Headlines

ಬರದ ನಾಡಲ್ಲಿ ಬಂಗಾರದ ಬೆಳೆ ಬೆಳೆದ ಯುವ ರೈತ: ಮೂರುವರೆ ಎಕರೆ ಜಮೀನಿನಲ್ಲಿ ಲಕ್ಷಾಂತರ ರೂ ಲಾಭ

ಬರದ ನಾಡಲ್ಲಿ ಬಂಗಾರದ ಬೆಳೆ ಬೆಳೆದ ಯುವ ರೈತ: ಮೂರುವರೆ ಎಕರೆ ಜಮೀನಿನಲ್ಲಿ ಲಕ್ಷಾಂತರ ರೂ ಲಾಭ


ಯಾದಗಿರಿ, ಫೆಬ್ರವರಿ 01: ಅದು ಬರದ ನಾಡು. ಮಳೆ ಬಂದರೆ ಬೆಳೆ, ಇಲ್ಲವೆಂದರೆ ಬರಗಾಲ ಎನ್ನುವಂತಿದೆ. ಹೀಗಾಗಿ ರೈತರು ಮಳೆ ಆಶ್ರಿತ ಬೆಳೆಗಳನ್ನು ಹೆಚ್ಚಾಗಿ ಬೆಳೆಯುತ್ತಾರೆ. ಅನೇಕ ರೈತರು ನಷ್ಟ ಅನುಭವಿಸುತ್ತಾರೆ. ಆದರೆ ಆ ಯುವ ರೈತ (ರೈತ) ಕೇವಲ ಇದಕ್ಕೆ ವಿರೋಧ ಎನ್ನುವ ಹಾಗೆ ತೋಟಗಾರಿಕೆ ಬೆಳೆಯಲು ಬೆಳೆದು ಭರ್ಜರಿ ಲಾಭ ಗಳಿಸಿದ್ದಾರೆ. ಕೇವಲ ಮೂರುವರೆ ಜಮೀನಿನಲ್ಲಿ ಕಲ್ಲಂಗಡಿ (ಕಲ್ಲಂಗಡಿ) ಬೆಳೆಯನ್ನ ಬೆಳೆದು ಹಲವಾರು ರೂ. ಲಾಭ ಪಡೆದು ಎಲ್ಲರ ಹುಬ್ಬೇರಿಸುವಂತೆ ಮಾಡಿದ್ದಾರೆ.

ಯಾದಗಿರಿ ಜಿಲ್ಲೆ ಅಂದರೆ ಸಾಕು ಬರದ ನಾಡು ಅಂತಲೇ ಕರೆಯಲಾಗುತ್ತೆ. ಏಕೆಂದರೆ ಜಿಲ್ಲೆಯಲ್ಲಿ ಅನ್ನದಾತರ ಸ್ಥಿತಿ ಹೇಗಿದೆ ಅಂದರೆ ಮಳೆ ಬಂದರೆ ಬೆಳೆ, ಇಲ್ಲವೆಂದರೆ ಬರಗಾಲ ಎನ್ನುವಂತ ಸ್ಥಿತಿಯಿದೆ. ವಿಶೇಷವಾಗಿ ರೈತರು ಸಂಪ್ರದಾಯಿಕ ಬೆಳೆಗಳಾದ ತೊಗರಿ, ಹತ್ತಿ, ಸಜ್ಜೆ ಮುಂತಾದ ಬೆಳೆಗಳಲ್ಲಿ ಬೆಳೆದು ಮಳೆಯ ಮೇಲೆ ಬಾರ ಹಾಕಿಕೊಂಡು ಕುಳಿತುಕೊಳ್ಳುತ್ತಾರೆ. ಮಳೆ ಬಂದರೆ ಬೆಳೆ ಸಿಗುತ್ತೆ ಇಲ್ಲಂದ್ರೆ ಮೈತುಂಬಾ ಸಾಲ ಮಾಡಿಕೊಳ್ಳಬೇಕು ಬಿಟ್ಟು ಹೊಟ್ಟೆ ಪಾಡಿಗಾಗಿ ಮಹಾನಗರಗಳಿಗೆ ಹೋಗಬೇಕು.

ಇದನ್ನೂ ಓದಿ: ಬಿಸಿಯೂಟದಲ್ಲಿ ಹುಳುಗಳ ಪತ್ತೆ: ಟಿವಿ9 ವರದಿ ಇಂಪ್ಯಾಕ್ಟ್; ಶಾಲೆಗೆ ಬಂತು ಗುಣಮಟ್ಟದ ಬೇಳೆ

ಇಂತಹ ಪರಿಸ್ಥಿತಿಯಲ್ಲಿ ಯಾದಗಿರಿ ತಾಲ್ಲೂಕಿನ ಅಶೋಕ್ ನಗರದ ತಾಂಡದ ಯುವ ರೈತ ಮಲ್ಲಿಕಾರ್ಜುನ ತೋಟಗಾರಿಕೆಯ ಮಾದರಿಯಲ್ಲಿ ಬೆಳೆದ ಎಲ್ಲಾ ರೈತರಿಗೆ. 20 ಸಾವಿರ ರೂ ಕೊಟ್ಟು ಮೂರುವರೆ ಜಮೀನು ಲೀಸ್ ಗೆ ಪಡೆದು ಕಲ್ಲಂಗಡಿ ಬೆಳೆಯನ್ನ ಬೆಳೆದು ಲಕ್ಷಾಂತರ ರೂ. ಲಾಭ ಗಳಿಸಿದ್ದಾರೆ. ಕೇವಲ ಎರಡು ತಿಂಗಳಲ್ಲೇ 20 ಲಕ್ಷ ರೂ ಲಾಭ ಪಡೆದು ಸಾಧನೆ ಮಾಡಿದ್ದಾರೆ.

ಕಲಂಗಡಿ

ಇನ್ನು ರೈತ ಮಲ್ಲಿಕಾರ್ಜುನ ಬೋರವೆಲ್ ನೀರು ಸೇರಿದಂತೆ ಜಮೀನಿನಲ್ಲಿ ಯಾವುದೇ ನೀರು ಇಲ್ಲದ ಜಮೀನು ಲೀಸ್ ಪಡೆದಿದ್ದರು. ಮೂರುವರೆ ಬೆಳೆಯನ್ನಾದರೂ ಬೆಳೆಯಬೇಕು ಎಂದು ನಿರ್ಧರಿಸಿ ಕಲ್ಲಂಗಡಿ ಬೆಳೆಯೋಕೆ ಪ್ಲಾನ್ ಮಾಡಲಾಗಿತ್ತು. ಜಮೀನಿನಲ್ಲಿ ನೀರು ಇಲ್ಲದ ಕಾರಣಕ್ಕೆ ಇದು ಅಸಾಧ್ಯವಾಗಿತ್ತು. ಆದರೆ ಪಕ್ಕದ ಜಮೀನಿನಲ್ಲಿ ಬೋರವೆಲ್ ನೀರು ಬಾಡಿಗೆಗೆ ಪಡೆದು ಕಲ್ಲಂಗಡಿ ಬೆಳೆದಿದ್ದಾರೆ.

ಕೊಪ್ಪಳದಿಂದ ಕಲ್ಲಂಗಡಿ ಬೆಳೆಯ ಮೆಲೊಡಿ ತಳಿಯ ಸಸಿಗಳನ್ನು ತಂದು ಹಾಕಿದ್ದಾರೆ. ಜೊತೆಗೆ ತೋಟಗಾರಿಕೆ ಇಲಾಖೆ ಯಾವುದೇ ಸಹಾಯವಿಲ್ಲದೆ ತಾವೇ ಸ್ವಂತ ದುಡ್ಡು ಖರ್ಚು ಮಾಡಿ ಸ್ಪಿಂಕ್ಲರ್ ಪೈಪ್‌ಗಳನ್ನು ತಂದು ಅಳವಡಿಕೆ ಮಾಡಲಾಗಿದೆ. ಬಳಿಕ ಇಡೀ ಕುಟುಂಬಸ್ಥರೊಂದಿಗೆ ಜಮೀನಿನಲ್ಲಿ ದುಡಿದ ಕಾರಣ ಎರಡೇ ತಿಂಗಳಿನಲ್ಲಿ ಭರ್ಜರಿ ಬೆಳೆ ಕೈಗೆ ಬಂದಿದೆ.

ಬರೋಬರಿ 16 ಲಕ್ಷ ರೂ ಲಾಭ

ಮೊದಲ ಫಸಲು 22 ಟನ್ ಬಂದಿದ್ದು, ಸುಮಾರು 22 ರೂ. ಕೆಜಿ ಮಾರಾಟ ಮಾಡಿ ಸುಮಾರು 15 ಲಕ್ಷ ರೂ ಲಾಭ ಗಳಿಸಿದ್ದಾರೆ. ಇನ್ನು ಎರಡನೇ ಕಟಾವು 12 ಟನ್ ಬಂದಿದ್ದು ಸ್ವಲ್ಪ ಬೆಲೆ ಕಡಿಮೆ ಸಿಕ್ಕ ಕಾರಣಕ್ಕೆ 4 ಲಕ್ಷ ರೂ ಲಾಭ ಸಿಕ್ಕಿದೆ. ಕೊನೆಯ ಕಾಟವಿನಿಂದ ಒಂದು ಲಕ್ಷಕ್ಕೂ ಅಧಿಕ ಲಾಭ ಸಿಕ್ಕಿದೆ. ಈ ಬೆಳೆಯನ್ನ ಬೆಳೆಯೋಕೆ ಸುಮಾರು 4 ಲಕ್ಷ ರೂ ಖರ್ಚು ಮಾಡಿದ್ದು, ಖರ್ಚು ತೆಗೆದು ಬರೋಬರಿ 16 ಲಕ್ಷ ರೂ ಮಲ್ಲಿಕಾರ್ಜುನ ಅವರಿಗೆ ಲಾಭವಾಗಿದೆ. ಕೇವಲ ಎರಡೇ ತಿಂಗಳಲ್ಲಿ ಇಷ್ಟು ಲಾಭ ಆಗಿದ್ದಕ್ಕೆ ತಾಂಡದ ನಿವಾಸಿಗಳು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ಮೈಲಾರಲಿಂಗನಿಗೆ ಬಲಿ ಕೊಡಲು ತಂದಿದ್ದ ಕುರಿಮರಿಗಳನ್ನು ವಶಕ್ಕೆ ಪಡೆದು ಮಾರಾಟ ಮಾಡಿದ ಅಧಿಕಾರಿಗಳು

ಒಟ್ಟಿನಲ್ಲಿ ಯುವ ರೈತ ಮಲ್ಲಿಕಾರ್ಜುನ ಕೇವಲ ಮೂರುವರೆ ಜಮೀನಿನಲ್ಲಿ ಖರ್ಚು ತೆಗೆದು ಬರೋಬರಿ 16 ಲಕ್ಷ ರೂ ಪಡೆದಿದ್ದು ಸಾಂಪ್ರದಾಯಿಕವಾಗಿ ಬೆಳೆದು ನಷ್ಟ ಅನುಭವಿಸುವ ರೈತರಿಗೆ ಮಾದರಿಯಾಗಿದ್ದಾರೆ. ಹೀಗಾಗಿ ರೈತರು ತೋಟಗಾರಿಕೆ ಇಲಾಖೆಯಿಂದ ಸವಲತ್ತು ಪಡೆದು ಈ ರೀತಿಯ ಬೆಳೆಗಳನ್ನು ಬೆಳೆದು ಲಾಭ ಪಡೆಯಬೇಕಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

ರಂದು ಪ್ರಕಟಿಸಲಾಗಿದೆ – 9:21 pm, ಭಾನುವಾರ, 1 ಫೆಬ್ರವರಿ 26



Source link

Leave a Reply

Your email address will not be published. Required fields are marked *