
ಇದೇ ವೇಳೆ ರಾಜ್ ಬಿ ಶೆಟ್ಟಿ ಅವರ ತಾಯಿ ಹಿಂದಿನಿಂದ ಬಂದಿದ್ದು, ನಿರೂಪಕಿ ಅನುಪಮಾ ಗೌಡ ಅವರು, ಅವರ ಬಳಿ ಹೌದಾ ರಾಜ್ ಬಿ ಶೆಟ್ಟಿ ಹೇಳಿದ್ದು, ಅಂತ ಕೇಳ್ತಾ, ನಿಮ್ಮ ಮಗನನ್ನು ನಿಭಾಯಿಸಲು ನೀವು ಬಳಸುತ್ತಿದ್ದ ಆಯುಧ ಯಾವುದು ಎಂದು ಅವರು ರಾಜ್ ಬಿ ಶೆಟ್ಟಿ ಅಮ್ಮನ ಬಳಿ ಪ್ರಶ್ನೆ ಮಾಡಿದ್ದಾರೆ. ಈ ವೇಳೆ ಅವರು ನಾನು ಕತ್ತಿಯನ್ನೇ ಹಿಡಿಯುತ್ತಿದ್ದೆ ಎಂದು ಹೇಳಿದ್ದಾರೆ. ಸಮಾಜಕ್ಕೆ ಒಳ್ಳೆಯ ಮಗ ಅಲ್ಲದೇ ಹೋದರೆ ಅಂತಹ ಮಗ ಬೇಡವೇ ಬೇಡ ಎಂಬುದು ನನ್ನ ಅಭಿಪ್ರಾಯ ಎಂದು ಅವರು ಹೇಳಿದ್ದಾರೆ. ಈ ವೇಳೆ ರಾಜ್ ಬಿ ಶೆಟ್ಟಿ, ನಮ್ಮಮ್ಮ, ಏನ್ ಮರ್ಯಾದಿ ಕಳೆಯೋದಕ್ಕೆ ಸಾಧ್ಯನೋ ಅದೆಲ್ಲವನ್ನು ಕಳೆಯಬಹುದು. ನಾನು ಮೈಕ್ ಹಿಡಿದುಕೊಂಡು ಪಕ್ಕದಲ್ಲಿ ನಿಲ್ಲುವೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: ರಾಮಕುಂಜದಲ್ಲಿ ತಂದೆಗೆ ಇರಿದು ಮಗ ಸಾವನ್ನಪ್ಪಿದ ಪ್ರಕರಣಕ್ಕೆ ಬಿಗ್ ಟ್ವಿಸ್ಟ್: ಪತಿಯೇ ಮಗನ ಕೊಲೆ ಮಾಡಿದ್ದಾರೆ ಎಂದ ಪತ್ನಿ