ನನ್ನಿಂದ ಎಲ್ಲರನ್ನೂ ಒಪ್ಪಿಕೊಳ್ಳೋಕೆ ಆಗಲ್ಲ; ಮಂಗಳಮುಖಿಯರ ವಿರುದ್ಧ ಮಾತನಾಡಿದ ನಟಿಗೆ ತರಾಟೆ | Actress Veda Lakshmi Sparks Fresh Controversy With Remarks On Lgbtqia Community

ನನ್ನಿಂದ ಎಲ್ಲರನ್ನೂ ಒಪ್ಪಿಕೊಳ್ಳೋಕೆ ಆಗಲ್ಲ; ಮಂಗಳಮುಖಿಯರ ವಿರುದ್ಧ ಮಾತನಾಡಿದ ನಟಿಗೆ ತರಾಟೆ | Actress Veda Lakshmi Sparks Fresh Controversy With Remarks On Lgbtqia Community



ನನ್ನಿಂದ ಎಲ್ಲರನ್ನೂ ಒಪ್ಪಿಕೊಳ್ಳೋಕೆ ಆಗಲ್ಲ; ಮಂಗಳಮುಖಿಯರ ವಿರುದ್ಧ ಮಾತನಾಡಿದ ನಟಿಗೆ ತರಾಟೆ | Actress Veda Lakshmi Sparks Fresh Controversy With Remarks On Lgbtqia Community

LGBTQIA+ ಸಮುದಾಯದ ಎಲ್ಲಾ ವಿಭಾಗಗಳನ್ನು ಒಪ್ಪಿಕೊಳ್ಳಲು ನನಗೆ ಸಾಧ್ಯವಿಲ್ಲ. ಇದು ನನ್ನ ವೈಯಕ್ತಿಕ ಅಭಿಪ್ರಾಯ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯ ಎಂದು ಬಿಗ್ ಬಾಸ್ ಸ್ಪರ್ಧಿ ವೇದಲಕ್ಷ್ಮಿ ವಿಡಿಯೋ ಮೂಲಕ ಸ್ಪಷ್ಟಪಡಿಸಿದ್ದಾರೆ.

ಬಿಗ್ ಬಾಸ್ ಮಲಯಾಳಂ ಸೀಸನ್ 7ಕ್ಕೆ ವೈಲ್ಡ್ ಕಾರ್ಡ್ ಎಂಟ್ರಿ ಕೊಟ್ಟಿದ್ದ ಮಾಡೆಲ್ ಮತ್ತು ಇನ್ಫ್ಲುಯೆನ್ಸರ್ ವೇದಲಕ್ಷ್ಮಿ, ಇದೀಗ ಮತ್ತೊಂದು ವಿವಾದದ ಕೇಂದ್ರಬಿಂದುವಾಗಿದ್ದಾರೆ. ಈ ಹಿಂದೆ, ಲೆಸ್ಬಿಯನ್ ಜೋಡಿ ಆದಿಲಾ ಮತ್ತು ನೂರಾ ವಿರುದ್ಧ ವೇದಲಕ್ಷ್ಮಿ ನೀಡಿದ್ದ ಹೇಳಿಕೆಗಳು ಬಿಗ್ ಬಾಸ್ ಮನೆಯೊಳಗೆ ಮತ್ತು ಹೊರಗೆ ದೊಡ್ಡ ಚರ್ಚೆಗೆ ಕಾರಣವಾಗಿತ್ತು. “ಇಂಥವರನ್ನು ಮನೆಗೆ ಸೇರಿಸಿಕೊಳ್ಳುವುದಿಲ್ಲ” ಎಂದು ಅವರು ಹೇಳಿದ್ದರು.

ವೇದಲಕ್ಷ್ಮೀ ಹೇಳಿದ್ದೇನು?

ಮಗ ಹುಟ್ಟಿದ ನಂತರ ಈ ಬಗ್ಗೆ ಹೆಚ್ಚು ತಿಳಿದುಕೊಂಡೆ ಎಂದೂ ವೇದಲಕ್ಷ್ಮಿ ಹೇಳಿಕೊಂಡಿದ್ದರು. ಅವರ ಈ ಹೇಳಿಕೆಯನ್ನು ಮೇಕಪ್ ಆರ್ಟಿಸ್ಟ್ ಮತ್ತು ಟ್ರಾನ್ಸ್‌ವುಮನ್ ರಂಜು ರಂಜಿಮಾರ್ ತೀವ್ರವಾಗಿ ಟೀಕಿಸಿದ್ದರು. “ನಾಯಿಗಳು, ಅಲ್ಲೇ ಇರಿ ಅನ್ನೋ ಧ್ವನಿ ಅದಾಗಿತ್ತು. ನನ್ನ ಹೆಸರು ಹೇಳಿ ಹಾಗೆ ಮಾತಾಡಿದ್ದರೆ, ಕೇಸ್ ಎಲ್ಲಿಯವರೆಗೆ ಹೋದರೂ ಸರಿ, ಕೆನ್ನೆಗೆ ಬಾರಿಸದೇ ನಾನು ಅಲ್ಲಿಂದ ಬರುತ್ತಿರಲಿಲ್ಲ” ಎಂದು ರಂಜು ಒಂದು ಸಂದರ್ಶನದಲ್ಲಿ ಕಿಡಿಕಾರಿದ್ದರು. ಅಷ್ಟೇ ಅಲ್ಲ, “ಒಂದು ವೇಳೆ ಜಾನ್ಮಣಿ ಅಲ್ಲಿದ್ದಿದ್ದರೆ, ಲಕ್ಷ್ಮಿಯ ಕಥೆ ಮುಗಿದುಹೋಗುತ್ತಿತ್ತು” ಎಂದೂ ಹೇಳಿದ್ದರು. ಇದೀಗ ರಂಜು ಅವರ ಈ ಮಾತುಗಳಿಗೆ ವೇದಲಕ್ಷ್ಮಿ ತಿರುಗೇಟು ನೀಡಿದ್ದಾರೆ.

ಒಂದು ವಿಡಿಯೋದಲ್ಲಿ ಮಾತನಾಡಿರುವ ವೇದಲಕ್ಷ್ಮಿ, “LGBTQ ಅಂದ್ರೆ ಏನು? ಸ್ವಲ್ಪ ವಿವರಿಸ್ತೀರಾ? ಇದರಲ್ಲಿ ‘L’, ‘G’ ಯನ್ನು, ‘G’, ‘B’ ಯನ್ನು, ‘T’, ‘Q’ ಅನ್ನು ನಾರ್ಮಲೈಸ್ ಮಾಡಲಾಗುತ್ತಿದೆಯೇ? ಒಬ್ಬರಿಗೊಬ್ಬರು ಸಪೋರ್ಟ್ ಮಾಡ್ತಾರಾ? ರಂಜು ಅವರಿಗೆ ಇದು ಕೇವಲ LGBTQ ಇರಬಹುದು. ಆದರೆ ನನಗೆ ಇದು LGBTIQQ ಸೇರಿದಂತೆ 72 ವಿಭಾಗಗಳಿರುವ ಒಂದು ದೊಡ್ಡ ಸಮುದಾಯ. ಇದರಲ್ಲಿ ಒಂದು ಗುಂಪನ್ನು ನಾನು ಒಪ್ಪಿಕೊಂಡರೆ, ಉಳಿದ ಎಲ್ಲರನ್ನೂ ಒಪ್ಪಿಕೊಳ್ಳಬೇಕಾಗುತ್ತದೆ. ನನ್ನಿಂದ ಅದು ಸಾಧ್ಯವಿಲ್ಲ. ಈ ಮಾತನ್ನು ರಂಜು ಮುಂದೆ ಮಾತ್ರವಲ್ಲ, ಯಾರ ಮುಂದೆ ಬೇಕಾದರೂ ಹೇಳೋಕೆ ನನಗೆ ಹಿಂಜರಿಕೆ ಇಲ್ಲ. ಇನ್ನು ನಾನು ಹೀಗೆ ಹೇಳುವಾಗ ಜಾನ್ಮಣಿ ಅಲ್ಲಿದ್ದಿದ್ದರೆ ಅಂತೆಲ್ಲಾ ಹೇಳಿ ನಗಿಸಬೇಡಿ ರಂಜು,” ಎಂದು ಹೇಳಿದ್ದಾರೆ.

“ರಂಜು ಅವರಂತಹ ವ್ಯಕ್ತಿಯಿಂದ ಜಗತ್ತು ಕೇಳಲು ಬಯಸುವ ಮಾತುಗಳಲ್ಲ ಅವು. ಅದಕ್ಕಾಗಿಯೇ ಇರಬೇಕು, ರಂಜು ಆ ಪ್ರೋಮೋ ವಿಡಿಯೋವನ್ನು ಹಿಂಪಡೆಯಬೇಕಾಗಿ ಬಂದಿದ್ದು. ಈ ದೇಶದಲ್ಲಿ ಪ್ರತಿಯೊಬ್ಬ ವ್ಯಕ್ತಿಗೂ ಅವರದ್ದೇ ಆದ ದೃಷ್ಟಿಕೋನ, ವೈಯಕ್ತಿಕ ಸ್ವಾತಂತ್ರ್ಯ ಮತ್ತು ಮೂಲಭೂತ ಹಕ್ಕುಗಳಿವೆ,” ಎಂದು ವೇದಲಕ್ಷ್ಮಿ ವಿಡಿಯೋದಲ್ಲಿ ತಮ್ಮ ನಿಲುವನ್ನು ಸ್ಪಷ್ಟಪಡಿಸಿದ್ದಾರೆ.



Source link

Leave a Reply

Your email address will not be published. Required fields are marked *