Headlines

ಬಗೆದಷ್ಟು ಬಯಲಾಗುತ್ತಿದೆ ಲಕ್ಕುಂಡಿ ರಹಸ್ಯ: ಸಿದ್ಧರ ಗುಹೆಯೊಳಗಿದೆ ಅಪಾರ ಸಂಪತ್ತು?

ಬಗೆದಷ್ಟು ಬಯಲಾಗುತ್ತಿದೆ ಲಕ್ಕುಂಡಿ ರಹಸ್ಯ: ಸಿದ್ಧರ ಗುಹೆಯೊಳಗಿದೆ ಅಪಾರ ಸಂಪತ್ತು?


ಗದಗ, ಫೆಬ್ರವರಿ 09: ಪ್ರಾಚೀನ ಲಕ್ಕುಂಡಿಯಲ್ಲಿ (ಲಕ್ಕುಂಡಿ) ನಿಧಿ ಸಿಕ್ಕ ಬೆನ್ನಲ್ಲೇ ಬಗೆದಷ್ಟು ರಹಸ್ಯಗಳು ಬಯಲಾಗುತ್ತಿವೆ. ಇದೀಗ ನಾಗಾವಿ ಗ್ರಾಮದ ಗುಡ್ಡದಲ್ಲಿನ ನಿಗೂಢ ಗುಹೆಯ ಬಾವಿಗೂ ಲಕ್ಕುಂಡಿಯ ಮುಸುಕಿನ ಬಾವಿಗೆ ಸಂಬಂಧವಿದೆ. ನಾಗಾವಿ ಗುಹೆಯಲ್ಲಿನ ಬಾವಿಯಲ್ಲಿ ವಸ್ತು ತೇಲಿ ಬಿಟ್ಟರೆ ಅದು ಲಕ್ಕುಂಡಿ ಮುಸುಕಿನ ಬಾವಿಗೆ ಹೋಗ್ತಾಯಿತ್ತಂತೆ. ಸಿದ್ಧಿ ಪುರುಷರು ವಾಸವಾಗಿದ್ದ ಗುಹೆಯಲ್ಲಿ ಅಪಾರ ನಿಧಿ ಸಂಪತ್ತಿಗೆ ಹಾವಿನ ಕಾವಲು ಇದೆಯಂತೆ. ಚಿನ್ನದ ನಿಧಿ ಮುಟ್ಟಲು ಬಿಡೋದಿಲ್ಲ. ಇನ್ನೊಂದೆಡೆ ಶತಮಾನಗಳ ಹಿಂದೆ ಆಕಳೊಂದು ಈ ಗುಹೆಯೊಳಗೆ ಹೋಗಿ ಸಿದ್ಧಿ ಪುರುಷರಿಗೆ ಹಾಲು ಕೊಟ್ಟು ಬರ್ತಿತ್ತಂತೆ. ಈ ರೋಚಕ, ವಿಸ್ಮಯ ಚಿನ್ನದ ನಿಧಿಯ ಗುಹೆಯೊಳಗೆ ನಿಜವಾಗಿಯೂ ರಹಸ್ಯ ಅಡಗಿದೆ.

ಬಗೆದಷ್ಟು ಬಯಲಾಗುತ್ತಿವೆ ಐತಿಹಾಸಿಕ ಲಕ್ಕುಂಡಿ ರಹಸ್ಯ

ಐತಿಹಾಸಿಕ ಲಕ್ಕುಂಡಿಯಲ್ಲಿ ನಿಧಿ ಸಿಕ್ಕಲ್ಲೇ ಗದಗ ಜಿಲ್ಲೆಯಲ್ಲಿ ಹತ್ತಾರು ರಹಸ್ಯಗಳು ಬಯಲಾಗುತ್ತಿವೆ. ಲಕ್ಕುಂಡಿಯನ್ನ ರಾಜಧಾನಿ ಮಾಡಿಕೊಂಡು ಅರಸರು ಆಳ್ವಿಕೆ ಮಾಡಿದ್ದರು. ಅಪಾರ ಪ್ರಮಾಣದಲ್ಲಿ ಚಿನ್ನವನ್ನ ಸಂಗ್ರಹಿಸಿದ್ದರು. ಟಂಕಸಾಲೆಯಲ್ಲಿ ನಾಣ್ಯಗಳ ಮುದ್ರಣ ಮಾಡುವಂತೆ. ಅರಸ ಮನೆತನಗಳು ಕಪ್ಪತ್ತಗುಡ್ಡದಿಂದ ಚಿನ್ನ ತಗೆದಯ ವಸ್ತು. ರಾಜ, ಮಹಾರಾಜ ಆಳ್ವಿಕೆಯ ಸಮಯದಲ್ಲಿ ಇಂದ್ರನ ಅಮರಾವತಿಗಿಂತ ಸಂಪತ್ತು ಇತ್ತು ಎಂದು ಇತಿಹಾಸಕಾರರು ಹೇಳುತ್ತಾರೆ.

ಇದನ್ನೂ ಓದಿ: ಲಕ್ಕುಂಡಿಯಲ್ಲಿ ನಿಧಿ ರಹಸ್ಯ: ಬಸವಣ್ಣ ದೇವಸ್ಥಾನದಲ್ಲಿ ಸರ್ಪದ ಪೊರೆ ಪತ್ತೆ

ಈ ಇತಿಹಾಸ ಸತ್ಯ ಅನ್ನೋದು ಒಂದೊಂದಾಗಿ ಹುಡುಕುತ್ತ ಹೊರಟಿದೆಯಾ ಅನ್ನೋ ಅನುಮಾನ ಬರುತ್ತಿದೆ. ಐತಿಹಾಸಿಕ ಲಕ್ಕುಂಡಿ ಗ್ರಾಮದ ಸಂಪತ್ತು ಆಯ್ತು, ಕಪ್ಪತ್ತುಡ್ಡದ ನಿಗೂಢ ಗುಹೆಗಳ ಸಂಪತ್ತು ಆಯ್ತು. ಐತಿಸಹಾಸಿ ದೇವಸ್ಥಾನಗಳ ಸಂಪತ್ತು ರಹಸ್ಯ ಬಯಲಾಯ್ತು. ಆದರೂ ಸಿರಿಸಂಪತ್ತಿನ ರಹಸ್ಯ ಮಾತ್ರ ಇನ್ನೂ ಅಂತ್ಯವಾಗಿಲ್ಲ.

ಇದೀಗ ಐತಿಹಾಸಿಕ ಲಕ್ಕುಂಡಿ ಗ್ರಾಮಕ್ಕೂ ನಾಗಾವಿ ಗುಡ್ಡದ ಗುಹೆಗೆ ಸಂಬಂಧವಿದೆಯಂತೆ. ಗದಗ ತಾಲೂಕಿನ ನಾಗಾವಿ ಗ್ರಾಮದ ಯಲ್ಲಮ್ಮ ದೇವಿಯ ದೇವಸ್ಥಾನದ ಬಳಿಯ ಗುಡ್ಡದಲ್ಲಿ ನಿಗೂಢ, ವಿಸ್ಮಯ ಗುಹೆ ಇದೆ. ಈ ಗುಹೆಯಲ್ಲಿ ರಹಸ್ಯ ಬಾವಿ ಇದೆ. ಆ ಬಾವಿಯಲ್ಲಿ ಅರಿಶಿನ ಹಾರ, ನಿಂಬೆಹಣ್ಣು ಬಿಟ್ಟರೆ ಅದು ಲಕ್ಕುಂಡಿಯ ಸಿದ್ದರ ಬಾವಿಯಲ್ಲಿ ಗೋಚರ ಆಗುತ್ತೆ. ಲಕ್ಕುಂಡಿಯ ಮುಸ್ಕಿನಬಾವಿಗೂ ನಾಗಾವಿ ಗುಹೆಗೆ ಲಿಂಕ್ ಇದೆ. ಗುಹೆಯಲ್ಲಿ ಅಪಾರ ಪ್ರಮಾಣ ಚಿನ್ನದ ನಿಧಿ ಇದೆ. ನಿಧಿಗೆ ಸರ್ಪಕಾವಲು ಕಾಯುತ್ತಿದೆ ಎಂದು ಈ ಹಿಂದೊಮ್ಮೆ ಗುಹೆಯಲ್ಲಿ ಹೋಗಿ ಬಂದಿರುವ ಗ್ರಾಮದ ಹಿರಿಯರು ಗೋವಿಂದರಡ್ಡಿ ಮರಡ್ಡಿ ಅವರ ಮಾತು.

ಸಿದ್ದಿ ಪುರಷರಿಗೆ ಹಾಲು ನೀಡುತ್ತಿದ್ದ ಕಾಮಧೇನು

ನಾಗಾವಿಯ ನಿಗೂಢ ಗುಹೆ. ಇಲ್ಲಿ ಸಿದ್ಧಿಪುರುಷರು ವಾಸವಾಗಿದ್ರಂತೆ. ನಿತ್ಯ ನಸುಕಿನ ಜಾವ ಭಜನೆ, ಜಾಗಟೆ, ಶಂಕ ನಾದದ ಶಬ್ದ ಗ್ರಾಮಕ್ಕೆ ಕೇಳುತ್ತಿದೆ. ಆಗ ಸಿದ್ಧರು ಭಜನೆ ಮಾಡ್ತಾಯಿದ್ದಾರೆ. ನಸುಕಾಯಿತು ಎಲ್ಲರೂ ಏಳಿ ಅಂತ ಹೇಳ್ತಾಯಿದ್ರಂತೆ. ಆ ಗುಹೆಯಲ್ಲಿ ಬಾವಿ ಇದೆ ಬಾವಿಯ ನೀರಿನಿಂದ ದೀಪ ಹಚ್ಚಿ ತಪಸ್ಸು ಮಾಡ್ತಿದ್ರು. ಗುಹೆಯಲ್ಲಿದ್ದ ಸಿದ್ದರಿಗೆ ನಿತ್ಯ ಒಂದು ಹಸು ಹೋಗಿ ಹಾಲು ನೀಡಿ ಬರುತ್ತಿತ್ತು.

ಆ ಹಸು ಮನೆಗೆ ಹೋದಾಗ ಹಾಲು ಕೊಡದ. ಹೀಗಾಗಿ ಹಸುಗಳನ್ನು ಮೆಯ್ಯಲು ಹೋಗುತ್ತಿದ್ದ ಕೋರಿಯವರ ಮನೆಯ ವ್ಯಕ್ತಿ ಒಂದು ದಿನ ಹಸುವಿನೊಂದಿಗೆ ಗುಹೆಗೆ ಹೋಗಿದ್ದಾನೆ. ಅಲ್ಲಿಯ ಸಿದ್ದರನ್ನ ನೋಡಿ ನಾನು ಇಲ್ಲೇ ಇರ್ತಿನಿ ಅಂದಿದ್ದಾನೆ. ಹಸು ಮರಳಿ ಮನೆಗೆ ಬಂದಿದೆ ಆದರೆ ದನ ಕಾಯಲು ಹೋದ ಮನುಷ್ಯ ಮಾತ್ರ ಮರಳಿ ಬಂದಿಲ್ಲ. ಆ 20 ವರ್ಷದ ಬಳಿಕ ತಾಯಿನ್ನ ನೋಡು ಸಿದ್ದರ ಕೇಳಿ ಹೋಗ್ತಾನೆ. ಸಿದ್ದರು ಇಲ್ಲಿಯ ಸಂಪತ್ತು ತೆಗೆದುಕೊಳ್ಳಬೇಡಿ. ಸಂಪತ್ತು ಇರುವ ಬಗ್ಗೆ ಯಾರಿಗೂ ಹೇಳಬೇಡಿ ಅಂದಿದ್ರಂತೆ. ಆತ ಮನೆಗೆ ಹೋದಾಗ ತಾಯಿ ಗುರುತು ಹಿಡಿದಿಲ್ಲ. ಹೀಗಾಗಿ ಗ್ರಾಮದ ಕೆಲವರಿಗೆ ತಾನು ಗುಹೆಯಲ್ಲಿ ಇದೆ ಅಂತಾ ಹೇಳಿದ್ದಾನೆ. ಗುಹೆಯ ರಹಸ್ಯದ ಬಗ್ಗೆಯೂ ಗ್ರಾಮದಲ್ಲಿ ಮಾಹಿತಿ ನೀಡಿದ್ದಾನೆ. ನಂತರ ಗುಹೆಗೆ ಬಂದಿದ್ದಾನೆ ಆದರೆ ಸಿದ್ದರು ಗುಹೆಗೆ ಬಂದ್ರೆ ಮರಳಿ ನಿಂಗೆ ಹೋಗಲು ಆಗೋದಿಲ್ಲವೆಂದಿದ್ದಾರೆ. ಹೀಗೆ ಸಾಕಷ್ಟು ಕುತೂಹಲಕಾರಿ ಸಂಗತಿಗಳನ್ನು ಗ್ರಾಮಸ್ಥರು ಹೇಳುತ್ತಿದ್ದಾರೆ.

ಇದನ್ನೂ ಓದಿ: ಲಕ್ಕುಂಡಿ ಚೌಕಿಮಠ ಕುಟುಂಬಸ್ಥರ ಮೂಲ, ಹಿನ್ನೆಲೆ ಏನು ಗೊತ್ತಾ? ಇಲ್ಲಿದೆ ಇಂಟ್ರೆಸ್ಟಿಂಗ್ ಮಾಹಿತಿ

ಪ್ರಾಚೀನ ಲಕ್ಕುಂಡಿ ಗ್ರಾಮದಲ್ಲಿ ನಿಧಿ ಸಿಕ್ಕ ಬೆನ್ನಲ್ಲೇ ಸಾಕಷ್ಟು ರಹಸ್ಯಗಳು ಬಯಲಾಗುತ್ತಿವೆ. ಇದೀಗ ಲಕ್ಕುಂಡಿ ಗ್ರಾಮಕ್ಕೆ ಹಾಗೂ ನಾಗಾವಿ ಗ್ರಾಮಕ್ಕೆ ಲಿಂಕ್ ಇದೆ. ಒಟ್ಟಿನಲ್ಲಿ ಸಿದ್ದಿ ಪುರುಷರು ವಾಸ ಮಾಡಿರುವ ಗುಹೆಯಲ್ಲಿ ಅಪಾರ ಪ್ರಮಾಣದ ನಿಧಿ ಇರುವ ಅನುಮಾನ ಕಾಡುತ್ತಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.



Source link

Leave a Reply

Your email address will not be published. Required fields are marked *