
ವಿಜಯಪುರ ಜಿಲ್ಲೆಯ ಕೊಂಡಗುಳಿ ಗ್ರಾಮದಲ್ಲಿ ಎರಡು ದಿನಗಳಿಂದ ಮನೆಯೊಂದರ ಬಳಿ ಕಾಣಿಸಿಕೊಂಡು ಜನರಲ್ಲಿ ಭಯ ಹುಟ್ಟಿಸಿದ್ದ ಬೃಹತ್ ನಾಗರಹಾವನ್ನು ಉರಗ ರಕ್ಷಕ ಸ್ನೇಕ್ ಜಾವೇದ್ ಅವರು ಸುರಕ್ಷಿತವಾಗಿ ರಕ್ಷಿಸಿದ್ದಾರೆ. ರಕ್ಷಣೆ ಮಾಡಿದ ಹಾವನ್ನು ನಂತರ ಸುರಕ್ಷಿತ ಸ್ಥಳಕ್ಕೆ ಬಿಡಲಾಗಿದೆ.<img><p>ವಿಜಯಪುರ ಜಿಲ್ಲೆಯ ಕೊಂಡಗುಳಿ ಗ್ರಾಮದಲ್ಲಿ ಜನರ ಭಯ ಮೂಡಿಸಿದ್ದ ದೊಡ್ಡ ಹೆಡೆ ನಾಗರ ಹಾವನ್ನ ಉರಗ ರಕ್ಷಕ ಸ್ನೇಕ್ ಜಾವೇದ್ ರಕ್ಷಣೆ ಮಾಡಿದ್ದಾರೆ. ಎರಡು ದಿನಗಳಿಂದ ದೇವರಹಿಪ್ಪರಗಿ ತಾಲೂಕಿನ ಕೊಂಡಗುಳಿ ಗ್ರಾಮದ ಸಂತೋಷ್ ಮಲ್ಲಾಡ್ ಎಂಬುವರ ಮನೆಯಲ್ಲಿ ಹಾವು ಕಾಣಿಸಿಕೊಂಡಿತ್ತು.</p><img><p>ಬೃಹತ್ ನಾಗರಹಾವು ನೋಡಿದ್ದ ಜನರು ಆತಂಕಗೊಂಡಿದ್ದರು. ಸಂತೋಷ್ ಮಲ್ಲಾಡ್ ಅವರ ಅಕ್ಕಪಕ್ಕದ ಮನೆಗಳ ಬಳಿಯೂ ನಾಗರ ಕಾಣಿಸಿಕೊಂಡ ಪರಿಣಾಮ ಸ್ಥಳೀಯರಲ್ಲಿ ಆತಂಕ ಹೆಚ್ಚಾಗಿತ್ತು.</p><img><p>ಎರಡು ದಿನಗಳಿಂದ ನಾಗರಹಾವು ಕಾಣಿಸಿಕೊಳ್ಳುತ್ತಿದ್ದರಿಂದ ಗ್ರಾಮಸ್ಥರು ಸ್ಥಳೀಯ ಉರಗ ರಕ್ಷಕರಾದ ಜಾವೇದ್ ಅವರಿಗೆ ವಿಷಯ ತಿಳಿಸಿದ್ದರು. ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕಾಗಮಿಸಿದ ಜಾವೇದ್, ಉರಗಕ್ಕೆ ಯಾವುದೇ ಹಾನಿಯಾಗದಂತೆ ರಕ್ಷಣೆ ಮಾಡಿದ್ದಾರೆ.</p><p><strong>ಇದನ್ನೂ ಓದಿ: </strong><strong>ಆಂಬುಲೆನ್ಸ್ನಲ್ಲಿ 2.6 ಕೋಟಿ ಮೌಲ್ಯದ ಗಾಂಜಾ ಸಾಗಣೆ: ಹಾವು ಹಿಡಿಯುವುದಕ್ಕೆ ಫೇಮಸ್ ಆಗಿದ್ದ ಯುಟ್ಯೂಬರ್ ಅಂದರ್</strong></p><img><p>ಉರಗ ರಕ್ಷಣೆ ಸಮಯದಲ್ಲಿ ಇಡೀ ಗ್ರಾಮದ ಜನರೆಲ್ಲಾ ಸಂತೋಷ್ ಮಲ್ಲಾಡ್ ಮನೆ ಬಳಿ ಸೇರಿದ್ದರು. ರಕ್ಷಣೆ ಮಾಡಿರುವ ಹಾವನ್ನು ಸುರಕ್ಷಿತ ಸ್ಥಳಕ್ಕೆ ಬಿಡಲಾಗಿದೆ. ಹಾವು ರಕ್ಷಣೆಯ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿವೆ.</p><p><strong>ಇದನ್ನೂ ಓದಿ: </strong><strong>ಹಾವಿಗೆ ಭಾವನೆಗಳಿದ್ಯಾ? ಬಾವಿಗೆಸೆದ ಮಗುವ ಹೊಟ್ಟೆಗೆ ಸುತ್ಕೊಂಡು ಕಾಪಾಡಿತ್ತು ನಾಗರಹಾವು!</strong></p>
Source link
Snake Video: ಕೊಂಡಗುಳಿಯಲ್ಲಿ ಭೀತಿ ಮೂಡಿಸಿದ್ದ ದೊಡ್ಡ ಹೆಡೆಯ ನಾಗರಹಾವು ರಕ್ಷಣೆ