
ಸಂಜಯ್ನ ಸಂಚಿನಿಂದ ತಾನು ಫೇಲ್ ಆಗಿದ್ದೇನೆಂದು ಕುಸಿದು ಹೋಗಿದ್ದ ನಿಧಿಗೆ ಈಗ ನ್ಯಾಯ ಸಿಕ್ಕಿದೆ. ಎಲ್ಲರ ಮುಂದೆ ಸತ್ಯವನ್ನು ಬಯಲು ಮಾಡಿದ ಕರ್ಣ, ನಿಧಿಯೇ ಕಾಲೇಜಿನ ಟಾಪರ್ ಎಂದು ಸಾಬೀತುಪಡಿಸಿದ್ದಾನೆ. ಇದರಿಂದ ಸಂತಸಗೊಂಡ ನಿಧಿ, ಸರ್ಜನ್ ಆಗಿ ಹೊಸ ಜೀವನ ಆರಂಭಿಸಲಿದ್ದಾಳೆ.<img><p>ಕರ್ಣ ಸೀರಿಯಲ್ನಲ್ಲಿ (Karna Serial) ನಿಧಿ ಫೇಲ್ ಆಗಿರುವಂತೆ ಬಿಂಬಿಸಿದ್ದ ಸಂಜಯ್, ತಾನೇ ಕಾಲೇಜಿನ ಟಾಪರ್ ಎಂದು ಹೇಳಿದ್ದ. ಇದರಿಂದ ನಿಧಿ ಕುಸಿದು ಹೋಗಿದ್ದಳು. ಸಾಲದು ಎನ್ನುವುದಕ್ಕೆ ಸಂಜಯ್ ಆಕೆಯನ್ನು ಅವಮಾನ ಮಾಡುತ್ತಿದ್ದ.</p><img><p>ಇದೀಗ ಕರ್ಣ ಎಲ್ಲವನ್ನೂ ಬಹಿರಂಗ ಮಾಡಿದ್ದಾನೆ. ಅವನಿಗೆ ಅಸಲಿಯತ್ತು ಗೊತ್ತಾಗಿದೆ. ಎಲ್ಲರನ್ನೂ ಹಾಲ್ಗೆ ಕರೆದಿದ್ದ ಕರ್ಣ. ಎಲ್ಲರ ಎದುರೇ ಸತ್ಯವನ್ನು ಹೇಳಿದ್ದಾನೆ.</p><img><p>ನಿಧಿ ಕಾಲೇಜಿನ ಟಾಪರ್ ಆಗಿದ್ದಾರೆ. ಯಾರೋ ಮಾಡಿದ ಸಂಚಿಗೆ ಅವರು ಬಲಿಯಾಗಿದ್ದರು ಎಂದಾಗ ಸಂಜಯ್ ಮತ್ತು ನಯನತಾರಾ ಮುಖ ಇಂಗು ತಿಂದ ಮಂಗನಂತಾಗಿದೆ.</p><img><p>ಬಳಿಕ, ಕರ್ಣ ನಿಧಿಯ ಬಳಿ ಬಂದು, ನೀವು ನಾಳೆಯಿಂದ ಸರ್ಜನ್ ಆಗಿ ಜಾಯಿನ್ ಆಗಬಹುದು ಎಂದಿದ್ದಾನೆ. ಇದರಿಂದ ನಿಧಿ ಉಬ್ಬಿ ಹೋಗಿದ್ದಾಳೆ.</p><img><p>ಕಾಲೇಜಿನ ಟಾಪರ್ ಆಗಿರೋ ಕಾರಣ, ನನಗೆ ಮೆರವಣಿಗೆ ಮಾಡಬೇಕು ಎಂದಾಗ, ಕರ್ಣ ಆಕೆಯನ್ನು ಎತ್ತಿ ಮುದ್ದಾಡಿದ್ದಾನೆ.</p><img><p>ಈಗಲಾದರೂ ಇವರಿಬ್ಬರ ಲವ್ ಸ್ಟೋರಿ ಬಯಲಾಗುತ್ತಾ ಎನ್ನುವುದು ಸದ್ಯಕ್ಕಿರುವ ಕುತೂಹಲ. ಇಷ್ಟೆಲ್ಲಾ ಆದ ಮೇಲೂ ನಿತ್ಯಾಗೆ ಸ್ವಲ್ಪವೂ ಡೌಟ್ ಬರಲ್ಲ ಎಂದರೆ ಇದು ಸ್ವಲ್ಪ ವಿಚಿತ್ರ ಎನ್ನಿಸಿದರೂ ಸದ್ಯದ ಮಟ್ಟಿಗೆ ಒಪ್ಪಿಕೊಳ್ಳಲೇಬೇಕು.</p>
Source link
Karna Serial ರೋಚಕ ಟ್ವಿಸ್ಟ್: ಫೇಲ್ ಆಗಿದ್ದ ನಿಧಿ ಈಗ ಸರ್ಜನ್! ಬಯಲಾಗತ್ತಾ ಲವ್ ಸೀಕ್ರೆಟ್?