
<p>Bhagyalakshmi: ಭಾಗ್ಯಲಕ್ಷ್ಮೀ ಧಾರಾವಾಹಿಯಲ್ಲಿ ಭಾಗ್ಯ ಆದಿಗೆ ತನ್ನ ಪ್ರೀತಿಯನ್ನು ಹೇಳಲು ತಡ ಮಾಡಿದ ಕಾರಣ ಇದೀಗ, ಭಾಗ್ಯಳನ್ನು ಬಿಟ್ಟು, ವಿಮಾನ ಹತ್ತಿ, ವಿದೇಶಕ್ಕೆ ಹೊರಟೇ ಬಿಟ್ಟ ಆದಿ. ಆದರೆ ವೀಕ್ಷಕರು ಹೇಳ್ತಿದ್ದಾರೆ, ಇದು ಮಿಲನ ಸಿನಿಮಾದ ಕಥೆಯನ್ನು ನೆನಪಿಸುತ್ತಿದೆಯಂತೆ.</p><img><p>ಭಾಗ್ಯಲಕ್ಷ್ಮೀ ಧಾರಾವಾಹಿಯಲ್ಲಿ ಆದಿ ತನ್ನ ಪ್ರೀತಿಯನ್ನು ಭಾಗ್ಯಳಿಗೆ ತಿಳಿಸಿದ್ದರೂ, ಆತನನ್ನು ಆ ದೃಷ್ಟಿಯಲ್ಲಿ ನೋಡಲು ಇಷ್ಟಪಡದ ಭಾಗ್ಯ ಆತನ ಪ್ರೀತಿಯನ್ನು ದೂರ ತಳ್ಳಿದ್ದಳು. ಆದರೆ ಕೊನೆಗೂ ಭಾಗ್ಯಳಿಗೆ ತನ್ನಲ್ಲಿರುವ ಪ್ರೀತಿ ಅರ್ಥವಾಗಿದೆ. ಆದರೆ ಅದನ್ನು ಹೇಳಲು ಅಲ್ಲಿ ಆದಿಯೇ ಇಲ್ಲ.</p><img><p>ತನ್ನ ಪ್ರೀತಿಯನ್ನು ಆದಿಗೆ ಹೇಳಿಕೊಳ್ಳಬೇಕು, ಆದಿ ದೇಶದಲ್ಲಿ ಉಳಿಯುವಂತೆ ಮಾಡಬೇಕು ಎಂದು ಓಡೋಡಿ ಬಂದ ಭಾಗ್ಯಳಿಗೆ ಕಾದಿದ್ದು ನಿರಾಸೆ, ಭಾಗ್ಯನ ಬಿಟ್ಟು ಹೊರಟೇ ಹೋದ್ನಾ ಆದಿ. ವಿಮಾನ ಹತ್ತಿ ವಿದೇಶಕ್ಕೆ ತೆರಳಿದ್ದಾನೆ ಆದಿ. ಹಾಗಿದ್ರೆ ಮುಂದೆ ಭಾಗ್ಯ ಜೀವನ ಏನಾಗುತ್ತೆ?</p><img><ul> <li>ಆದಿ ಎಲ್ಲೂ ಹೋಗಿರಲ್ಲ, ವಿಮಾನ ಹೋದರೂ , ಆದಿ ಅಲ್ಲೇ ಸೈಡಲ್ಲಿ ಇರ್ತಾರೆ, ಮತ್ತೆ ಬಂದೇ ಬರ್ತಾರೆ.</li> <li>ಇದು ಮಿಲನ ಸಿನಿಮಾದ ದೃಶ್ಯವನ್ನು ನೆನಪಿಸುತ್ತದೆ. ಆದಿ ಹೋಗಲ್ಲ.</li> <li>ಆದಿ ಹೋಗಬೇಕು ಅಂದ್ರು, ಹೋಗೋದಕ್ಕೆ ನೀವು ಬಿಡಬೇಕು ಅಲ್ವಾ? ಅಂತಿದ್ದಾರೆ ವೀಕ್ಷಕರು.</li></ul><img><p>ಮಿಲನಾ ಚಿತ್ರದಲ್ಲಿ ಅಂಜಲಿಯನ್ನು ಹುಡುಕಿ ಎರ್ ಪೋರ್ಟ್ ಗೆ ಬರುವ ಆಕಾಶ್, ಆಕೆ ವಿದೇಶಕ್ಕೆ ಹಾರಿ ಆಗಿದೆ ಎಂದು ಚಿಂತೆ ಮಾಡುತ್ತಾ ಕೂರುತ್ತಾನೆ. ಆದರೆ ಅಂಜಲಿ ಹೋಗಿರೋದಿಲ್ಲ. ಅದೇ ರೀತಿ ಇಲ್ಲೂ ಸಹ ಆದಿ ಮತ್ತೆ ಬಂದೇ ಬರುತ್ತಾನೆ ಎನ್ನುತ್ತಿದ್ದಾರೆ ಜನ.</p><img><p>ಇನ್ನೊಂದೆಡೆ ತಾಂಡವ್ ಎದುರು ಶ್ರೇಷ್ಠಾಳ ನಿಜ ಬಣ್ಣ ಬಯಲಾಗಿದೆ. ಆಕೆಗೆ ತನ್ನ ಮಕ್ಕಳ ಮೇಲೆ ಯಾವುದೇ ರೀತಿಯ ಪ್ರೀತಿ ಇಲ್ಲ ಎನ್ನುವ ಅರಿವು ಕೂಡ ಆಗಿದೆ. ಹಾಗಾಗಿ, ಶ್ರೇಷ್ಠಾಳನ್ನು ಬಿಟ್ಟು, ಮತ್ತೆ ಭಾಗ್ಯ ಬಳಿ ಬಂದು ಕ್ಷಮೆ ಕೇಳುತ್ತಿದ್ದಾರೆ ತಾಂಡವ್.</p><img><p>ಇದೀಗ ವೀಕ್ಷಕರಲ್ಲಿ ಪ್ರಶ್ನೆ ಮೂಡಿದ್ದು, ಭಾಗ್ಯ ತಾಂಡವ್ ಮತ್ತು ಆದಿ ಇಬ್ಬರ ಪ್ರೀತಿಯಲ್ಲಿ ಯಾರನ್ನು ಆಯ್ಕೆ ಮಾಡುತ್ತಾರೆ. ತನ್ನ ತಪ್ಪಿನ ಅರಿವಾಗಿ ಮತ್ತೆ ಬಂದ ತಾಂಡವ್ ನನ್ನು ಮತ್ತೆ ಒಪ್ಪಿಕೊಳ್ಳುತ್ತಾಳೋ ಅಥವಾ ತನ್ನ ಪ್ರೀತಿಗಾಗಿ ಹಾತೊರೆಯುತ್ತಿರುವ ಆದಿಯನ್ನು ಒಪ್ಪುತ್ತಾಳೋ ಕಾದು ನೋಡಬೇಕು.</p>
Source link
Bhagyalakshmi: ಭಾಗ್ಯನ ಬಿಟ್ಟು ಹೊರಟೇ ಹೋದ್ನಾ ಆದಿ?… ಖಂಡಿತಾ ಇಲ್ಲ, ‘ಮಿಲನ’ ಮೂವಿ ಗ್ಯಾರಂಟಿ ಎಂದ ವೀಕ್ಷಕರು