Aditi Rao Hydari: ಕಾಡಿನ ಪಕ್ಷಿಗಳಿಗಾದರೂ ಅವರು ಹಾಡ್ತಾರೆ, ಹಾಡುವುದನ್ನು ನಿಲ್ಲಿಸುವುದಿಲ್ಲ, ‘ಅದು ಸುಳ್ಳು” ಅಂದಿದ್ದೇಕೆ ನಟಿ? | Aditi Rao Hydari Responds To Arijit Singh Exit From Playback Singing

Aditi Rao Hydari: ಕಾಡಿನ ಪಕ್ಷಿಗಳಿಗಾದರೂ ಅವರು ಹಾಡ್ತಾರೆ, ಹಾಡುವುದನ್ನು ನಿಲ್ಲಿಸುವುದಿಲ್ಲ, ‘ಅದು ಸುಳ್ಳು” ಅಂದಿದ್ದೇಕೆ ನಟಿ? | Aditi Rao Hydari Responds To Arijit Singh Exit From Playback Singing



Aditi Rao Hydari: ಕಾಡಿನ ಪಕ್ಷಿಗಳಿಗಾದರೂ ಅವರು ಹಾಡ್ತಾರೆ, ಹಾಡುವುದನ್ನು ನಿಲ್ಲಿಸುವುದಿಲ್ಲ, ‘ಅದು ಸುಳ್ಳು” ಅಂದಿದ್ದೇಕೆ ನಟಿ? | Aditi Rao Hydari Responds To Arijit Singh Exit From Playback Singing

ಹಿನ್ನೆಲೆ ಗಾಯನದಲ್ಲಿ ಹೆಸರು ಮಾಡಿದ್ದ ಅರಿಜಿತ್ ಸಿಂಗ್ ಅವರ ಧ್ವನಿಯನ್ನು ಇನ್ನು ಮುಂದೆ ಬೆಳ್ಳಿ ಪರದೆಯ ಮೇಲೆ ಕೇಳಲು ಸಾಧ್ಯವಿಲ್ಲ ಎಂಬ ಸತ್ಯ ಅಭಿಮಾನಿಗಳಿಗೆ ಅರಗಿಸಿಕೊಳ್ಳಲು ಕಷ್ಟವಾಗುತ್ತಿದೆ. ಆದರೆ ಅದಿತಿ ರಾವ್ ಹೈದರಿ ಹೇಳಿದಂತೆ, ಅವರು ಕಾಡಿನ ಪಕ್ಷಿಗಳಿಗಾದರೂ ಹಾಡ್ತಾರೆ’. ಎನ್ನಬಹುದು

ಅರಿಜಿತ್ ಸಿಂಗ್ ಗಾಯನಕ್ಕೆ ಗುಡ್ ಬೈ: ಅವರು ಕಾಡಿನ ಪಕ್ಷಿಗಳಿಗಾದರೂ ಹಾಡ್ತಾರೆ” ಎಂದ ಅದಿತಿ ರಾವ್ ಹೈದರಿ!

ಮುಂಬೈ: ಬಾಲಿವುಡ್ ಅಷ್ಟೇ ಅಲ್ಲದೆ ಇಡೀ ಭಾರತೀಯ ಚಿತ್ರರಂಗದಲ್ಲಿ ತನ್ನ ಮಧುರ ಧ್ವನಿಯ ಮೂಲಕ ಮೋಡಿ ಮಾಡಿರುವ ಗಾಯಕ ಅರಿಜಿತ್ ಸಿಂಗ್. ಪ್ರೀತಿ, ವಿರಹ, ಲಾಂಗ್ ಡ್ರೈವ್ ಅಥವಾ ಒಂಟಿತನ.. ಹೀಗೆ ಪ್ರತಿಯೊಂದು ಸಂದರ್ಭಕ್ಕೂ ಅರಿಜಿತ್ (Arijit Singh) ಅವರದ್ದೊಂದು ಹಾಡು ಇದ್ದೇ ಇರುತ್ತದೆ. ಆದರೆ, ಇತ್ತೀಚೆಗೆ ಅರಿಜಿತ್ ಸಿಂಗ್ ಅವರು ಹಿನ್ನೆಲೆ ಗಾಯನಕ್ಕೆ (Playback Singing) ವಿದಾಯ ಹೇಳುವ ನಿರ್ಧಾರ ಘೋಷಿಸಿದ್ದು, ಇಡೀ ಸಂಗೀತ ಲೋಕಕ್ಕೆ ಮತ್ತು ಅಭಿಮಾನಿಗಳಿಗೆ ದೊಡ್ಡ ಆಘಾತ ನೀಡಿದೆ. ಈ ಬಗ್ಗೆ ಇದೀಗ ಬಾಲಿವುಡ್ ಸುಂದರಿ ಅದಿತಿ ರಾವ್ ಹೈದರಿ (Aditi Rao Hydari) ಅತ್ಯಂತ ಭಾವುಕರಾಗಿ ಪ್ರತಿಕ್ರಿಯಿಸಿದ್ದಾರೆ.

ಅದಿತಿ ರಾವ್ ಹೈದರಿ ನೀಡಿದ ಪ್ರತಿಕ್ರಿಯೆ:

ಇತ್ತೀಚೆಗೆ ನೀಡಿದ ಸಂದರ್ಶನವೊಂದರಲ್ಲಿ ಮಾತನಾಡಿದ ‘ಹೀರಾಮಂಡಿ’ ಖ್ಯಾತಿಯ ಅದಿತಿ ರಾವ್ ಹೈದರಿ, ಅರಿಜಿತ್ ಅವರ ನಿವೃತ್ತಿಯ ಬಗ್ಗೆ ಅತೀವ ಬೇಸರ ವ್ಯಕ್ತಪಡಿಸಿದ್ದಾರೆ. “ಓ ಮೈ ಗಾಡ್, ನಾನು ಅರಿಜಿತ್ ಸಿಂಗ್ ಅವರನ್ನು ತುಂಬಾ ಪ್ರೀತಿಸುತ್ತೇನೆ. ಅವರ ಧ್ವನಿಯನ್ನು ನಾವು ಖಂಡಿತಾ ಮಿಸ್ ಮಾಡಿಕೊಳ್ಳುತ್ತೇವೆ. ಆದರೆ ಒಬ್ಬ ಕಲಾವಿದ ಯಾವಾಗಲೂ ಕಲಾವಿದನೇ ಆಗಿರುತ್ತಾನೆ. ಸೃಷ್ಟಿಕರ್ತ ಯಾವಾಗಲೂ ಏನನ್ನಾದರೂ ಸೃಷ್ಟಿಸುತ್ತಲೇ ಇರುತ್ತಾನೆ. ಅರಿಜಿತ್ ಅವರ ಧ್ವನಿಯನ್ನು ನಾವು ಸಿನಿಮಾಗಳಲ್ಲಿ ಕೇಳದೇ ಇರಬಹುದು, ಆದರೆ ಅವರು ಹಾಡುವುದನ್ನು ನಿಲ್ಲಿಸುವುದಿಲ್ಲ ಎಂದು ನಾನು ನಂಬುತ್ತೇನೆ,” ಎಂದು ಅವರು ಹೇಳಿದ್ದಾರೆ.

ಮುಂದುವರಿದು ಮಾತನಾಡಿದ ಅದಿತಿ, “ಅವರು ನಮಗಾಗಿ ಹಾಡದಿದ್ದರೂ, ಯಾವುದೋ ಒಂದು ಕಾಡಿನಲ್ಲಿ ಕುಳಿತು ಅಲ್ಲಿನ ಪಕ್ಷಿಗಳಿಗಾದರೂ ಹಾಡಬಹುದು. ಅವರು ಎಲ್ಲಿದ್ದರೂ ಏನಾದರೂ ಅದ್ಭುತವಾದದ್ದನ್ನು ಸೃಷ್ಟಿಸುತ್ತಾರೆ. ಸಂಗೀತ ಅವರ ಒಳಗೆ ಹಾಸುಹೊಕ್ಕಾಗಿದೆ. ಹೀಗಾಗಿ ಅವರು ಯಾವುದೋ ಒಂದು ರೂಪದಲ್ಲಿ ಹಾಡುತ್ತಲೇ ಇರುತ್ತಾರೆ,” ಎಂದು ಗಾಯಕನ ಮೇಲಿರುವ ಅಭಿಮಾನವನ್ನು ಹೊರಹಾಕಿದ್ದಾರೆ.

ಅರಿಜಿತ್ ಮತ್ತು ಅದಿತಿ ನಡುವಿನ ಕಲಾತ್ಮಕ ಸಂಬಂಧ:

ಅದಿತಿ ರಾವ್ ಹೈದರಿ ಅಭಿನಯದ ಸಿನಿಮಾಗಳಿಗೆ ಅರಿಜಿತ್ ಸಿಂಗ್ ಧ್ವನಿ ನೀಡಿದ್ದಾರೆ. ಇತ್ತೀಚೆಗೆ ವಿಜಯ್ ಸೇತುಪತಿ ಮತ್ತು ಅದಿತಿ ನಟನೆಯ ‘ಗಾಂಧಿ ಟಾಕ್ಸ್’ (Gandhi Talks) ಸಿನಿಮಾದ ‘ಸುನ್ಹರಿ ಕಿರಣೆ’ ಎಂಬ ಹಾಡನ್ನು ಅರಿಜಿತ್ ಹಾಡಿದ್ದರು. ಈ ಚಿತ್ರಕ್ಕೆ ಎ.ಆರ್. ರೆಹಮಾನ್ ಸಂಗೀತ ನೀಡಿದ್ದರು. ಅಷ್ಟೇ ಅಲ್ಲದೆ, 2015 ರ ‘ಗುಡ್ಡು ರಂಗೀಲಾ’ ಚಿತ್ರದ ಹಿಟ್ ಹಾಡು ‘ಸೂಯಿಯಾನ್’ ಕೂಡ ಅರಿಜಿತ್ ಧ್ವನಿಯಲ್ಲಿ ಮೂಡಿಬಂದಿತ್ತು. ಈ ನೆನಪುಗಳನ್ನು ಮೆಲುಕು ಹಾಕಿದ ಅದಿತಿ, ಅರಿಜಿತ್ ಅವರ ನಿರ್ಧಾರದಿಂದ ಸಂಗೀತ ಲೋಕಕ್ಕೆ ದೊಡ್ಡ ನಷ್ಟ ಉಂಟಾಗಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ನಿರ್ದೇಶನದತ್ತ ಅರಿಜಿತ್ ಸಿಂಗ್ ಪಯಣ?

ಗಾಯನಕ್ಕೆ ಗುಡ್ ಬೈ ಹೇಳಿರುವ ಅರಿಜಿತ್ ಸಿಂಗ್ ಈಗ ಸಿನಿಮಾ ನಿರ್ದೇಶನದತ್ತ ಆಸಕ್ತಿ ತೋರುತ್ತಿದ್ದಾರೆ ಎನ್ನಲಾಗುತ್ತಿದೆ. ವರದಿಗಳ ಪ್ರಕಾರ, ಅವರು ಶೀಘ್ರದಲ್ಲೇ ಒಂದು ಸಿನಿಮಾವನ್ನು ನಿರ್ದೇಶಿಸಲಿದ್ದು, ಅದರಲ್ಲಿ ಖ್ಯಾತ ನಟ ನವಾಜುದ್ದೀನ್ ಸಿದ್ದಿಕಿ ಅವರ ಪುತ್ರಿ ಶೋರಾ ಸಿದ್ದಿಕಿ ನಾಯಕಿಯಾಗಿ ಪದಾರ್ಪಣೆ ಮಾಡಲಿದ್ದಾರೆ ಎನ್ನಲಾಗಿದೆ.

ಒಟ್ಟಿನಲ್ಲಿ, ಹಿನ್ನೆಲೆ ಗಾಯನದಲ್ಲಿ ತಮ್ಮದೇ ಆದ ಯುಗವನ್ನು ಸೃಷ್ಟಿಸಿದ್ದ ಅರಿಜಿತ್ ಸಿಂಗ್ ಅವರ ಧ್ವನಿಯನ್ನು ಇನ್ನು ಮುಂದೆ ಬೆಳ್ಳಿ ಪರದೆಯ ಮೇಲೆ ಕೇಳಲು ಸಾಧ್ಯವಿಲ್ಲ ಎಂಬ ಸತ್ಯ ಅಭಿಮಾನಿಗಳಿಗೆ ಅರಗಿಸಿಕೊಳ್ಳಲು ಕಷ್ಟವಾಗುತ್ತಿದೆ. ಆದರೆ ಅದಿತಿ ರಾವ್ ಹೈದರಿ ಹೇಳಿದಂತೆ, ಕಲಾವಿದನಿಗೆ ನಿವೃತ್ತಿಯಿಲ್ಲ, ಅವರ ಕಲೆ ಯಾವುದಾದರೂ ರೂಪದಲ್ಲಿ ಜೀವಂತವಾಗಿರುತ್ತದೆ. ಸದ್ಯ ಅರಿಜಿತ್ ಅವರ ನಿರ್ದೇಶನದ ಸಿನಿಮಾದ ಮೇಲೆ ಎಲ್ಲರ ಕಣ್ಣು ನೆಟ್ಟಿದೆ.



Source link

Leave a Reply

Your email address will not be published. Required fields are marked *