಾಡಲಾಗಿದೆ, ಅಲ್ಲಿ ಒಂದಿಷ್ಟು ದೃಶ್ಯಗಳನ್ನು ಸೆರೆಹಿಡಿಯಲಾಗಿದೆ. ಪ್ರತಿ ದಿನವೂ 20 ಜೊತೆ ಕೋಣಗಳು, 500ಕ್ಕೂ ಅಧಿಕ ಮಂದಿ ಚಿತ್ರೀಕರಣದಲ್ಲಿ ಭಾಗಿಯಾಗಿದ್ದಾರೆ. ಕಂಬಳದಲ್ಲಿ ಕೋಣಗಳನ್ನು ಓಡಿಸೋದರಲ್ಲಿ ದಾಖಲೆ ಬರೆದಿರುವ ಶ್ರೀನಿವಾಸ್ ಗೌಡ ಇಲ್ಲಿ ನಟಿಸಿದ್ದಾರೆ. ನಟ ಸ್ವರಾಜ್ ಶೆಟ್ಟಿ ಅವರಿಗೆ ಜೊತೆಯಾಗಿದ್ದಾರೆ. ದುಬೈನಲ್ಲಿಯೂ ಶೂಟಿಂಗ್‌ ಮಾಡಲಾಗಿದೆ. ಇದೀಗ ಪೋಸ್ಟ್ ಪ್ರೊಡಕ್ಷನ್ ಕೆಲಸ ನಡೆಯುತ್ತಿದೆ.

ಬಾಬಾ’ಸ್ ಬ್ಲೆಸಿಂಗ್ ಫಿಲ್ಮ್ಸ್ ಬ್ಯಾನರಿನಡಿಯಲ್ಲಿ ಡಾ. ವಿನಿತ ವಿಜಯ್ ಕುಮಾರ್ ರೆಡ್ಡಿ, ಅರುಣ್ ರೈ ತೊಡಾರ್ ಅವರು ಈ ಸಿನಿಮಾವನ್ನು ನಿರ್ಮಾಣ ಮಾಡಿದ್ದಾರೆ. ಖ್ಯಾತ ನಟರಾದ ಪ್ರಕಾಶ್ ರೈ, ರವಿಶಂಕರ್ ಅವರು ಈ ಸಿನಿಮಾದಲ್ಲಿ ಪ್ರಧಾನ ಪಾತ್ರಗಳಲ್ಲಿ ನಟಿಸಿದ್ದಾರೆ. ಅಂದಹಾಗೆ ನಟಿ ರಾಧಿಕಾ ಚೇತನ್ ಅವರು ವಿಶೇಷ ಪಾತ್ರದಲ್ಲಿ ನಟಿಸಿದ್ದಾರೆ.

ಭೋಜರಾಜ್ ವಾಮಂಜೂರು, ನವೀನ್ ಪಡೀಲ್, ಗೋಪಿನಾಥ್ ಭಟ್ ಮುಂತಾದವರು ನಟಿಸಿದ್ದಾರೆ. ವಿಜಯ್ ಕೊಡಿಯಾಲ್‌ಬೈಲ್ ಚಿತ್ರಕಥೆ, ಸಂಭಾಷಣೆ, ಮಣಿಕಾಂತ್ ಕದ್ರಿ ಸಂಗೀತ ನಿರ್ದೇಶನ, ಆರ್ ಗಿರಿ ಛಾಯಾಗ್ರಹಣ, ಶ್ರೀನಿವಾಸ್ ಎಸ್ ಬಾಬು ಸಂಕಲನ, ಚಂದ್ರಶೇಖರ್ ಸುವರ್ಣ ಮುಲ್ಕಿ ಕಲಾ ನಿರ್ದೇಶನ, ಕಾಂತ ಪ್ರಸಾದನ, ಭಾಷಾ ವಸ್ತ್ರವಿನ್ಯಾಸ ಈ ಸಿನಿಮಾಕ್ಕಿದೆ.



Source link

Leave a Reply

Your email address will not be published. Required fields are marked *