Amruthadhaare Serial ಅಂತ್ಯ? ಜೈದೇವ್​ಗೆ ಎಲ್ಲಾ ಆಸ್ತಿ ಕೊಡಲು ಗೌತಮ್​ ರೆಡಿ! ಮುಂದೇನು?

Amruthadhaare Serial ಅಂತ್ಯ? ಜೈದೇವ್​ಗೆ ಎಲ್ಲಾ ಆಸ್ತಿ ಕೊಡಲು ಗೌತಮ್​ ರೆಡಿ! ಮುಂದೇನು?



Amruthadhaare Serial ಅಂತ್ಯ? ಜೈದೇವ್​ಗೆ ಎಲ್ಲಾ ಆಸ್ತಿ ಕೊಡಲು ಗೌತಮ್​ ರೆಡಿ! ಮುಂದೇನು?
ಅಮೃತಧಾರೆ ಧಾರಾವಾಹಿಯು ಮುಕ್ತಾಯದ ಹಂತ ತಲುಪಿದೆ. ಗೌತಮ್ ಮತ್ತು ಭೂಮಿಕಾ ಒಂದಾಗಿದ್ದು, ಜೈದೇವ್‌ನ ಆಟಕ್ಕೆ ಗೌತಮ್ ಅಂತ್ಯ ಹಾಡಿದ್ದಾನೆ. ಬಹುತೇಕ ಎಲ್ಲಾ ಪಾತ್ರಗಳ ಕಥೆ ಒಂದು ತಾರ್ಕಿಕ ಅಂತ್ಯ ಕಂಡಿರುವುದರಿಂದ ಸೀರಿಯಲ್ ಶೀಘ್ರದಲ್ಲೇ ಮುಗಿಯುವ ಸಾಧ್ಯತೆಯಿದೆ.<img><p>ಅಮೃತಧಾರೆ ಸೀರಿಯಲ್​ (Amruthadhaare Serial) ಇನ್ನೇನು ಮುಗಿಯುವ ಹಂತಕ್ಕೆ ಬಂದಿದೆ. ಗೌತಮ್​ ಮತ್ತು ಭೂಮಿಕಾ ಒಂದಾಗಿ ಆಯ್ತು. ಸೀರಿಯಲ್​ನಲ್ಲಿ ಮುಖ್ಯವಾಗಿ ಇರೋದು ಇದೊಂದೇ. ಅದಂತೂ ಮುಗಿದು ಆಗಿದೆ.</p><img><p>ಈಗೇನಿದ್ದರೂ ಜೈದೇವ, ಶಕುಂತಲಾಗೆ ಬುದ್ಧಿ ಕಲಿಸೋದು ಅಷ್ಟೇ. ಈಗ ಅದು ಕೂಡ ಆಗಿ ಹೋಗಿದೆ. ಜೈದೇವ, ಆಕಾಶ್​ನನ್ನು ಕಿಡ್​ನ್ಯಾಪ್​ ಮಾಡಿಸಿಕೊಂಡು ಆಸ್ತಿಗೆ ಸಹಿ ಹಾಕಿಸಿಕೊಂಡದ್ದು ಆಗಿದೆ. ಜೈದೇವನನ್ನು ನೆನೆದು ಆಕಾಶ್​ ರಾತ್ರಿಯ ವೇಳೆಯೂ ಗಾಬರಿ ಬಿದ್ದದ್ದನ್ನು ಕಂಡು ಗೌತಮ್​ ಕಿಡಿಕಿಡಿಯಾಗಿದ್ದಾನೆ.</p><img><p>ಜೈದೇವ್​ ಕಿಡ್​ನ್ಯಾಪ್​ ಮಾಡಿರೋ ವಿಷ್ಯ ಅವನಿಗೆ ಗೊತ್ತಿರಲಿಲ್ಲ. ಕೊನೆಗೆ ಆಕಾಶ್​ ಎಲ್ಲವನ್ನೂ ಹೇಳಿದಾಗ, ಸಿಟ್ಟಿನಿಂದ ಬಂದ ಗೌತಮ್​, ಜೈದೇವ್​ಗೆ ಬುದ್ಧಿ ಹೇಳಿದ್ದಾನೆ. ನನ್ನ ಇರೋ ಬರೋ ಆಸ್ತಿಯನ್ನೆಲ್ಲಾ ನಿನಗೇ ಕೊಟ್ಟುಬಿಡುತ್ತೇನೆ. ನನ್ನವರಿಗೆ ತೊಂದರೆ ಮಾಡಿದ್ರೆ ಚೆನ್ನಾಗಿರಲ್ಲ ಎಂದು ವಾರ್ನ್​ ಮಾಡಿ ಬಂದಿದ್ದಾನೆ.</p><img><p>ಅಲ್ಲಿಗೆ ಜೈದೇವ ಆಸ್ತಿ ಪಡೆದು ಆರಾಮ್​ ಇರ್ತಾನೆ, ಇಲ್ಲವೇ ಬುದ್ಧಿ ಬಂದು ಬಾಯಿಮುಚ್ಚಿಕೊಂಡು ಇರ್ತಾನೆ. ಅಲ್ಲಿಗೆ ಅವನ ಕಥೆಯೂ ಮುಗಿಯಿತು. ಇನ್ನೇನೂ ಕಿತಾಪತಿ ಮಾಡುವ ಸ್ಥಿತಿಯಲ್ಲಿ ಅವನು ಸದ್ಯ ಇದ್ದಂತಿಲ್ಲ.</p><img><p>ಅದೇ ಇನ್ನೊಂದೆಡೆ, ಜೈದೇವನೇ ಪುಡಿ ರೌಡಿಯನ್ನು ಮಲ್ಲಿಯ ಹಿಂದೆ ಬಿಟ್ಟು, ಅವರಿಬ್ಬರಲ್ಲಿ ಪ್ರೀತಿ ಮೂಡುವ ಹಾಗೆ ಮಾಡಿದ್ದಾನೆ. ಅಲ್ಲಿಗೆ ಅವರ ಸ್ಟೋರಿನೂ ಮುಗಿಯಿತು, ಮಲ್ಲಿಗೆ ಲೈಫ್​ ಸಿಕ್ಕಿತು.</p><img><p>ಉಳಿದವರೆಲ್ಲರೂ ಖುಷಿಯಿಂದ ಇದ್ದಾರೆ. ಎಲ್ಲರೂ ಒಂದಾಗಿದ್ದಾರೆ. ಇನ್ನು ಸ್ಟೋರಿ ಎಳೆಯುವುದರಲ್ಲಿ ಯಾವುದೇ ಅರ್ಥವಿಲ್ಲ. ಆದ್ದರಿಂದ ಅಮೃತಧಾರೆ ಮುಗಿಯುತ್ತದೆ ಎಂದೇ ಹೇಳಲಾಗುತ್ತಿದೆ. ಇನ್ನು ಕೆಲವೇ ದಿನಗಳಲ್ಲಿ ಇದು ಗೊತ್ತಾಗಬೇಕಿದೆ.</p>



Source link

Leave a Reply

Your email address will not be published. Required fields are marked *