
ಪತ್ನಿ ಶಾರದಮ್ಮಾ ದೂರವಾದ ಬಳಿಕ ಶಂಕರಣ್ಣ ಕುಡುಕನಾಗಿರುತ್ತಾನೆ. ಇದೀಗ ಮಗನೇ ಪತ್ನಿಯನ್ನು ಮನೆಗೆ ಕರೆದುಕೊಂಡು ಬಂದಾಗ ಶಂಕರಣ್ಣ ಸಂತೋಷವಾಗಿದ್ದಾನೆ. ಮಗನಿಗೆ ವಿರುದ್ಧವಾಗಿ ನಿಂತ್ಕೊಂಡು ಶಂಕರಣ್ಣ, ಪತ್ನಿಯನ್ನು ಮನೆಯಲ್ಲಿಯೇ ಉಳಿಸಿಕೊಳ್ಳಲು ಸಕ್ಸಸ್ ಆಗಿದ್ದಾನೆ. ದೇವಿಪುತ್ರ ಮಾರಿಗುಡಿ ಶಿವುಗೆ ಶಂಕರಣ್ಣ ಸವಾಲು ಹಾಕಿದ್ದಾನೆ.
ಈ ದೃಶ್ಯ ನೋಡಿದ ನಂತರ ವಯಸ್ಸಾದ ಮೇಲೆಯೂ ಪತ್ನಿ ಮೇಲಿನ ಶಂಕರಣ್ಣನ ಕಾಳಜಿ, ಪ್ರೀತಿ ಮತ್ತು ನಂಬಿಕೆಗೆ ಮಹಿಳೆಯರು ಫಿದಾ ಆಗಿದ್ದು, ಗಂಡ ಅಂದ್ರೆ ಹಿಂಗಿರಬೇಕು ಎಂದು ಗುಸುಗುಸು ಮಾತನಾಡಿಕೊಳ್ಳುತ್ತಿದ್ದಾರೆ.
ಇದನ್ನೂ ಓದಿ: Annayya: ದೂರ ದೂರದವರೆಲ್ಲಾ ಬಂದ್ರು, ಮನೆಯವರೇ ಮಿಸ್ ಆಗಿದ್ದಕ್ಕೆ ನೊಂದಕೊಂಡ ವೀಕ್ಷಕರು!