ಜನವರಿ 29: ಪ್ರಧಾನಿ ನರೇಂದ್ರ ಮೋದಿ (ನರೇಂದ್ರ ಮೋದಿ) ಅವರು ಗುರುವಾರ ಐ ಕ್ಷೇತ್ರದ ಪರಿಣಿತರು ಮತ್ತು ಸಿಇಒಗಳ ಜೊತೆ ಸಭೆ ನಡೆಸಿದರು. ಲೋಕ ಕಲ್ಯಾಣ್ ಮಾರ್ಗ ರಸ್ತೆಯಲ್ಲಿರುವ ಅವರ ನಿವಾಸದಲ್ಲಿ ಈ ಕಾರ್ಯಕ್ರಮ. ಫೆಬ್ರುವರಿಯಲ್ಲಿ ನಡೆಯಲಿರುವ ಇಂಡಿಯಾಎಐ ಇಂಪ್ಯಾಕ್ಟ್ ಸಮಿಟ್ ಕಾರ್ಯಕ್ರಮಕ್ಕೆ ಪೂರ್ವಭಾವಿಯಾಗಿ ಪ್ರಧಾನಿಗಳು ಈ ಸಭೆ ಸೇರಿದ್ದಾರೆ. ಎಐ ಟೆಕ್ನಾಲಜಿಯಲ್ಲಿ ಸ್ವಾವಲಂಬನೆ ಸಾಧಿಸಬೇಕಿರುವ ಸರ್ಕಾರದ ಗುರಿಗೆ ಬೆಂಬಲವಾಗಿ ನಿಲ್ಲುವುದಾಗಿ ಸಿಐಒಗಳು ಭರವಸೆ ನೀಡಿವೆ.
ಯುಪಿಐಐ ರೂಪಿಸುವ ಮೂಲಕ ಭಾರತ ತಾನು ತಾಂತ್ರಿಕ ನಾವೀನ್ಯತೆ ಮಾಡಬಲ್ಲುದು ಎಂದು ಸಾಬೀತಾಗಿದೆ. ಈ ಸಂದರ್ಭದಲ್ಲಿ ಪ್ರಧಾನಿ ಮೋದಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಭಾರತದಲ್ಲಿ ಜನಸಂಖ್ಯಾ ಬಲ ಇದೆ, ವೈವಿಧ್ಯತೆ ಇದೆ, ಪ್ರಜಾತಂತ್ರ ಸಿಸ್ಟಂ ಇದೆ. ಈ ವಿಶೇಷ ಸಮ್ಮಿಳನವು ಭಾರತದ ಡಿಜಿಟಲ್ ಇನ್ಫ್ರಾಸ್ಟ್ರಕ್ಚರ್ ಬಗ್ಗೆ ವಿಶ್ವದ ನಂಬಿಕೆ ಬೆಳೆಯಲು ಇತರ ಪ್ರಧಾನಿಗಳು ಬಣ್ಣಿಸಿದ್ದಾರೆ.
ಇದನ್ನೂ ಓದಿ: ಆರ್ಥಿಕ ಸಮೀಕ್ಷೆ 2026: ಆರ್ಥಿಕ ಸಮೀಕ್ಷೆ ವರದಿ ಮಂಡನೆ; ಜಿಡಿಪಿ ಶೇ. 6.8-7.2 ಬೆಳೆಯುವ ನಿರೀಕ್ಷೆ
ತಂತ್ರಜ್ಞಾನದ ಹಂಚಿಕೆ ಮತ್ತು ಡಾಟಾ ಸೆಕ್ಯುರಿಟಿಬಹಳ ಮಹತ್ವದ್ದು ಎಂದಿರುವ, ಮೋದಿ ನಿಷ್ಪಕ್ಷಪಾತವಾದ, ಸುಭದ್ರವಾದ ಮತ್ತು ಪಾರದರ್ಶಕವಾದ ಎಐಐ ಇಕೋಸಿಸ್ಟಮ್ ನಿರ್ಮಾಣಕ್ಕೆ ತಾವೆಲ್ಲರೂ ಕೆಲಸ ಮಾಡುತ್ತಾರೆ ಎಂದು ಸಭೆಯಲ್ಲಿ ಎಲ್ಲಾ ಎಐ ಟೆಕ್ ಸಿಇಒಗಳಿಗೆ ಕರೆ ನೀಡಿದರು.
ವಿಪ್ರೋ, ಟಿಸಿಎಸ್, ಎಚ್ಸಿಎಲ್ ಟೆಕ್, ಝೋಹೋ ಕಾರ್ಪೊರೇಶನ್, ಎಲ್ ಟಿಐ ಮೈಂಡ್ಟ್ರೀ, ಜಿಯೋ ಪ್ಲಾಟ್ಫಾರ್ಮ್ಸ್, ಅದಾನಿ ಕಾನೆಕ್ಸ್, ಎನ್ನೆಕ್ಸ್ಟ್ರಾ ಡಾಟಾ, ನೆಟ್ವೆಬ್ ಟೆಕ್ನಾಲಜೀಸ್ ಎಐ ಇತ್ಯಾದಿಗಳಲ್ಲಿ ತೊಡಗಿರುವ ಕಂಪನಿಗಳ ಸಿಐಒಗಳು ಈ ಸಭೆಯಲ್ಲಿ ಭಾಗವಹಿಸಿದ್ದರು. ಹಾಗೆಯೇ, ಐಐಐಟಿ ಹೈದರಾಬಾದ್, ಐಐಟಿ ಮದ್ರಾಸ್, ಐಐಟಿ ಬಾಂಬೆಯಿಂದ ಪರಿಣಿತರೂ ಕೂಡ ಇದ್ದರು. ಸರ್ಕಾರದ ಪರವಾಗಿ ಪ್ರಧಾನಿ ಸಚಿವರಾದ ಅಶ್ವಿನಿ ವೈಷ್ಣವ್, ಜಿತಿನ್ ಪ್ರಸಾದ ಅವರೂ ಇದ್ದಾರೆ.
ಹೆಚ್ಚಿನ ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ