ಪೊಲೀಸರು ಚಾಹನ ತಪಾಸೆ ಮಾಡುತ್ತಿರುವುದು
ಚಾಮರಾಜನಗರ, (ಫೆಬ್ರವರಿ 01): ಕರ್ನಾಟಕ (ಕರ್ನಾಟಕ) ಕೇರಳ (ಕೇರಳ) ಗಡಿಯಲ್ಲಿ ನಟೋರಿಯಸ್ ಕೇರಳದ ಮಲ್ಲು ಗ್ಯಾಂಗ್ ಉಪಟಳ ಹೆಚ್ಚಾಗುತ್ತಿದೆ. ಈ ದರೋಡೆಕೋರರ ಗ್ಯಾಂಗ್ಗೆ ಚಿನ್ನದ ಉದ್ಯಮಿಗಳನ್ನೇ ಟಾರ್ಗೆಟ್ ಮಾಡಿದ್ದು, ಗುಂಡ್ಲುಪೇಟೆ (ಗುಂಡ್ಲುಪೇಟೆ) ಮಾರ್ಗವಾಗಿ ಕೇರಳಕ್ಕೆ ತೆರಳುವ ಚಿನ್ನದ ಉದ್ಯಮಿಗಳನ್ನು ಟಾರ್ಗೆಟ್ ಮಾಡಿ ಸುಲಿಗೆ ಮಾಡುತ್ತಾರೆ. ಕಳೆದ ಎರೆಡು ತಿಂಗಳ ಹಿಂದಷ್ಟೆ ಒಂದು ಕಾಲು ಕೆಜಿ ಚಿನ್ನಾಭರಣ ಮಾಡಿ ಗಾಯಬ್ ಆಗಿದ್ದ ಆರೋಪಿಗಳು ಈಗಾಗ್ಲೆ ಪೊಲೀಸರು 3 ಮಂದಿ ಆರೋಪಿಗಳನ್ನು ಬಂಧಿಸಿದ್ದಾರೆ. ಇನ್ನು ಪ್ರಕರಣದ ಕಿಂಗ್ ಪಿನ್ ಗಾಗಿ ಶೋಧಕಾರ್ಯ ನಡೆದಿದೆ. ಈ ಘಟನೆ ಮಾಸುವ ಮುನ್ನವೇ ಮತ್ತೊಂದು ಚಿನ್ನದ ಉದ್ಯಮದ ದರೋಡೆ ಪ್ರಕರಣ ಬೆಳಕಿಗೆ ಬಂದಿದೆ. ಕೇರಳದ ಚಿನ್ನದ ಉದ್ಯಮಿಗಳಾದ ಜಮ್ಸಿದ್ ಹಾಗೂ ಫೈಸಲ್ ನ ಅಡ್ಡಗಟ್ಟಿ 10 ಲಕ್ಷ ರೂ. ನಗದು ದೋಚಿ ಪರಾರಿಯಾಗಿದೆ. ಹೀಗಾಗಿ ಕೇರಳದ ಮಲ್ಲು ಗ್ಯಾ ಕೃತ್ಯಕ್ಕೆ ಕಡಿವಾಣ ಹಾಕಲು ಪೊಲೀಸರು ಹೊಸ ಪ್ಲ್ಯಾನ್ ಮಾಡಿದ್ದಾರೆ.
ಇನ್ನು ಈ ಫೈಸಲ್ ಮತ್ತು ಜಮ್ಸಿದ್ ಇಬ್ಬರೂ ಕೇರಳದಿಂದ ಬಂದು ತಮ್ಮ ಚಿನ್ನವನ್ನ ಮಾರಾಟ ಮಾಡಿ 10 ಲಕ್ಷ ನಗದನ್ನ ತೆಗೆದು ಕೊಂಡು ಹೋಗುತ್ತಿದ್ದರು. ಈ ವೇಳೆ ಗುಂಡ್ಲುಪೇಟೆ ಕೇರಳ ಗಡಿ ಮಧ್ಯೆ ಬರುವ ಕಾಡಿನಲ್ಲಿ ಇನ್ನೋವಾ ಕಾರಿನಲ್ಲಿ ಬಂದು ಚಿನ್ನದ ಉದ್ಯಮಿಗಳನ್ನು ಅಡ್ಡಗಟ್ಟಿದ್ದಾರೆ. ಬಳಿಕ ಮಾರಕಾಸ್ತ್ರ ತೋರಿಸಿ ಬೆದರಿಸಿ 10 ಲಕ್ಷ ದರೋಡೆ ಮಾಡಿ ಪರಾರಿಯಾಗಿದೆ. ದರೋಡೆ ಮಾಡಿದ ಸ್ಥಳದಲ್ಲಿ ನೆಟ್ವರ್ಕ್ ಸಿಗಲ್ಲ. ಯಾವ ಮೊಬೈಲ್ ನ ಸಿಮ್ ಕೂಡ ವರ್ಕ್ ಆಗಲ್ಲ. ಇದನ್ನೇ ಬಂಡವಾಳ ಮಾಡಿಕೊಂಡು ಈ ಕೃತ್ಯ ಎಸಗಿದ್ದಾರೆ.
ಇದನ್ನೂ ಓದಿ: ಮಾದಪ್ಪನ ಭಕ್ತರಿಗೆ ಮಹತ್ವದ ಸೂಚನೆ: ಮಲೆ ಮಹದೇಶ್ವರನ ದರ್ಶನಕ್ಕೆ ಹೊಸ ರೂಲ್ಸ್
ಇನ್ನು ಘಟನೆ ನಡೆದಿದ್ದು ಜನವರಿ 10ರಂದು. ಯಾವುದೇ ದೂರುದಾರರು ಜನವರಿ 27ಕ್ಕೆ ಗುಂಡ್ಲುಪೇಟೆ ಪೊಲೀಸರಿಗೆ ದೂರು ನೀಡಿದ್ದು, ಪ್ರಕರಣ ಕೈಗೆತ್ತಿಕೊಂಡ ಖಾಕಿ, ದರೋಡೆ ಗ್ಯಾಂಗ್ ಬಂಧನಕ್ಕಾಗಿ ಈಗ ಮದ್ದೂರು ಚೆಕ್ ಪೋಸ್ಟ್ ಟೋಲ್ ಗೇಟ್ ಜೊತೆ ಈಗ ಮತ್ತೊಂದು ಚೆಕ್ ಪೋಸ್ಟ್ ನಿರ್ಮಾಣವಾಗಿದೆ. ಕೇರಳದಿಂದ ಕರ್ನಾಟಕ, ಕರ್ನಾಟಕದಿಂದ ಕೇರಳಕ್ಕೆ ತೆರಳುವ ವಾಹನಗಳ ಮೇಲೆ ಹದ್ದಿನ ಕಣ್ಣಿಟ್ಟಿದ್ದು, ಕೇರಳದ ಮಲ್ಲು ಗ್ಯಾಂಗ್ ಬಾಲ ಬಿಚ್ಚದಂತೆ ಎಚ್ಚರಿಕೆ ನೀಡಲಾಗಿದೆ.
ಇನ್ನು ದೂರು ದಾರರ ಮೇಲೆ ಪೊಲೀಸರಿಗೆ ಸಂಶಯವಿದೆ. ಘಟನೆ ನಡೆದಿದ್ದು ಜನವರಿ 10 ರಂದು. ಬಂದು ದೂರು ನೀಡಿದ್ದು ಜನವರಿ 27ರಂದು. ಘಟನೆ 7 ದಿನ ಬಳಿಕ ತಡವಾಗಿ ಏಕೆ ದೂರು ಹೇಳಿದೆ? ಇನ್ನು ದರೋಡೆ ಮಾಡಿದ ಆರೋಪಿಗಳು ಕೂಡ ದೂರದಾರರ ಪರಿಚಯಸ್ಥರು ಎಂಬ ಶಂಕೆ ವ್ಯಕ್ತವಾಗಿದ್ದು, ಈ ಬಗ್ಗೆ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ.