ದೇವನಹಳ್ಳಿ, (ಫೆಬ್ರವರಿ 04): ಗಂಡನಿಂದ ದೂರವಿದ್ದ ಮಹಿಳೆಯನ್ನು ಪ್ರೀತಿ (ಪ್ರೀತಿ) ಹೆಸರಲ್ಲಿ ನಂಬಿಸಿ, ಸಂಪರ್ಕ ಬೆಳೆಸಿದ್ದು, ಬಳಿಕ ಆಕೆ ಗರ್ಭಿಣಿ ಎಂದು ತಿಳಿಯದೇ ಕೈಕೊಟ್ಟಿದ್ದಾನೆ. ಪ್ರಕರಣ ಸಂಬಂಧ ಸಂತ್ರಸ್ತೆ ನೀಡಿದ ದೂರಿನ ಭಾಗ ದೊಡ್ಡಬಳ್ಳಾಪುರ (ದೊಡ್ಡಬಳ್ಳಾಪುರ) ನಗರದ ಶಾಂತಿನಗರ ನಿವಾಸಿ ಪ್ರವೀಣ್ ಕುಮಾರ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಸಂತ್ರಸ್ತ ಮಹಿಳೆಗೆ ಮಗಳು ಕೂಡ ಇದ್ದಾಳೆಂಬ ವಿಷಯ ಬಹಿರಂಗವಾಗಿದ್ದು, ತನ್ನ ಮೇಲೆ ಆರೋಪಿ ಮತ್ತು ಆತನ ಕುಟುಂಬ ಶೋಷಣೆ ನಡೆಸಿರೋದಾಗಿ ಆಕೆ ಆರೋಪಿಸಿದ್ದಾಳೆ. ಇನ್ನು ಆರೋಪಿ ಪ್ರವೀಣ್ ಕುಮಾರ್ ಮಾಡಿದ ಮೋಸದ ಬಗ್ಗೆ ಸಂತ್ರಸ್ತ ಟಿವಿ9 ಬಳಿ ಹೇಳಿದ್ದಾಳೆ.