ಫೆಬ್ರುವರಿ 1 ರಂದು ನಿರ್ಮಲಾ ಸೀತಾರಾಮನ್ ಅವರು ಪ್ರಸ್ತುತಪಡಿಸಿದ ಕೇಂದ್ರ ಬಜೆಟ್ 2026 (ಯೂನಿಯನ್ ಬಜೆಟ್) ಭಾರತದ ಹಿಂದಿನ ಸಾಧನೆಗಳು ಮತ್ತು ಭವಿಷ್ಯದ ಆಶೋತ್ತರಗಳ ನಡುವೆ ಕೊಂಡಿಯಾಗುವ ‘ನೀತಿ ಸೇತು’ (ನೀತಿ ಸೇತುವೆ) ಎಂದು ಬಣ್ಣಿಸಲಾಗುತ್ತಿದೆ. ಮ್ಯಾನುಫ್ಯಾಕ್ಚರಿಂಗ್ ಮತ್ತು ಎಐ ಸನ್ನದ್ಧತೆ (AI ಸನ್ನದ್ಧತೆ) ಮೇಲೆ ಗಮನ ಹರಿಸುತ್ತಾ ಪ್ರಗತಿಗೆ ಪುಷ್ಟಿ ಕೊಡುವ ಈ ಬಜೆಟ್, ವಿಶ್ವದಲ್ಲೇ ಅತಿವೇಗವಾಗಿ ಬೆಳೆಯುವ ಆರ್ಥಿಕತೆಯ ಸ್ಥಾನ ಭಾರತಕ್ಕೆ ಮುಂದುವರಿಯುತ್ತದೆ. ಈ ಬಜೆಟ್ನಲ್ಲಿ ನೀತಿ ಮುಂದುವರಿಕೆ (ಶೇ. 60-70) ಹೆಚ್ಚಿದೆ. ಜಾಗತಿಕವಾಗಿ ಹೆಚ್ಚುತ್ತಿರುವ ಅವಕಾಶಗಳನ್ನು ಬಳಸಿಕೊಳ್ಳಲು ವಿನೂತನವೆನಿಸುವ ನಿರ್ದಿಷ್ಟ ಸ್ಕೀಮ್ಗಳ ಮೂಲಕ ಕೋವಿಡ್ ನಂತರದ ಬೆಳವಣಿಗೆಯ ವೇಗವನ್ನು ಕಾಯ್ದುಕೊಳ್ಳಲು ಈ ಬಜೆಟ್ ಆವೃತ್ತಿಗಳು.
ಸಾಬೀತಾದ ನೀತಿಗಳ ಮುಂದುವರಿಕೆ ಮತ್ತು ಉನ್ನತೀಕರಣ
2026 ರ ಬಜೆಟ್ನಲ್ಲಿ ಹೆಚ್ಚಿನ ಭಾಗವು ಹಿಂದಿನ ವರ್ಷಗಳಲ್ಲಿ ಹಾಕಲಾದ ರಚನಾತ್ಮಕ ತಳಹದಿಗಳ ಮೇಲೆ ನಿರ್ಮಿತವಾಗಿದೆ. ವಿತ್ತೀಯ ಶಿಸ್ತು, ಮೂಲಸೌಕರ್ಯ ಮತ್ತು ಸ್ಥಿರತೆಯ ಮೇಲೆ ಗಮನ ಕೊಡುತ್ತದೆ.
ವಿತ್ತೀಯ ಸ್ಥಿರತೆ: ಕೋವಿಡ್ ನಂತರ 2021 ರಲ್ಲಿ ವಿತ್ತೀಯ ಶಿಸ್ತು ತರಲು ಶುರುವಾದ ಪ್ರಕ್ರಿಯೆ ಈ ಬಜೆಟ್ ನಲ್ಲೂ ಮುಂದುವರಿದಿದೆ. 2026-27ರಲ್ಲಿ ವಿತ್ತೀಯ ಕೊರತೆಗೆ ಜಿಡಿಪಿಯ ಶೇ. 4.3 ಗುರಿ ಹಾಕಲಾಗಿದೆ. 2030-31ರಲ್ಲಿ ಜಿಡಿಪಿ ಮತ್ತು ಸಾಲದ ಅನುಪಾತ ಶೇ. 50ಕ್ಕೆ ಇಳಿಯಬೇಕೆಂಬ ದೂರಗಾಮಿ ಗುರಿಯೊಂದಿಗೆ ಬಜೆಟ್ ಹೆಜ್ಜೆ ಹಾಕಿದೆ. 2025ರ ಇನ್ಕಮ್ ಟ್ಯಾಕ್ಸ್ ಕಾಯ್ದೆಯನ್ನು ಜಾರಿಗೆ ತಂದು ತೆರಿಗೆ ಸ್ಥಿರತೆ ಕಾಯ್ದುಕೊಂಡಿದೆ ಈ ಬಜೆಟ್. ಕಾರ್ಪೊರೇಟ್ ಟ್ಯಾಕ್ಸಲಾಗಲೀ, ವೈಯಕ್ತಿಕ ಇನ್ಕಮ್ ಟ್ಯಾಕ್ಸಲಾಗಲೀ ಬದಲಾವಣೆ ಮಾಡದೆಯೇ ಈ ಕ್ರಮ ತೆಗೆದುಕೊಳ್ಳಲಾಗಿದೆ.
ಇನ್ ಫ್ರಾಸ್ಟ್ರಕ್ಚರ್ ಶಕ್ತಿ: ಸಾರ್ವಜನಿಕ ಬಂಡವಾಳವನ್ನು ದಾಖಲೆಯ 12.2 ಲಕ್ಷ ಕೋಟಿ ರೂಗೆ (ಜಿಡಿಪಿಯ ಶೇ. 3.1) ಏರಿಸಲಾಗಿದೆ. ಸರಕು ಸಾಗಣೆ ಕಾರಿಡಾರ್ಗಳ ವಿಸ್ತರಣೆ, 20 ಹೊಸ ಜಲಮಾರ್ಗ, ಏಳು ಹೈಸ್ಪೀಡ್ ರೈಲು ಕಾರಿಡಾರ್ಗಳು ಈ ಬಂಡವಾಳ ವೆಚ್ಚದಲ್ಲಿ ಒಳಗೊಂಡಿವೆ.
ಟೆಕ್ ಮತ್ತು ಮ್ಯಾನುಫ್ಯಾಕ್ಚರಿಂಗ್ ಹೆಚ್ಚಿಸುವುದು: 2021ರಲ್ಲಿ ಇಂಡಿಯಾ ಸೆಮಿಕಂಡಕ್ಟರ್ ಮಿಷನ್ ಚಾಲನೆಗಾಗಿ. ಈ ಬಜೆಟ್ನಲ್ಲಿ ಸೆಮಿಕಂಡಕ್ಟರ್ ಮಿಷನ್ 2.0 ಘೋಷಣೆಯಾಗಿದೆ. ಅದರಂತೆ ಕಾಂಪೊನೆಂಟ್ಗಳ ಉತ್ಪಾದನೆಯ ಸ್ಕೀಮ್ಗೆ ಬಜೆಟ್ ಅಲೋಕೇಶನ್ 40,000 ಕೋಟಿ ರೂಗೆ ಏರಿಸಲಾಗಿದೆ.
ಎಂಎಸ್ಎಂಇ ಮತ್ತು ಗ್ರಾಮೀಣ ನೆರವು: 2015ರ ಸ್ಕಿಲ್ ಇಂಡಿಯಾ ಮಿಷನ್ ಮತ್ತು 2023ರ ಕ್ರೆಡಿಟ್ ಗ್ಯಾರಂಟಿ ಸ್ಕೀಮ್ಗಳ ನೆರವಿನೊಂದಿಗೆ ದೇಶದ ವಿವಿಧೆಡೆ 200 ಕೈಗಾರಿಕಾ ಕ್ಲಸ್ಟರ್ಗಳ ಮರುಚೇತರಿಕೆಗೆ ಬಜೆಟ್ನಲ್ಲಿ ಕ್ರಮ ತೆಗೆದುಕೊಳ್ಳಲಾಗಿದೆ. ಎರಡನೇ ಮತ್ತು ಮೂರನೇ ಸ್ತರದ ಪಟ್ಟಣಗಳಲ್ಲಿ ಬ್ಯೂಸಿನೆಸ್ ನಿಯಮಗಳು ಸರಳಗೊಳಿಸಲು ‘ಕಾರ್ಪೊರೇಟ್ ಮಿತ್ರಾಸ್’ ಯೋಜನೆ ತರಲಾಗಿದೆ. ಅಧಿಕ ಮೌಲ್ಯದ ಬೆಳೆಗಳಿಗೆ ಒತತು ಕೊಡುವ ಮೂಲಕ ಮತ್ತು ಫೈಬರ್ ಸ್ಕಿಮ್ ಮೂಲಕ ರೈತರ ಕಲ್ಯಾಣಕ್ಕೆ ಸಹಾಯ ಮಾಡುತ್ತದೆ.
ಇದನ್ನೂ ಓದಿ: ಭಾರತದ ಬಗ್ಗೆ ಇಲಾನ್ ಮಾಸ್ಕ್ ಟ್ವೀಟ್; ರಾಹುಲ್ ಮತ್ತು ವಿಪಕ್ಷಗಳನ್ನು ಝಾಡಿಸಿದ ಕೇಂದ್ರ ಸಚಿವರು
ಮುಂದಿ ದಶಕಕ್ಕೆ ಸಜ್ಜಾಗಲು ಬೇಕಾದ ನಾವೀನ್ಯತೆ
ಜಾಗತಿಕ ಪೂರೈಕೆ ಸರಪಳಿ ಮತ್ತು ಹೈಟೆಕ್ ಸೆಕ್ಟರ್ಗಳಲ್ಲಿ ಭಾರತದ ಸ್ಥಾನ ಭದ್ರಪಡಿಸುವಂತಹ ಹೊಸ ಉಪಕ್ರಮಗಳನ್ನು ಈ ಬಜೆಟ್ನಲ್ಲಿ ಜಾರಿ ಮಾಡಲಾಗಿದೆ:
ಸಂಪನ್ಮೂಲ ಭದ್ರತೆ: ಒಡಿಶಾ, ಕೇರಳ, ಆಂಧ್ರ ಮತ್ತು ತಮಿಳುನಾಡು ರಾಜ್ಯಗಳನ್ನು ಒಳಗೊಂಡಿರುವ ರೇರ್ ಅರ್ಥ್ ಕಾರಿಡಾರ್ಗಳನ್ನು ಸ್ಥಾಪಿಸಲಾಗಿದೆ. ಮೈನಿಂಗ್ ಮತ್ತು ಸಂಶೋಧನೆಯಲ್ಲಿ ಪೂರೈಕೆ ಸರಪಳಿಯನ್ನು ಬಲಪಡಿಸಲು ಇದು ಸಹಾಯ ಮಾಡುತ್ತದೆ.
ವಿಜ್ಞಾನದಲ್ಲಿ ಹೊಸ ಸಾಹಸ: ಬಯೋಫಾರ್ಮಾ ನಾವೀನ್ಯತೆ ಮತ್ತು ಕ್ಲಿನಿಕಲ್ ಟ್ರಯಲ್ಗಳಿಗೆ ಜಾಗತಿಕ ಅಡ್ಡೆಯಾಗಿಸುವಂತಹ ಗುರಿಯನ್ನು 10,000 ಕೋಟಿ ರೂ ಅನುದಾನದಲ್ಲಿ ಬಯೋಫಾರ್ಮಾ ಶಕ್ತಿ ಯೋಜನೆ ಭಾರತ ಬಜೆಟ್ನಲ್ಲಿ ಪ್ರಕಟಿಸಲಾಗಿದೆ.
ಹಣಕಾಸು ಪರಿವರ್ತನೆ: ಹೂಡಿಕೆಗಳಿಗೆ ರಿಸ್ಕ್ ಕಡಿಮೆ ಮಾಡಲು ಹೊಸ ಇನ್ ಫ್ರಾಸ್ಟ್ರಕ್ಚರ್ ರಿಸ್ಕ್ ಗ್ಯಾರಂಟಿ ಫಂಡ್ ಅನ್ನು ರಚಿಸಲಾಗಿದೆ. ಹಾಗೆಯೇ, ವಿಕಸಿತ ಭಾರತದ ನಿರ್ಮಾಣಕ್ಕೆ ನೆರವಾಗುವ ಬ್ಯಾಂಕಿಂಗ್ ಅನ್ನು ಪರಾಮರ್ಶಿಸಲು ಉನ್ನತ ಮಟ್ಟದ ಸಮಿತಿಯನ್ನು ರಚಿಸಲಾಗಿದೆ. ಎಸ್ಎಂಐ ಗ್ರೋಟ್ ಫಂಡ್ನಿಂದ ಎಂಎಸ್ಎಂಐಗಳಿಗೆ ಲಾಭದಾಯಕ. TREDS ಸೆಕ್ಯುರಿಸೇಶನ್ ಮೂಲಕ ಇನ್ವಾಯ್ಸ್ಗಳಿಗೆ ಸೆಕೆಂಡರಿ ಮಾರುಕಟ್ಟೆಯನ್ನು ನಿರ್ಮಿಸಲಾಗಿದೆ, ಇದರಿಂದಲೂ ಎಂಎಸ್ಎಂಐಗಳಿಗೆ ಲಾಭದಾಯಕವಾಗಿದೆ.
ಇದನ್ನೂ ಓದಿ: ಸೆಮಿಕಂಡಕ್ಟರ್ ಮಿಷನ್ಗೆ 40,000 ಕೋಟಿ ರೂ.; ಬಜೆಟ್ ಮಂಡನೆ ಬಳಿಕ ನಿರ್ಮಲಾ ಸೀತಾರಾಮನ್ ಸುದ್ದಿಗೋಷ್ಠಿ
ತತ್ಕ್ಷಣದ ಲಾಭಗಳು: ಇವತ್ತಿನ ಆರ್ಥಿಕ ಹೊರೆ ಇಳಿಸುವುದು
ಬಜೆಟ್ನಲ್ಲಿ ಭವಿಷ್ಯದ ದೃಷ್ಟಿ ಜೊತೆಗೆ ಉದ್ದಿಮೆಗಳು ಮತ್ತು ಜನಸಾಮಾನ್ಯರಿಗೆ ತತ್ಕ್ಷಣಕ್ಕೆ ಖುಷಿ ಕೊಡುವ ಸಂಗತಿಗಳು ಇವೆ:
ಕುಟುಂಬಗಳಿಗೆ ನೇರ ಪರಿಹಾರ: ವಿದೇಶಗಳಲ್ಲಿ ಶಿಕ್ಷಣ, ವೈದ್ಯಕೀಯ ಚಿಕಿತ್ಸೆ ಮತ್ತು ಪ್ರವಾಸ ಪ್ಯಾಕೇಜ್ಗಳಿಗೆ ಮಾಡುವ ವೆಚ್ಚಕ್ಕೆ ವಿಧಿಸುವ ಟಿಸಿಎಸ್ ತೆರಿಗೆಯನ್ನು ಶೇ. 5 ರಿಂದ ಶೇ. 2ಕ್ಕೆ ಇಳಿಸಲಾಗಿರುವುದು ಗಮನಾರ್ಹ. ಇದರಿಂದ ಭಾರತೀಯ ಕುಟುಂಬಗಳಿಗೆ ಹಣದ ಹೊರೆ ಕಡಿಮೆಯಾಗುತ್ತದೆ. ಅಂತಾರಾಷ್ಟ್ರೀಯ ಶಿಕ್ಷಣ ವೆಚ್ಚ ಸ್ವಲ್ಪ ಕಡಿಮೆ ಆಗಲು.
ಆರೋಗ್ಯಪಾಲನೆ ಮತ್ತು ಅನುಭೋಗ ವೆಚ್ಚ ಕಡಿಮೆ: 17 ಪ್ರಮುಖ ಔಷಧಿಗಳಿಗೆ ಆಮದು ಸುಂಕದಿಂದ ವಿನಾಯಿತಿ ನೀಡಲಾಗಿದೆ. ವೈಯಕ್ತಿಕ ಆಮದು ಸುಂಕಗಳನ್ನು ಶೇ. 20 ರಿಂದ ಶೇ. 10ಕ್ಕೆ ಇಳಿಸಲಾಗಿದೆ.
ನಿಯಮ ಬದ್ಧತೆ: ಸಣ್ಣ ತಪ್ಪುಗಳನ್ನು ಅಪರಾಧೀಕರಣ ಮಾಡುವುದನ್ನು ತಪ್ಪಿಸಿ. ಪೆನಾಲ್ಟಿ ಕ್ರಮಗಳನ್ನು ಮಿಳಿತಗೊಳಿಸದಿದ್ದರೆ. ಈ ತೆರಿಗೆ ಪಾವತಿದಾರರಲ್ಲಿ ಇರುವ ಆತಂಕವನ್ನು ಈ ಬಜೆಟ್ ಕಡಿಮೆ ಮಾಡುತ್ತದೆ. ಐಟಿಆರ್ ಪರಿಷ್ಕರಣೆ ಮತ್ತು ನ್ಯಾನ್-ಆಡಿಟ್ ಬ್ಯೂಸಿನೆಸ್ ಫೈಲಿಂಗ್ಗಳಿಗೆ ಡೆಡ್ಲೈನ್ ಅನ್ನು ವಿಸ್ತರಿಸಲಾಗಿದೆ.
ಕಾರ್ಮಿಕ ವರ್ಗಕ್ಕೆ ಶಕ್ತಿ: ಮಹಿಳಾ ನೇತೃತ್ವದ ಉದ್ದಿಮೆಗಳಿಗೆ ಒತ್ತು ಕೊಡಲಾಗಿದೆ, ಜೆಂಡರ್ ಬಜೆಟ್ಗೆ ಅನುದಾನವನ್ನು 5 ಲಕ್ಷ ಕೋಟಿ ರೂ.
ತತ್ಕ್ಷಣದ ಕ್ರಮಗಳ ಬದಲಿಗೆ ದೀರ್ಘಾವಧಿ ಪರಿಹಾರಗಳಿಗೆ ಬಜೆಟ್ನಲ್ಲಿ ಒತ್ತುಕೊಡಲಾಗಿದೆ. ದೇಶೀಯ ಮೌಲ್ಯ ಸರಪಳಿಯನ್ನು ಬಲಪಡಿಸಲು ಮತ್ತು ದೊಡ್ಡ ಪ್ರಮಾಣದಲ್ಲಿ ಬಹುಕೌಶಲ್ಯ ಉದ್ಯೋಗ ಸೃಷ್ಟಿಸಲು, ಹಾಗೆಯೇ ಕಂಪನಿಗಳಿಗೆ ಕಾರ್ಯಾಚರಣೆಯನ್ನು ಕಡಿಮೆ ಮಾಡಲು ಈ ಬಜೆಟ್ನಲ್ಲಿ ಕ್ರಮ ತೆಗೆದುಕೊಳ್ಳಲಾಗಿದೆ.
ಇದನ್ನೂ ಓದಿ: ಭಾರತದ ಪ್ರಗತಿಗೆ ಪೂರಕವಾಗಿದೆ ಈ ಬಜೆಟ್: ಅಪೋಲೋ ಹಾಸ್ಪಿಟಲ್ಸ್ ಮುಖ್ಯಸ್ಥ ಡಾ. ಪ್ರತಾಪ್ ಸಿ. ರೆಡ್ಡಿ
ಬಜೆಟ್ 2026: ಪ್ರಮುಖ ಘೋಷಣೆಗಳು
ಹೆಚ್ಚಿನ ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ