
<p>Bigg Boss Rajath: ಬಿಗ್ ಬಾಸ್ ಕನ್ನಡ ಸೀಸನ್ 12 ಶೋ ರಜತ್ ಅವರು ಹೊಸ ವಿವಾದವನ್ನು ಮೈಮೇಲೆ ಎಳೆದುಕೊಂಡಿದ್ದಾರೆ. ಹೌದು, ಅಂದು ಮಚ್ಚು ಬಳಸಿ ರೀಲ್ಸ್ ಮಾಡಿದ್ದ ರಜತ್ ಈ ಬಾರಿ ಮೈಸೂರಿನ ಪಾರಂಪರಿಕ ಕಟ್ಟದಲ್ಲಿ ಸಿಗರೇಟ್ ಸೇದಿದ್ದಾರೆ.</p><p> </p><img><p>ಹೌದು, ಬಿಗ್ ಬಾಸ್ ರಜತ್ ಅವರು ಆಗಾಗ ಒಂದಿಲ್ಲೊಂದು ವಿವಾದಗಳನ್ನು ಮೈಮೇಲೆ ಎಳೆದುಕೊಳ್ಳುತ್ತಿರುತ್ತಾರೆ. ಈ ಬಾರಿ ಕೂಡ ಅವರು ಬಿಗ್ ಬಾಸ್ ಶೋಗೆ ಆಗಮಿಸಿದ್ದರು. ಇವರ ಹಾಗೂ ಅಶ್ವಿನಿ ಗೌಡ, ರಾಶಿಕಾ ಶೆಟ್ಟಿ, ಧ್ರುವಂತ್ ನಡುವೆ ಜಗಳ ಕೂಡ ಆಗಿತ್ತು.</p><img><p>ಈಗ ರಜತ್ ಅವರು ಮೈಸೂರಿನ ಪಾರಂಪರಿಕ ಕಟ್ಟ ಡಿಸಿ ಕಚೇರಿ ಮುಂದೆ ಸಿಗರೇಟ್ ಸೇದುತ್ತ ಫೋಟೋಶೂಟ್ ಮಾಡಿಸಿಕೊಂಡಿದ್ದಾರೆ. </p><img><p>COTPA ಪ್ರಕಾರ ( ಸಿಗರೇಟ್ ಮತ್ತು ಇತರೆ ತಂಬಾಕು ಉತ್ಪನ್ನಗಳ ಕಾಯ್ದೆ) ಸರ್ಕಾರಿ ಕಚೇರಿ, ಆಸ್ಪತ್ರೆಗಳು, ಶಿಕ್ಷಣ ಸಂಸ್ಥೆ, ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನವನ್ನು ನಿಷೇಧಿಸಲಾಗಿದೆ. ಈ ರೀತಿ ಮಾಡಿದರೆ ದಂಡ ವಿಧಿಸಲಾಗುವುದು.</p><img><p>ಮೈಸೂರಿನ ಕೃಷ್ಣರಾಜ ಬೌಲೆವಾರ್ಡ್ನಲ್ಲಿ ಪಾರಂಪರಿಕ ಡಿಸಿ ಕಚೇರಿ (ಅಟ್ಟಾರಾ ಕಚೇರಿ) ಇದೆ. ಇದು 129 ವರ್ಷಗಳಷ್ಟು ಹಳೆಯದಾದ ಕಚೇರಿ ಆಗಿದೆ. 1895ರಲ್ಲಿ ಚಾಮರಾಜ ಒಡೆಯರ್ ಅವರು ನಿರ್ಮಿಸಿದ್ದ ಐತಿಹಾಸಿಕ ಕಟ್ಟಡವಿದು.</p><img><p>ಈ ಕಟ್ಟಡವು ಇಂಡೋ-ಸಾರ್ಸೆನಿಕ್ ಶೈಲಿಯಲ್ಲಿದೆ. ಇದನ್ನು ಮ್ಯೂಸಿಯಂ, ಪ್ರವಾಸಿ ತಾಣವಾಗಿ ಪರಿವರ್ತಿಸುವ ಯೋಜನೆ ಆಗುತ್ತಿದೆ.</p>
Source link
129 ವರ್ಷದ ಹಳೆಯ ಮೈಸೂರಿನ ಪಾರಂಪರಿಕ ಕಟ್ಟಡದಲ್ಲಿ ಎಡವಟ್ಟು ಮಾಡ್ಕೊಂಡ Bigg Boss ರಜತ್; ಹೊಸ ವಿವಾದ ಎಳ್ಕೊಂಡ್ರು