ತಿರುಪತಿ ಲಡ್ಡು ತಯಾರಿಕೆಗೆ ಬಳಸುವ ತುಪ್ಪದಲ್ಲಿ ಗೋಮಾಂಸ ಇತ್ತು ಎಂದ ತೆಲುಗುದೇಶಂ

ತಿರುಪತಿ ಲಡ್ಡು ತಯಾರಿಕೆಗೆ ಬಳಸುವ ತುಪ್ಪದಲ್ಲಿ ಗೋಮಾಂಸ ಇತ್ತು ಎಂದ ತೆಲುಗುದೇಶಂ



ತಿರುಪತಿ ಲಡ್ಡು ತಯಾರಿಕೆಗೆ ಬಳಸುವ ತುಪ್ಪದಲ್ಲಿ ಗೋಮಾಂಸ ಇತ್ತು ಎಂದ ತೆಲುಗುದೇಶಂ
<p>ತಿರುಪತಿ ಲಡ್ಡು ತಯಾರಿಕೆಗೆ ಬಳಸುವ ತುಪ್ಪದಲ್ಲಿ ಗೋಮಾಂಸದ ಅಂಶಗಳಿವೆ ಎಂದು ಟಿಡಿಪಿ ಆರೋಪಿಸಿದೆ. 2022 ಮತ್ತು 2023ರ ಪ್ರಯೋಗಾಲಯ ವರದಿಗಳು ತುಪ್ಪ ಕಲಬೆರಕೆಯಾಗಿದ್ದು, ಪ್ರಾಣಿಜನ್ಯ ಅಂಶಗಳನ್ನು ಹೊಂದಿದೆ ಎಂದು ದೃಢಪಡಿಸಿವೆ ಎಂದು ಆಡಳಿತಾರೂಢ ಪಕ್ಷ ಹೇಳಿದೆ.&nbsp;</p><img><p>‘ತಿರುಪತಿ ಲಡ್ಡು ತಯಾರಿಕೆಗೆ ಪೂರೈಸಿದ್ದ ಕಲಬೆರಕೆ ತುಪ್ಪವನ್ನು ಸಸ್ಯಜನ್ಯ ಜಿಡ್ಡಿನಿಂದ ತಯಾರಿಸಲಾಗಿತ್ತೇ ಹೊರತೂ, ಅದರಲ್ಲಿ ಗೋಮಾಂಸ, ಹಂದಿಯ ಮಾಂಸದ ಅಂಶಗಳು ಇರಲಿಲ್ಲ’ ಎಂದು ಸಿಬಿಐ ಚಾರ್ಜ್‌ಶೀಟನ್ನು ಉಲ್ಲೇಖಿಸಿ ವೈಎಸ್‌ಆರ್‌ ಕಾಂಗ್ರೆಸ್‌ ನಾಯಕರು ನೀಡಿದ್ದ ಹೇಳಿಕೆಯನ್ನು ಆಡಳಿತಾರೂಢ ಟಿಡಿಪಿ (ತೆಲುಗುದೇಶಂ) ತಿರಸ್ಕರಿಸಿದೆ.</p><img><p>ಈ ಕುರಿತು ಹೇಳಿಕೆ ನೀಡಿರುವ ಆಂಧ್ರಪ್ರದೇಶ ಸರ್ಕಾರದ ಸಚಿವ ಪಿ.ಕೇಶವ, ‘ಟಿಟಿಡಿಗೆ (ತಿರುಮಲ ತಿರುಪತಿ ದೇವಸ್ಥಾನ) ಪೂರೈಸುವ ತುಪ್ಪ ಕಲಬೆರಕೆ ಆಗಿದೆ ಎಂದು 2022ರಲ್ಲಿ ಮೈಸೂರಿನ ಸಿಎಫ್‌ಟಿಆರ್‌ಐ ತನ್ನ ವರದಿಯಲ್ಲಿ ಸ್ಪಷ್ಟಪಡಿಸಿತ್ತು. ಅದರ ಹೊರತಾಗಿಯೂ ವೈಎಸ್ಸಾರ್ ಸರ್ಕಾರ ಕಲಬೆರಕೆ ತುಪ್ಪ ಖರೀದಿ ಮುಂದುವರೆದಿತ್ತು.</p><img><p>2023ರಲ್ಲಿ ಗುಜರಾತ್‌ನ ರಾಷ್ಟ್ರೀಯ ಹೈನು ಅಭಿವೃದ್ಧಿ ಮಂಡಳಿ ಪ್ರಯೋಗಾಲಯದ ವರದಿ, ತುಪ್ಪದಲ್ಲಿ ಪ್ರಾಣಿಜನ್ಯ ಅಂಶಗಳಿವೆ ಎಂದು ಅತ್ಯಂತ ಸ್ಪಷ್ಟವಾಗಿ ಉಲ್ಲೇಖಿಸಿತ್ತು. ಅದರನ್ನು ಆಧರಿಸಿಯೇ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರು ಕಲಬೆರಕೆ ತುಪ್ಪದಲ್ಲಿನ ಗೋಮಾಂಸದ ಬಗ್ಗೆ ಪ್ರಸ್ತಾಪಿಸಿದ್ದರು’ ಎಂದರು.</p><p><strong>ಇದನ್ನೂ ಓದಿ: </strong><strong>46 ವರ್ಷಗಳ ಹಿಂದೆ ತಿರುಮಲದ ಗರ್ಭಗುಡಿಯಲ್ಲಿ ನಡೆದ ಘಟನೆಗೆ ಇಂದಿಗೂ ಸಿಕ್ಕಿಲ್ಲ ಉತ್ತರ</strong></p><img><p>‘ಹಿಂದಿನ ಸಿಎಂ ಜಗನ್‌ಗೆ ತುಪ್ಪ ಖರೀದಿಗೆ ಕೇವಲ ವಾಣಿಜ್ಯ ವ್ಯವಹಾರವಾಗಿತ್ತೇ ವಿನಃ ವೆಂಕಟೇಶ್ವರನ ಮೇಲಿನ ಭಕ್ತಿಯ ವಿಷಯವಾಗಿರಲಿಲ್ಲ. ಅದರೆ ನಾಯ್ಡು ಅವರು ಜವಾಬ್ದಾರಿಯುತ ವ್ಯಕ್ತಿಯಾಗಿರುವ ಕಾರಣ, ಜನರ ಮುಂದೆ ಸತ್ಯಾಂಶ ಬಹಿರಂಗಪಡಿಸಿದ್ದಾರೆ’ ಎಂದು ಹೇಳಿದ್ದಾರೆ.</p><p><strong>ಇದನ್ನೂ ಓದಿ: </strong><strong>ತಿರುಪತಿ ಲಡ್ಡು ತಯಾರಿಗೆ 68 ಲಕ್ಷ ಕೆಜಿ ನಕಲಿ ತುಪ್ಪ; 250 ಕೋಟಿ ಗೋಲ್ಮಾಲ್: CBI ತನಿಖೆಯ ಸತ್ಯ</strong></p>



Source link

Leave a Reply

Your email address will not be published. Required fields are marked *