ಬೆಂಗಳೂರು, ಜ.1: ಬೆಂಗಳೂರಿನಲ್ಲಿ(ಬೆಂಗಳೂರು ನಾಯಿ ದಾಳಿ) ಸಾಕು ನಾಯಿಗಳ ದಾಳಿ ಮಾಡುವ ಘಟನೆಗಳು ಮತ್ತೆ ಮುನ್ನೆಲೆಗೆ ಬಂದಿದ್ದು, ಬೆಳ್ಳಂಬೆಳಿಗ್ಗೆ ವಾಯುವಿಹಾರಕ್ಕೆ ತೆರಳಿದ್ದ ಮಹಿಳೆಯೊಬ್ಬರ ಮೇಲೆ ಸಾಕು ನಾಯಿಯೊಂದು ಭೀಕರವಾಗಿ ದಾಳಿ ನಡೆಸಿದ ಘಟನೆ ಇಡೀ ನಗರವನ್ನು ಬೆಚ್ಚಿಬೀಳಿಸಿದೆ. ಜನವರಿ 26 ರಂದು ಬೆಳಿಗ್ಗೆ 6.54 ರ ಸುಮಾರಿಗೆ ಎಚ್ಎಸ್ಆರ್ ಲೇಔಟ್ ಟೀಚರ್ಸ್ ಕಾಲೋನಿಯಲ್ಲಿ ಈ ಘಟನೆ ನಡೆದಿದ್ದು, ಪೊಲೀಸರು ನೀಡಿರುವ ಮಾಹಿತಿ ಪ್ರಕಾರ, ಮಹಿಳೆ ವಾಕಿಂಗ್ಗೆ ಹೋದ ಸ್ಥಳೀಯ ನಿವಾಸಿ ಅಮರೇಶ್ ರೆಡ್ಡಿ ಎಂಬವರ ಮೇಲೆ ಆಕೆಯ ಮೇಲೆ ದಾಳಿ ನಡೆದಿದೆ. ನಾಯಿ ಮೊದಲು ಮಹಿಳೆಯ ಕುತ್ತಿಗೆಗೆ ಕಚ್ಚಿ, ನಂತರ ಆಕೆಯ ಮುಖ, ಕೈಗಳು ಮತ್ತು ಕಾಲುಗಳ ಮೇಲೆ ದಾಳಿ ಮಾಡಲಾಗಿದೆ ಎಂದು ಹೇಳಲಾಗಿದೆ. ಈ ಬಗ್ಗೆ ವಿಡಿಯೋವೊಂದು ವೈರಲ್ ಆಗಿದೆ. ಮುಂಜಾನೆ ಸುಮಾರು 6:30 ರಿಂದ 7:00 ಗಂಟೆಯ ಸುಮಾರಿಗೆ ಮಹಿಳೆ ವಾಕಿಂಗ್ ಆಗುತ್ತಿರುವಾಗ ಈ ದಾಳಿ ನಡೆದಿದೆ.
ರಸ್ತೆಯಲ್ಲಿ ಹೋಗುತ್ತಿದ್ದ ಮಹಿಳೆಯ ಮೇಲೆ ನಾಯಿಯು ಏಕಾಏಕಿ ಹಾರಿ ಮುಖ ಮತ್ತು ಕುತ್ತಿಗೆಯ ಭಾಗವನ್ನು ಗುರಿಯಾಗಿಸಿಕೊಂಡು ಕಚ್ಚಿದೆ. ಮಹಿಳೆ ಕೆಳಗೆ ಬಿದ್ದರೂ ನಾಯಿ ಬಿಡದೆ ದಾಳಿ ನಡೆಸಿದೆ. ಈ ದಾಳಿಯಿಂದ ಮಹಿಳೆಯ ಮುಖಕ್ಕೆ ಗಂಭೀರವಾದ ಗಾಯಗಳಾಗಿದ್ದರೆ, ವೈದ್ಯರು ಮುಖದ ಮೇಲೆ ಬರೋಬ್ಬರಿ 50 ಹೊಲಿಗೆಗಳನ್ನು ಹಾಕಿದ್ದಾರೆ. ಇದರ ಜೊತೆಗೆ ಮುಖಕ್ಕೆ ಪ್ಲಾಸ್ಟಿಕ್ ಸರ್ಜರಿಯ ಅಗತ್ಯ ಇದೆ ಎಂದು ವೈದ್ಯರು ಹೇಳಿದ್ದಾರೆ. ಘಟನೆಯ ಭೀಕರಗಳು ಸಮೀಪದ ಮನೆಯ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆ ಹಿಡಿದ, ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ವಿಡಿಯೋದಲ್ಲಿ ಮಹಿಳೆ ಸಹಾಯಕ್ಕಾಗಿ ಕಿರುಚುತ್ತಿರುವುದು ಮತ್ತು ನಾಯಿಯನ್ನು ಬಿಡಿಸಲು ಸ್ಥಳೀಯರು ಹರಸಾಹಸ ಪಡುತ್ತಿರುವುದು ಕಂಡುಬಂದಿದೆ.
ಇಲ್ಲಿದೆ ನೋಡಿ ವಿಡಿಯೋ:
#ಬೆಂಗಳೂರುಎಚ್ಎಸ್ಆರ್ ಲೇಔಟ್ನಲ್ಲಿ 31 ವರ್ಷದ ಮಹಿಳೆಗೆ ನೆರೆಹೊರೆಯವರು ಬರ್ಬರವಾಗಿ ಥಳಿಸಿದ್ದಾರೆ. #ನಾಯಿ ಜನವರಿ 26 ರಂದು ಬೆಳಗಿನ ನಡಿಗೆಯ ಸಮಯದಲ್ಲಿ. ಅವಳು ಮುಖ, ಕುತ್ತಿಗೆ, ಕೈಗಳು ಮತ್ತು ಕಾಲುಗಳಿಗೆ ತೀವ್ರವಾದ ಕಡಿತವನ್ನು ಅನುಭವಿಸಿದಳು, 50 ಕ್ಕೂ ಹೆಚ್ಚು ಹೊಲಿಗೆಗಳ ಅಗತ್ಯವಿತ್ತು. ನಿರ್ಲಕ್ಷ್ಯ ಆರೋಪದಡಿ ಮಾಲೀಕನ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದು, ಸಿಸಿಟಿವಿಯಲ್ಲಿ ಭಯಾನಕ ದೃಶ್ಯ ಸೆರೆಯಾಗಿದೆ.#ನಾಯಿ ಕಾಟ pic.twitter.com/lhJw1D5A2c
– Thepagetoday (@thepagetody) ಜನವರಿ 31, 2026
ನಾಯಿಯನ್ನು ಸರಿಯಾಗಿ ನಿಯಂತ್ರಿಸಿದ ಮತ್ತು ಸಾರ್ವಜನಿಕ ಸ್ಥಳದಲ್ಲಿ ಮುನ್ನೆಚ್ಚರಿಕೆ ವಹಿಸಿದ ಕಾರಣ ನಾಯಿ ಮಾಲೀಕರ ವಿರುದ್ಧ ನಿರ್ಲಕ್ಷ್ಯದ ಪ್ರಕರಣವನ್ನು ದಾಖಲಿಸಲಾಗಿದೆ. ಬಿಬಿಎಂಪಿ ಪಶುಪಾಲನಾ ಅಧಿಕಾರಿಗಳು ಅಥವಾ ಅಧಿಕಾರಿಗಳು ದಾಳಿ ನಡೆಸಿದ ನಾಯಿಯನ್ನು ವಶಕ್ಕೆ ಪಡೆದಿದ್ದು, ಅದಕ್ಕೆ ರೇಬಿಸ್ ಇನ್ಯಾವುದೇ ಕಾಯಿಲೆ ಇದೆಯೇ ಎಂಬ ಬಗ್ಗೆ ಪರೀಕ್ಷೆ ನಡೆಸುತ್ತಿದ್ದಾರೆ. ಬೆಂಗಳೂರಿನಲ್ಲಿ ಸಾಕು ನಾಯಿಗಳ ಮಾಸ್ಕ್ (ಮೂತಿ) ಮತ್ತು ಲೀಶ್ (Leash) ನಿಯಮಗಳನ್ನು ಪಾಲಿಸುವುದು ಕಡ್ಡಾಯವಾಗಿದೆ. ಈ ಪ್ರಕರಣದಲ್ಲಿ ಆ ನಿಯಮಗಳ ಉಲ್ಲಂಘನೆಯಾಗಿರುವುದು ಮೇಲ್ನೋಟಕ್ಕೆ ಕಂಡುಬಂದಿದೆ. ಬೆಂಗಳೂರಿನಲ್ಲಿ ಇತ್ತೀಚೆಗೆ ಇಂತಹ ಘಟನೆಗಳು ಹೆಚ್ಚುತ್ತಿವೆ. ಸಾರ್ವಜನಿಕ ಸ್ಥಳಗಳಲ್ಲಿ ಸಾಕು ನಾಯಿಗಳನ್ನು ನೋಡಿದಾಗ ಅಥವಾ ಪರಿಸ್ಥಿತಿ ಎದುರಾದಾಗ ಜಾಗರೂಕರಾಗಿರುವುದು ಅವಶ್ಯಕ. ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇದನ್ನೂ ಓದಿ: ಜಪಾನ್ ರಾಯಭಾರಿಗೂ ಇಷ್ಟ ಬೆಂಗಳೂರಿನ ಪಿಜ್ಜಾ! ಓನೋ ಕೈಚಿ ಪೋಸ್ಟ್ಗೆ ತೇಜಸ್ವಿ ಸೂರ್ಯ ರಿಯಾಕ್ಷನ್
ಪ್ರಾಣಿಗಳ ಬಗ್ಗೆ ನಿರ್ಲಕ್ಷ್ಯದ ನಡವಳಿಕೆ. ಸಾಕುಪ್ರಾಣಿಯಿಂದ ಬೇರೆಯವರಿಗೆ ಅಪಾಯವಿದೆ ಎಂದು ತಿಳಿದಿದ್ದರೂ ಸರಿಯಾದ ಮುನ್ನೆಚ್ಚರಿಕೆ ವಹಿಸದಿದ್ದರೆ, ಮಾಲೀಕನಿಗೆ 6 ತಿಂಗಳವರೆಗೆ ಜೈಲು ಶಿಕ್ಷೆ 5,000 ರೂ. ವರೆಗೆ ದಂಡ, ಎರಡನ್ನೂ ವಿಧಿಸಬಹುದು. ನಿರ್ಲಕ್ಷ್ಯದ ಮೂಲಕ ಇತರರ ಜೀವಕ್ಕೆ ಅಪಾಯ ತರುವುದು ಅಥವಾ ಗಂಭೀರ ಗಾಯಗೊಳಿಸುವುದು. ಇಲ್ಲಿ ಮಹಿಳೆಯ ಮುಖಕ್ಕೆ 50 ಹೊಲಿಗೆ ಬಿದ್ದಿದ್ದರೆ ಅದು ‘ಗಂಭೀರ ಗಾಯ’ದ ವ್ಯಾಪ್ತಿಗೆ ಬರುತ್ತದೆ. ಇದರ ಅಡಿಯಲ್ಲಿ ಮಾಲೀಕನಿಗೆ 2 ವರ್ಷಗಳವರೆಗೆ ಜೈಲು ಶಿಕ್ಷೆ ಮತ್ತು ದಂಡ ವಿಧಿಸಲು ಅವಕಾಶವಿದೆ. ಸಾರ್ವಜನಿಕ ಸ್ಥಳದಲ್ಲಿ ನಾಯಿ ತೊಂದರೆಯಾದರೆ ಅಥವಾ ಪರವಾನಗಿ ಇಲ್ಲದೆ ನಾಯಿ ಸಾಕಿದ್ದರೆ 1,000 ರೂ. ರಿಂದ 5,000 ರೂ. ವರೆಗೆ ಆರಂಭಿಕ ದಂಡ ವಿಧಿಸಿಲ್ಲ.
ಬೆಂಗಳೂರು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ