Headlines

ನೀವೆಲ್ಲಾ ಒಂಟಿಯಾದ್ರೆ ಎಲ್ಲಿ ಹೋಗ್ತೀರಿ? ಬೆಂಗಳೂರಲ್ಲಿ ಸಮುದ್ರಕ್ಕಾಗಿ Rakshita Shetty ಹುಡುಕಾಟ!

ನೀವೆಲ್ಲಾ ಒಂಟಿಯಾದ್ರೆ ಎಲ್ಲಿ ಹೋಗ್ತೀರಿ? ಬೆಂಗಳೂರಲ್ಲಿ ಸಮುದ್ರಕ್ಕಾಗಿ Rakshita Shetty ಹುಡುಕಾಟ!



ನೀವೆಲ್ಲಾ ಒಂಟಿಯಾದ್ರೆ ಎಲ್ಲಿ ಹೋಗ್ತೀರಿ? ಬೆಂಗಳೂರಲ್ಲಿ ಸಮುದ್ರಕ್ಕಾಗಿ Rakshita Shetty ಹುಡುಕಾಟ!
<p>ಬಿಗ್​ಬಾಸ್​ ರನ್ನರ್​ ಅಪ್​ ರಕ್ಷಿತಾ ಶೆಟ್ಟಿ, ಮುಂಬೈ ಮತ್ತು ಮಂಗಳೂರಿನಲ್ಲಿ ಸಮುದ್ರ ನೋಡಿ ಬೆಳೆದಿದ್ದು, ಬೆಂಗಳೂರಿನಲ್ಲಿ ಸಮುದ್ರ ಇಲ್ಲದಿರುವುದನ್ನು ಕಂಡು ಆಶ್ಚರ್ಯಪಟ್ಟಿದ್ದಾರೆ. ಬೇಸರವಾದಾಗ &nbsp;ಬೆಂಗಳೂರಿನ ಜನರು ಎಲ್ಲಿಗೆ ಹೋಗುತ್ತಾರೆ ಎಂದು ಪ್ರಶ್ನಿಸಿದ್ದಾರೆ.</p><img><p>ಬಿಗ್​ಬಾಸ್​ ರನ್ನರ್​ ಅಪ್​ ರಕ್ಷಿತಾ ಶೆಟ್ಟಿ (Bigg Boss Rakshita Shetty) ಸದ್ಯ ಸಕತ್​ ಬಿಜಿಯಾಗಿದ್ದಾರೆ. ಬಿಗ್​ಬಾಸ್​​ ಮುಗಿದು ಕೆಲ ವಾರ ಆಗಿದ್ರೂ ಇವರಿಗೆ ಸಕತ್​ ಡಿಮಾಂಡ್​ ಇದೆ.</p><img><p>ಓದಿ, ಬೆಳೆದದ್ದು ಎಲ್ಲಾ ಮುಂಬೈನಲ್ಲೇ ಆಗಿ, ಇದೀಗ ಕರಾವಳಿಯ ಪುಟ್ಟಿ ಎನ್ನಿಸಿಕೊಂಡಿರೋ ರಕ್ಷಿತಾ ಶೆಟ್ಟಿ, ಮುಂಬೈನಲ್ಲೂ ಸಮುದ್ರ ನೋಡಿದಾಕೆ, ಮಂಗಳೂರಿನಲ್ಲೂ ನೋಡಿದಾಕೆ. ಅದಕ್ಕಾಗಿಯೇ ಎಲ್ಲಾ ಊರುಗಳಲ್ಲಿಯೂ ಸಮುದ್ರ ಇದೇ ಎಂದೇ ಅಂದುಕೊಂಡಿದ್ದರಂತೆ!</p><img><p>’ಬಿಗ್​ಬಾಸ್​​ಗೆಂದು ಬೆಂಗಳೂರಿಗೆ ಬಂದಾಗಲೇ ಗೊತ್ತಾಯ್ತು, ಇಲ್ಲಿ ಸಮುದ್ರ ಇಲ್ಲ ಎಂದು. ಕೇಳಿ ತುಂಬಾ ಆಶ್ಚರ್ಯ ಆಯ್ತು’ ಎಂದಿದ್ದಾರೆ ರಕ್ಷಿತಾ.</p><img><p>ನಾನು ಊರಲ್ಲಿ ತುಂಬಾ ಬೇಜಾರು ಆದಾಗ, ಒಬ್ಬಳೇ ಇದ್ದಾಗ ಸಮುದ್ರದ ಹತ್ತಿರ ಹೋಗ್ತೇನೆ. ಬೆಂಗಳೂರು ಮಂದಿ ನೀವು ಬೇಜಾರು ಆದಾಗ ಎಲ್ಲಿಗೆ ಹೋಗ್ತೀರಿ, ಸಮುದ್ರನೇ ಇಲ್ವಲ್ಲಾ ಎಂದು ಪ್ರಶ್ನಿಸಿದ್ದಾರೆ ರಕ್ಷಿತಾ!</p><img><p>ಈ ಮೂಲಕ, ಬೆಂಗಳೂರಿಗರ ಬಗ್ಗೆ ರಕ್ಷಿತಾ ಶೆಟ್ಟಿಗೆ ತುಂಬಾ ನೋವಾಗ್ತಿದೆ ಎನ್ನಿಸುವಂತೆ ಕಾಣುತ್ತಿದೆ. ಸಮುದ್ರ ಇರೋದೇ ಒಂಟಿತನ ಕಳೆಯಲು ಎಂದು ಅವರು ಭಾವಿಸಿದ್ದು, ಬೆಂಗಳೂರಿಗರು ಪಾಪ ಏನ್​ ಮಾಡ್ತಾರೆ ಎನ್ನುವುದು ಅವರ ಚಿಂತೆ!</p><img><p>ಅವರ ಈ ಪ್ರಶ್ನೆಗೆ ಕೆಲವರು ಗೋವಾಕ್ಕೆ ಹೋಗ್ತೇವೆ ಎಂದರೆ, ಮತ್ತೆ ಕೆಲವರು ಬೆಂಗಳೂರಿನಲ್ಲಿ ಇರುವ ಹಲಸೂರು ಕೆರೆ, ಸ್ಯಾಂಕಿ ಟ್ಯಾಂಕ್​ ಹೆಸರು ಹೇಳಿದ್ದಾರೆ. ಮತ್ತೆ ಕೆಲವರು ಕಮೆಂಟ್​ನಲ್ಲಿ ಬಾರ್​ಗೆ ಎಂದು ತಮಾಷೆಯ ಉತ್ತರ ಕೊಟ್ಟಿದ್ದಾರೆ.</p>



Source link

Leave a Reply

Your email address will not be published. Required fields are marked *