ವಿಶ್ವ ಕುಷ್ಠ ರೋಗ ದಿನಚಿತ್ರ ಕ್ರೆಡಿಟ್ ಮೂಲ: Pinterest
ಕುಷ್ಠರೋಗವು ಮೈಕೋಬ್ಯಾಕ್ಟೀರಿಯಂ ಲೆಪ್ರೇ ಉತ್ಪನ್ನದಿಂದ ಬರುವ ದೀರ್ಘಕಾಲದ ಸೋಂಕಾಗಿದೆ ಇದು ಶಾಪವಲ್ಲ, ಸಾಂಕ್ರಾಮಿಕ ರೋಗವಲ್ಲ. ಚಿಕಿತ್ಸೆ ಪ್ರಾರಂಭವಾದ ಕೆಲವೇ ದಿನಗಳಲ್ಲಿ ಸೋಂಕು ಹರಡುವ ಸಾಮರ್ಥ್ಯವನ್ನು ಕಳೆದುಕೊಳ್ಳುತ್ತದೆ. ಈ ರೋಗದ ಬಗ್ಗೆ ತಪ್ಪು ಕಲ್ಪನೆಗಳನ್ನು ಹೋಗಲಾಡಿಸಿ ಈ ಬಗ್ಗೆ ಜಾಗೃತಿ ಮೂಡಿಸುವ ಉದ್ದೇಶದಿಂದ ಪ್ರತಿ ವರ್ಷ ಜನವರಿ 30 ರಂದು ವಿಶ್ವ ಕುಷ್ಠ ರೋಗ ದಿನವನ್ನು (ವಿಶ್ವ ಕುಷ್ಠರೋಗ ದಿನ) ಆಚರಿಸದಿದ್ದರೆ.
ವಿಶ್ವ ಕುಷ್ಠ ರೋಗದ ದಿನದ ಇತಿಹಾಸ ಮತ್ತು ಮಹತ್ವವೇನು?
ವಿಶ್ವ ಕುಷ್ಠ ರೋಗ ದಿನದ ಇತಿಹಾಸವನ್ನು ನೋಡುವುದಾದರೆ ಈ ರೋಗದಿಂದ ಬಳಲುತ್ತಿರುವ ಜನರ ಬಗ್ಗೆ ಕರುಣೆ ಹೊಂದಿದ್ದ ಮಹಾತ್ಮ ಗಾಂಧೀಜಿಯವರು ಕುಷ್ಠ ರೋಗಿಗಳ ಅಭಿವೃದ್ಧಿಗೆ ಶ್ರಮಿಸಿದರು. ಈ ರೋಗ ಪೀಡಿತರಿಗೆ ಚಿಕಿತ್ಸೆ ಮತ್ತು ಸೌಲಭ್ಯಗಳನ್ನು ಒದಗಿಸುವ ಕಾರ್ಯಪ್ರವೃತ್ತರಾದರು. ರೋಗದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಿದರು. ಈ ಬಗ್ಗೆ ಅವರ ಪುಣ್ಯತಿಥಿಯನ್ನು ವಿಶ್ವ ಕುಷ್ಠ ರೋಗ ದಿನ ಎಂದು ಆಚರಿಸಲಾಗುತ್ತದೆ. ಇದೆಲ್ಲದರ ಪರಿಣಾಮವಾಗಿ 2005 ರಲ್ಲಿ ಕುಷ್ಠರೋಗವು ಸಂಪೂರ್ಣವಾಗಿ ನಿರ್ಮೂಲನೆಯಾಗಿದೆ ಎಂದು ಘೋಷಿಸಲಾಗಿದೆ. ಈ ದಿನದ ಆಚರಣೆಯ ಮುಖ್ಯ ಉದ್ದೇಶವೇ ಕುಷ್ಠರೋಗದ ಬಗ್ಗೆ ಇರುವ ತಪ್ಪು ಕಲ್ಪನೆಗಳನ್ನು ಹೋಗಲಾಡಿಸುವುದು. ರೋಗ ಪೀಡಿತರ ಮೇಲೆ ಬೆಳಕು ಚೆಲ್ಲುವುದು ಹಾಗೂ ಈ ರೋಗದ ಬಗ್ಗೆ ಜಾಗೃತಿ ಮೂಡಿಸುವುದು.
ಕುಷ್ಠ ರೋಗ ಲಕ್ಷಣಗಳು:
ಈ ರೋಗದ ಸೋಂಕು ತಗುಲಿದ ನಂತರ ಕಾಣಿಸಿಕೊಳ್ಳುವ ಲಕ್ಷಣಗಳು 5 ರಿಂದ 7 ವರ್ಷಗಳವರೆಗೆ ಇಲ್ಲದಿದ್ದರೆ 20 ವರ್ಷಗಳು ಬೇಕಾಗುತ್ತವೆ. ರೋಗ ಲಕ್ಷಣಗಳು ಈ ಕೆಳಗಿನಂತಿವೆ.
- ಔಷಧಯಿಲ್ಲದ ಚರ್ಮದ ತೇಪೆಗಳು
- ಬಣ್ಣ ಕಳೆದುಕೊಂಡ ಹಾಗೂ ಕೆಂಪು ಕಲೆಯುಳ್ಳ ಚರ್ಮ
- ಕೈ-ಕಾಲುಗಳಲ್ಲಿ ಜುಮ್ಮೆನಿಸುವಿಕೆ
- ಸ್ನಾಯು ದೌರ್ಬಲ್ಯ
- ಕಣ್ಣು ಮತ್ತು ಮೂಗಿನ ಸಮಸ್ಯೆಗಳು
- ಮುಖ ಅಥವಾ ಕಿವಿಗಳ ಮೇಲೆ ಗಂಟುಗಳು
- ಹುಬ್ಬುಗಳು ಹಾಗೂ ರೆಪ್ಪೆಗೂದಲು ಉದುರುವುದು
ಇದನ್ನೂ ಓದಿ: ಚರ್ಮರೋಗ ಇದ್ಯಾ? ಚಳಿಗಾಲದಲ್ಲಿ ಸ್ನಾನ ಮಾಡುವಾಗ ಈ ತಪ್ಪು ಮಾಡಿದ್ರೆ ಸಮಸ್ಯೆ ಉಲ್ಬಣವಾಗುವುದು ಗ್ಯಾರೆಂಟಿ
ಕುಷ್ಠ ರೋಗವನ್ನು ಹೇಗೆ ಗುಣಪಡಿಸಬಹುದು?
ಆರಂಭಿಕ ಹಂತದಲ್ಲಿ ರೋಗ ಪತ್ತೆ ಹಚ್ಚಿ ಚಿಕಿತ್ಸೆ ನೀಡಿದರೆ ಈ ಕುಷ್ಠರೋಗವನ್ನು ಬಹುಬೇಗನೇ ನಿಯಂತ್ರಿಸಲಾಗುತ್ತದೆ. ಈ ರೋಗವು ತಕ್ಷಣವೇ ಆರಂಭಿಕ ಹಂತದಲ್ಲಿ ವೈದ್ಯಕೀಯ ಚಿಕಿತ್ಸೆ ಮಲ್ಟಿಡ್ರಗ್ ಥೆರಪಿ (ಎಂಡಿಟಿ) ಪಡೆಯುವುದರಿಂದ ಅಂಗವೈಕಲ್ಯವನ್ನು ತಡೆಗಟ್ಟಲಾಗಿದೆ.
ಹೆಚ್ಚಿನ ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ